ಇಂಡಸ್ ಇಂಡ್ ಬ್ಯಾಂಕ್ ಗೆ ಸೇರಿದ 50 ಲಕ್ಷ ರೂ ಕಳ್ಳತನ 
ಜಿಲ್ಲಾ ಸುದ್ದಿ

ಎಟಿಎಂಗೆ ತುಂಬಬೇಕಿದ್ದ ರೂ 50 ಲಕ್ಷ ಎಗರಿಸಿ ಪರಾರಿಯಾದ!

ಇಂಡಸ್ ಇಂಡ್ ಬ್ಯಾಂಕ್ ನ ಎಟಿಎಂಗೆ ಹಣ ತುಂಬಲು ನೇಮಕಗೊಂಡಿದ್ದ ಸಿಬ್ಬಂದಿಯೇ ಹಣ ದೋಚಿ ಪರಾರಿಯಾಗಿದ್ದಾನೆ.

ಬೆಂಗಳೂರು: ಇಂಡಸ್ ಇಂಡ್ ಬ್ಯಾಂಕ್ ನ ಎಟಿಎಂಗೆ ಹಣ ತುಂಬಲು ನೇಮಕಗೊಂಡಿದ್ದ ಸಿಬ್ಬಂದಿಯೇ ಹಣ ದೋಚಿ ಪರಾರಿಯಾಗಿದ್ದಾನೆ.
ನಗರದ ಎಂಜಿ ರಸ್ತೆಯಲ್ಲಿ ಬುಧವಾರ ಈ ಘಟನೆ ನಡೆದಿದೆ. ಹಣ ತುಂಬಲು ಬಂದಿದ್ದ ಸಹಾಯಕ ಸಿಬ್ಬಂದಿ ಮಹೇಶ್(21) ಎಂಬಾತನೇ ಈ ಕೃತ್ಯ ಎಸಗಿದಾಟ. ಎಟಿಎಂ ಗೆ ತುಂಬಲು ರೂ 1 ಕೋಟಿ ಹಣ ತರಲಾಗಿತ್ತು. ಅದರಲ್ಲಿ ಆರೋಪಿ ಮಹೇಶ್ ರೂ.50 ಲಕ್ಷ ದೋಚಿದ್ದು ಇನ್ನೂ ಅರ್ಧ ಹಣವನ್ನು ಹಾಗೆ ಬಿಟ್ಟು ಹೋಗಿದ್ದಾನೆ.
ಅಂದ್ರಳ್ಳಿ ಮೂಲದ ಆಟೋ ಚಾಲಕನ ಪುತ್ರ ನಂದಿನಿ ಲೇಔಟ್ ನಿವಾಸಿ ಮಹೇಶ್ ಕಳೆದ ಮೂರು ದಿನಗಳ ಹಿಂದೆ ಇಂಡಸ್ ಇಂಡ್ ಬ್ಯಾಂಕ್ ನಲ್ಲಿ ಹಣ ಹಾಕಲು ಸಹಾಯಕನಾಗಿ ಸೇರಿಕೊಂಡಿದ್ದ. ಬುಧವಾರ ಎಟಿಎಂ ಗೆ ಹಣ ತುಂಬಲು ಹೋಗಬೇಕಿತ್ತು. ಈ ವೇಳೆ ಬ್ಯಾಂಕ್ ಒಳಗಿನಿಂದ ಹಣ ತೆಗೆದುಕೊಂಡು ಬಂದ ಮಹೇಶ್ ವಾಹನದಲ್ಲಿಡುವ ಬದಲು ಅದರಲ್ಲಿದ್ದ 5 ಹಣದ ಬಾಕ್ಸ್ ತೆಗೆದುಕೊಂಡು ಪರಾರಿಯಾಗಿದ್ದಾನೆ. ಅಲ್ಲದೇ ಪರಾರಿಯಾಗುವ ಮೊದಲೇ ಹಣದ ವ್ಯಾನ್ ಭದ್ರತಾ ಸಿಬ್ಬಂದಿ ಮತ್ತು ಚಾಲಕನಿಗೆ ಶೌಚಾಲಯಕ್ಕೆ ಹೋಗುವುದಾಗಿ ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT