ಅನಧಿಕೃತ ನೀರಿನ ಸಂಪರ್ಕ(ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ನೀರಿನ ಅನಧಿಕೃತ ಸಂಪರ್ಕ ಪಡೆದುಕೊಂಡೀರಿ ಜೋಕೆ!

ನಗರದ ನಿವಾಸಿಗಳೇ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರಿ ಜೋಕೆ! ಹೌದು... ಇಂತಹ ಖಡಕ್ ಎಚ್ಚರಿಕೆಯನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿಎಂ ವಿಜಯ್ ಭಾಸ್ಕರ್ ನೀಡಿದ್ದಾರೆ.

ಬೆಂಗಳೂರು: ನಗರದ ನಿವಾಸಿಗಳೇ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆದಿರಿ ಜೋಕೆ!
ಹೌದು... ಇಂತಹ ಖಡಕ್ ಎಚ್ಚರಿಕೆಯನ್ನು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಟಿಎಂ ವಿಜಯ್ ಭಾಸ್ಕರ್ ನೀಡಿದ್ದಾರೆ. ಅನಧಿಕೃತ ಸಂಪರ್ಕ ಪಡೆದವರಿಗೆ ದಂಡ, ದುಪ್ಪಟ್ಟು ಶುಲ್ಕ ವಿಧಿಸಲು ಅವರು ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಅಧಿಕೃತ ಸಂಪರ್ಕದ ಜೊತೆಗೆ ಮತ್ತೊಂದು ಅನಧಿಕೃತ ಬೈಪಾಸ್ ಸಂಪರ್ಕ ಹೊಂದಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಅವರು ಈ ನಿರ್ಧಾರ ಕೈಗೊಂಡರು. ಅಲ್ಲದೇ ಇದೇ ನೀತಿಯನ್ನು ಪಾಲಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ರಾಮಮೂರ್ತಿನಗರ ಸೇವಾಠಾಣೆ ಪ್ರದೇಶದಲ್ಲಿ ಸಮೀಕ್ಷೆ ನಡೆಸಿದರು. ಸುಬ್ರಮಣ್ಯಪುರ ಬಡಾವಣೆಯಲ್ಲಿ ಅನಧಿಕೃತ ಸಂಪರ್ಕಗಳ ವಿಷಯ ತಿಳಿದು, ಅಗತ್ಯ ಕ್ರಮ ಕೈಗೊಳ್ಳಲು ಸೂಚಿಸಿದರು. ಮಳೆ ನೀರು ಕೊಯ್ಲು ಅಳವಡಿಕೆ ಮಾಡದ, ಗೃಹ ಬಳಕೆ ಕಟ್ಟಡವನ್ನು ಅನ್ಯ ಬಳಕೆಗೆ ಬದಲಾವಣೆ ಮಾಡಿಕೊಂಡ ಪ್ರಕರಣವನ್ನು ಅವರು ಪತ್ತೆ ಹಚ್ಚಿದರು. ಕಾಲಮಿತಿಯಲ್ಲಿ ಅವುಗಳನ್ನು ಸರಿಪಡಿಸಿಕೊಳ್ಳಲು ಸೂಚಿಸಿದರು.
ಮನೆಯ ಆರ್.ಆರ್ ಸಂಖ್ಯೆ, ಕೆಇಬಿ ಸಂಖ್ಯೆ, ಗೃಹ ಬಳಕೆಯೇ, ಅನ್ಯ ಬಳಕೆಯೇ, ಕಟ್ಟಡ ಅಂತಸ್ತು, ನೀರಿನ ಬಳಕೆ ಪ್ರಮಾಣ, ಮಾಹಿತಿಯನ್ನು ಮನೆಯ ಭಾವಚಿತ್ರದೊಂದಿಗೆ ಸಂಗ್ರಹಿಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT