ಪ್ರೊ. ಭಗವಾನ್ 
ಜಿಲ್ಲಾ ಸುದ್ದಿ

ಪ್ರೊ. ಭಗವಾನ್‌ಗೆ ಬೆದರಿಕೆ ಕರೆ; ಕರೆ ಮಾಹಿತಿ ನೀಡುವಂತೆ ಟೆಲಿಕಾಂ ಸೇವಾದಾರರಿಗೆ ಪೊಲೀಸರ ಆದೇಶ

ಲೇಖಕ ಪ್ರೊ. ಭಗವಾನ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎಂಬ ದೂರಿನನ್ವಯ, ಬೆದರಿಕೆ ಕರೆಗಳು ಬಂದಿರುವ ಫೋನ್ ನಂಬರ್‌ಗಳ ಮಾಹಿತಿಯನ್ನು ...

ಮೈಸೂರು: ಲೇಖಕ ಪ್ರೊ. ಭಗವಾನ್ ಅವರಿಗೆ ಬೆದರಿಕೆ ಕರೆಗಳು ಬಂದಿವೆ ಎಂಬ ದೂರಿನನ್ವಯ, ಬೆದರಿಕೆ ಕರೆಗಳು ಬಂದಿರುವ ಫೋನ್ ನಂಬರ್‌ಗಳ ಮಾಹಿತಿಯನ್ನು ಒದಗಿಸುವಂತೆ ಟೆಲಿಕಾಂ ಸೇವಾದಾರರಿಗೆ ಪೊಲೀಸ್ ಆದೇಶ ನೀಡಿದ್ದಾರೆ.
ಪ್ರೊ. ಭಗವಾನ್ ಅವರಿಗೆ ಬಂದಿರುವ ಬೆದರಿಕೆ ಕರೆಗಳ ವಿವರಗಳನ್ನು ಈಗಾಗಲೇ ಸಂಗ್ರಹಿಸಿಯಾಗಿದೆ. ಆ ದೂರವಾಣಿ ಸಂಖ್ಯೆಗಳನ್ನೀಗ ಟೆಲಿಕಾಂ ಸೇವಾದಾರರಿಗೆ ಕಳುಹಿಸಿಕೊಟ್ಟು  ಆ ಸಂಖ್ಯೆಗಳನ್ನು ಹೊಂದಿರುವವರ ವಿವರಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಭಾನುವಾರ ಸಂಜೆ ಪ್ರೊ. ಭಗವಾನ್‌ರಿಗೆ 20 ಬೆದರಿಕೆ ಕರೆಗಳ ಬಂದಿದ್ದವು. ಇದರಲ್ಲಿ ಎರಡು ಕರೆಗಳು ಒಂದೇ ಮೊಬೈಲ್ ಸಂಖ್ಯೆಯಿಂದ ಮಾಡಿರುವುದಾಗಿದೆ. ಕರೆ ಮಾಡಿದ ವ್ಯಕ್ತಿಗಳು ಅವ್ಯಾಚ್ಯ ಪದಗಳನ್ನು ಬಳಸಿದ್ದರು ಎಂದು ಪ್ರೊ. ಭಗವಾನ್ ದೂರು ನೀಡಿದ್ದರು.
ಪ್ರೊ.ಭಗವಾನ್‌ರ ದೂರು ಸ್ವೀಕರಿಸಿದ ಕುವೆಂಪು ನಗರ ಪೊಲೀಸರು ದೂರಿಗೆ ಸಂಬಂಧಪಟ್ಟಂತೆ ಎಫ್‌ಐಆರ್ ದಾಖಲಿದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಭಗವಾನ್ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಿಸಿದ್ದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT