ಪ್ರೊ.ಕೆ.ಎಸ್.ಭಗವಾನ್ 
ಜಿಲ್ಲಾ ಸುದ್ದಿ

ಭಗವದ್ಗೀತೆ ಸುಡಲು ಹೇಳಿಲ್ಲ: ಭಗವಾನ್

ದೇಶದಲ್ಲಿ ವಿಚಾರವಾದಿ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ...

ಬೆಂಗಳೂರು: ದೇಶದಲ್ಲಿ ವಿಚಾರವಾದಿ ಸಾಹಿತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿ ವಿಚಾರವಾದಿಗಳ ವೇದಿಕೆ ವತಿಯಿಂದ ಪುರಭವನದ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮಾತನಾಡಿದ ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್, ಭಗವದ್ಗೀತೆ ಸುಡಲು ನಾನು ಎಲ್ಲಿಯೂ ಹೇಳಿಲ್ಲ.ಎಲ್ಲ ಮಹಿಳೆಯರು, ವೈಶ್ಯರು, ಶೂದ್ರರು ಪಾಪಿಗಳು ಎಂದು ಗೀತೆಯ ಅಧ್ಯಾಯವೊಂದರಲ್ಲಿ ಬರೆಯಲಾಗಿದೆ. ಇದನ್ನು ಭಗವದ್ಗೀತೆಯಿಂದ ತೆಗೆಯಬೇಕು ಅಥವಾ ಸುಡಬೇಕೆಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಆಹಾರ ನಿರ್ಧರಿಸುವ ಹಕ್ಕು ಯಾರಿಗೂ ಇಲ್ಲ. ಆಹಾರ ಪದ್ಧತಿಯಲ್ಲಿ ಮಾಂಸಾಹಾರವೂ ಒಂದು. ದನದ ಮಾಂಸ ತಿನ್ನುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ, ಇದನ್ನು ತಿಂದರೆ ತೊಂದರೆಯಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ದನ ಸಾಕಿರುವ ರೈತರಲ್ಲಿ ಇಂಥ ಮೂಢನಂಬಿಕೆಗಳಿಲ್ಲ. ಕೃಷಿಗೆ ಉಪಯುಕ್ತವಾಗದ ಪಶುಗಳನ್ನಷ್ಟೇ ಅವರು ಮಾರಾಟ ಮಾಡುತ್ತಾರೆ. ಇಲ್ಲಿ ಆರ್ಥಿಕ ವಿಚಾರ ಎದುರಾಗುತ್ತದೆಯೇ ಹೊರತು ಧರ್ಮದ ವಿಚಾರ ಅಲ್ಲ ಎಂದು ಹೇಳಿದರು. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ದನದ ಮಾಂಸ ಮಾರಾಟ ಪ್ರಬಲ ಉದ್ಯಮವಾಗಿದೆ ಎಂಬುದನ್ನು ಎಲ್ಲರೂ ಮನಗಾಣಬೇಕು. ದನದ ಮಾಂಸ ಸೇವನೆ ವಿರೋಧಿಸುವವರು ಕೋಳಿ, ಕುರಿ ಸೇವನೆಯನ್ನು ಏಕೆ ವಿರೋಧಿಸುವುದಿಲ್ಲ ಎಂದು ಪ್ರಶ್ನಿಸಿದ ಅವರು, ಎಲ್ಲ ಪ್ರಾಣಿಗಳಿಗೂ ಜೀವವಿರುತ್ತದೆ. ಕೇವಲ ದನದ ಮಾಂಸ ಸೇವನೆಗೆ ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ಅರ್ಥವಿಲ್ಲ. ಇತಿಹಾಸ ಕೆದಕಿದಾಗ ಬುದ್ಧ, ರಾಮ, ಕೃಷ್ಣ,ವಿವೇಕಾನಂದ ಮಾಂಸ ತಿನ್ನುತ್ತಿದ್ದರು. ಈ ಬಗ್ಗೆ ಆಧಾರಗಳೂ ಇವೆ. ಶ್ರೀರಾಮ ತಾನೂ ಮದ್ಯ ಕುಡಿದು ಸೀತೆಗೂ ಕುಡಿಸುತ್ತಿದ್ದ.ಜತೆಗೆ ಮಾಂಸವನ್ನೂ ತಿನ್ನುತ್ತಿದ್ದ ಎಂಬುದಕ್ಕೆ ಆಧಾರಗಳಿವೆ. ಈ ವಾಸ್ತವವನ್ನು ಹೇಳಿದರೆ ಕೊಲ್ಲುವ ಬೆದರಿಕೆ ಹಾಕುತ್ತಾರೆ ಎಂದು ಟೀಕಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT