ಕಾಲಿನ ಮೇಲೆ ಯಲ್ಲಮ್ಮ ಟ್ಯಾಟೂ ಮತ್ತು ಕ್ಷಮಾಪಣೆ ಪತ್ರ 
ಜಿಲ್ಲಾ ಸುದ್ದಿ

ಕಾಲಿನ ಮೇಲೆ ಯಲ್ಲಮ್ಮ ದೇವಿ ಟ್ಯಾಟೂ: ಅಸ್ಟ್ರೇಲಿಯಾ ಪ್ರಜೆ ಕ್ಷಮಾಪಣೆ

ಅಸ್ಟ್ರೇಲಿಯಾ ಪ್ರಜೆ ಕಾಲಿನ ಮೇಲೆ ಹಿಂದೂ ದೇವತೆ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆ ಕಿರುಕುಳ ನೀಡಿ, ಬೆದರಿಕೆ ಹಾಕಿ ಕ್ಷಮಾಪಣೆ ಕೇಳಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಅಸ್ಟ್ರೇಲಿಯಾ ಪ್ರಜೆ ಕಾಲಿನ ಮೇಲೆ ಹಿಂದೂ ದೇವತೆ ಟ್ಯಾಟೂ ಹಾಕಿಸಿಕೊಂಡಿದ್ದಕ್ಕೆಕಿರುಕುಳ ನೀಡಿ, ಬೆದರಿಕೆ ಹಾಕಿದ  ಹಿನ್ನೆಲೆಯಲ್ಲಿ ಭಯಗೊಂಡ ಆತ ಕ್ಷಮಾಪಣೆ ಕೇಳಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮ್ಯಾಥ್ಯೂ ಗೋರ್ಡನ್ ಎಂಬ ಆಸ್ಟ್ರೇಲಿಯನ್ ತನ್ನ ಪ್ರಿಯತಮೆ  ಜೊತೆ ನಗರದ ರೆಸಿಡೆನ್ಸಿ ರಸ್ತೆಯ ಹೊಟಲ್ ವೊಂದಕ್ಕೆ ಬಂದಿದ್ದರು. ಇವರು ಕಾಲಿನ ಮೇಲಿನ ಮೀನ ಖಂಡದ ಮೇಲೆ ಯಲ್ಲಮ್ಮ ದೇವಿಯ ಟ್ಯಾಟೂ ಹಾಕಿಸಿಕೊಂಡಿದ್ದರು. ಇದನ್ನು ಗಮನಿಸಿದ  ಶಾಂತಿನಗರದ ಬಿಜೆಪಿಯ ನಾಯಕ  ರಮೇಶ್ ಯಾದವ್  ಮತ್ತು ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಮ್ಯಾಥ್ಯೂ ಅವರ ಜತೆ ವಾಗ್ವಾದಕ್ಕಿಳಿದರು. ಜೊತೆಗೆ ರಮೇಶ್ ಯಾದವ್ ಬೆಂಬಲಿಗರು ಕಾಲಿನ ಚರ್ಮವನ್ನು ಕೀಳುವುದಾಗಿ ಬೆದರಿಕೆ ಹಾಕಿದ್ದರಿಂದ ಮ್ಯಾಥ್ಯೂ ಆತಂಕಕ್ಕೀಡಾಗಿದ್ದರು.

ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ  ಪೊಲೀಸರು ಕೂಡ ಈ ರೀತಿ ಕಾಲಿನ ಮೇಲೆ ಯಲ್ಲಮ್ಮನ ಹಚ್ಚೆ ಹಾಕಿಸುವುದು  ಹಿಂದೂ ಧಾರ್ಮಿಕ ಭಾವನೆಗೆ  ಧಕ್ಕೆಯಾಗುತ್ತದೆಂದು ತಿಳಿಹೇಳಿದ ಮೇಲೆ ಮ್ಯಾಥ್ಯೂ ಕ್ಷಮಾಪಣೆ ಪತ್ರವನ್ನು ಬರೆದುಕೊಟ್ಟಿದ್ದಾರೆ.   ನನಗೆ ಈ ಚಿತ್ರದ ಮಹತ್ವ ಗೊತ್ತಿರಲಿಲ್ಲ. ನಾನು ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದೇನೆ. ಧಕ್ಕೆ ತಂದಿರುವುದಕ್ಕೆ ತೀವ್ರ ವಿಷಾದಿಸುತ್ತೇನೆ, ಇನ್ನು ಮುಂದೆ ಆ ರೀತಿ ಟ್ಯಾಟೂ ಹಾಕಿಸಿಕೊಳ್ಳುವುದಿಲ್ಲ  ಎಂದು ಪತ್ರದಲ್ಲಿ  ಮ್ಯಾಥ್ಯೂ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ನೆಲದಲ್ಲೇ ಸ್ತ್ರೀದ್ವೇಷ ಪ್ರದರ್ಶಿಸಿದ ತಾಲೀಬಾನ್ ವಿದೇಶಾಂಗ ಸಚಿವ!; ಸುದ್ದಿಗೋಷ್ಠಿಗೆ ಮಹಿಳೆಯರಿಗಿಲ್ಲ ಪ್ರವೇಶ; ಭುಗಿಲೆದ್ದ ಅಸಮಾಧಾನ!

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

ಭಾರತದ ಹಿತಾಸಕ್ತಿಗಳ ವಿರುದ್ಧ ಅಫ್ಘಾನಿಸ್ತಾನ ನೆಲ ಬಳಕೆಯಾಗಲ್ಲ, ನೀವು ಆಟ ಆಡಬೇಡಿ- ಪಾಕಿಸ್ತಾನಕ್ಕೆ ಅಫ್ಘಾನ್ ವಿದೇಶಾಂಗ ಸಚಿವರ ನೇರ ಎಚ್ಚರಿಕೆ!

ಚಿಕ್ಕಬಳ್ಳಾಪುರ: 'Miss U Chinna'; ಅಪ್ರಾಪ್ತ ಪ್ರೇಯಸಿಯ ದುಪ್ಪಟ್ಟದಿಂದಲೇ ಯುವಕ ನೇಣಿಗೆ ಶರಣು; Instagram Post Viral

ಬೆಂಗಳೂರಿನಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ

SCROLL FOR NEXT