ಜಿಲ್ಲಾ ಸುದ್ದಿ

ಸಾಹಿತಿಗಳನ್ನು ಬೆದರಿಸುವುದೂ ಭಯೋತ್ಪಾದನೆಯೇ: ಕುಂ.ವೀ

ಧಾರವಾಡ: ಸಾಹಿತಿಗಳಿಗೆ ಬೆದರಕೆ ಒಡ್ಡುವುದೂ ಒಂದು ರೀತಿಯ ಭಯೋತ್ಪಾದನೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.

ಸೋಮವಾರ ಸಂಜೆ ಇಲ್ಲಿನ ಡಾ. ಎಂ. ಎಂ. ಕಲಬುರ್ಗಿ ನಿವಾಸಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಹಿಂಸೆಯನ್ನು ಪ್ರಚೋದಿಸುವ ಒಂದು ವರ್ಗ ಸಮಾಜದಲ್ಲಿ ಬೆಳೆಯುತ್ತಿದ್ದು, ಆದಷ್ಟು ಬೇಗ ಆ ವರ್ಗವನ್ನು ಹೊಡೆದೋಡಿಸಬೇಕು. ಇಲ್ಲದಿದ್ದರೆ ಇನ್ನಷ್ಟು ಅನಾಹುತಗಳಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.

``ಭಗವದ್ಗೀತೆಯಲ್ಲಿನ ಕೆಲ ಅಮಾನವೀಯ ಅಂಶಗಳನ್ನು ನಾನೂ ವಿರೋಧಿಸಿದ್ದೇನೆ. ಆದರೆ, ಭಗವದ್ಗೀತೆ ಸುಡಬೇಕೆಂದು ಹೇಳಿದೆ ಪ್ರೊ. ಕೆ.ಎಸ್. ಭಗವಾನ್ ಅವರ ಹೇಳಿಕೆಯನ್ನು ನಾನು ಒಪ್ಪೋದಿಲ್ಲ'' ಎಂದು ಪ್ರತಿಪಾದಿಸಿದ ಕುಂ.ವೀ, ``ಈ ಹೇಳಿಕೆಯಿಂದಾಗಿ ಅವರಿಗೆ ಬೆದರಿಕೆ ಬರುತ್ತಿದ್ದು, ಸಾಹಿತಿಗಳಿಗೆ ಎಷ್ಟೇ ರಕ್ಷಣೆ ನೀಡಿದರೂ ಅವರು ಕ್ಷೇಮವಾಗಿರಲು ಸಾಧ್ಯವಿಲ್ಲ'' ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಬುಡಕಟ್ಟ ವಿವಿ ಕುಲಪತಿ ಡಾ. ತೇಜಸ್ವಿ ಕಟ್ಟೀಮನಿ ಇದ್ದರು.

SCROLL FOR NEXT