ಸಾಂದರ್ಭಿಕ ಚಿತ್ರ 
ಜಿಲ್ಲಾ ಸುದ್ದಿ

ಯಲ್ಲಮ್ಮದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ

ಜಿಲ್ಲಾ ಆಡಳಿತದ ನಿಷೇಧದ ನಡುವೆಯೂ ಕೊಕಟನೂರಿನ ಯಲ್ಲಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಗುರುವಾರ ಪ್ರಾಣಿ ಬಲಿ ಅವ್ಯಾಹತವಾಗಿ ನಡೆದಿದೆ. ಜ.5 ರಿಂದಲೇ ...

ಅಥಣಿ: ಜಿಲ್ಲಾ ಆಡಳಿತದ ನಿಷೇಧದ ನಡುವೆಯೂ ಕೊಕಟನೂರಿನ ಯಲ್ಲಮ್ಮ ದೇವಿ ಜಾತ್ರೆ ಸಂದರ್ಭದಲ್ಲಿ ಗುರುವಾರ ಪ್ರಾಣಿ ಬಲಿ ಅವ್ಯಾಹತವಾಗಿ ನಡೆದಿದೆ. ಜ.5 ರಿಂದಲೇ ಕೊಕಟನೂರಿನ ಯಲ್ಲಮ್ಮ ದೇವಿಯ ಜಾತ್ರೆ ಆರಂಭವಾಗಿತ್ತು.

ಆರಂಭದ ಎರಡು ದಿನ ಪ್ರಾಣಿ ಬಲಿ, ನೈವೇದ್ಯ ಇರಲಿಲ್ಲ. ಆದರೆ ಗುರುವಾರ ಪೊಲೀಸರು ಹಾಗೂ ಪ್ರಾಣಿ ದಯಾ ಸಂಘದವರ ಕಣ್ಣು ತಪ್ಪಿಸಿ ಮಾತಂಗಿ ದೇವಿಗೆ ಪ್ರಾಣಿ ಮಾಂಸ ನೈವೇದ್ಯ ಮಾಡಿದರು. ದೇವಾಲಯದ ಮುಂಭಾಗ ಅಥವಾ ಹತ್ತಿರದಲ್ಲಿ ಪ್ರಾಣಿ ಬಲಿ ನಡೆದಿಲ್ಲ.

ಬದಲು ಸ್ವಲ್ಪ ದೂರದಲ್ಲಿ ದೂರದ ಗ್ರಾಮಗಳಿಂದ ಬಂದ ಜನರು ಟೆಂಟ್ ಹಾಕಿಕೊಂಡು ಅಲ್ಲಿಯೇ ಪ್ರಾಣಿ ಬಲಿ ನಡೆಸಿ ಮಾತಂಗಿ ದೇವಿಗೆ ನೈವೇದ್ಯ ಅರ್ಪಿಸಿದರು. ದೂರದ ಹೊಲಗಳಲ್ಲಿ, ವಾಹನ ನಿಲ್ಲಿಸುವ ಸ್ಥಳಗಳಲ್ಲಿ ಪ್ರಾಣಿ ಬಲಿ ಮಾಡಲಾಗಿದ್ದು, ಅಲ್ಲಲ್ಲಿ ರಕ್ತವೂ ಬಿದ್ದಿದೆ. ಮಾಂಸಗಳನ್ನು ನೇತು ಹಾಕಿದ ದೃಶ್ಯಗಳೂ ಪತ್ರಕರ್ತರ ಕಣ್ಣಿಗೆ ಬಿದ್ದವು. ಆದರೆ ಇದನ್ನು ತಡೆಯಬೇಕಾದ ತಾಲೂಕು ಆಡಳಿತದ ಯಾವ ಅಧಿಕಾರಿಯೂ ಅಲ್ಲಿ ಇರಲಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT