(ಸಾಂದರ್ಭಿಕ ಚಿತ್ರ) 
ಜಿಲ್ಲಾ ಸುದ್ದಿ

ಅಕ್ರಮ ಹಣ ಸಾಗಣೆ 13 ಮಂದಿ ಬಂಧನ

ನಗರದಲ್ಲಿ ನಡೆಯುತ್ತಿದ್ದ ಬಹುದಡ್ಡ ಹವಾಲ ದಂಧೆಯನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 13 ಮಂದಿಯನ್ನು ಬಂಧಿಸಿದ್ದಾರೆ...

ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಬಹುದಡ್ಡ ಹವಾಲ ದಂಧೆಯನ್ನು ಭೇದಿಸಿರುವ ಕೇಂದ್ರ ಅಪರಾಧ ವಿಭಾಗದ ಪೊಲೀಸರು, 13 ಮಂದಿಯನ್ನು ಬಂಧಿಸಿದ್ದಾರೆ.

ಆರೋಪಿಗಳಿಂದ ರು.1.18 ಕೋಟಿ, 16 ಮೊಬೈಲ್ ಫೋನ್, 2 ನೋಟು ಎಣಿಕೆ ಯಂತ್ರ, 24 ರಬ್ಬರ್ ಸೀಲು, ಕಂಪ್ಯೂಟರ್ ಸೇರಿ ಕೆಲ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಶ್ರೀರಾಂಪುರದ ಆರ್,ಧರ್ಮೇಂದರ್ (42), ಕಾವೇರಿನಗರದ ಚಂಪಾಲಾಲ್ (30), ನಗರ್ತಪೇಟೆಯ ಮಹದೇವಪ್ (22), ಜೀತುಸಿಂಗ್ (18), ಚಿತ್ರದುರ್ಗದ ವಿಕ್ರಮ್ (21), ಸಂಜೀವಿನಿ ನಗರದ ಅರುಣ್ ಎ ಕುಮಾರ್ (36), ಲಗ್ಗೆರೆಯ ಪ್ರಕಾಶ್ (30), ಚಿಕ್ಕಬಳ್ಳಾಪುರದ ಗೋಪಾಲ್ (36), ಹನುಮಂತ ನಗರದ ದಿನೇಶ್ (36), ವೃಷಭಾವತಿ ನಗರದ ಪುರುಷೋತ್ತಮ (45), ತ್ಯಾಗರಾಜನಗರದ ಸುನಿಲ್ (42), ಆರ್ ಟಿ ಸ್ಟ್ರೀಟ್ ನ ಭಗವಾನ್ (30) ಮತ್ತು ಎಟಿ ಸ್ಟ್ರೀಟ್ ನ ಕುನಾಲ್ (34) ಬಂಧಿತ ಆರೋಪಿಗಳು.

ಇವರು ನಗರ್ತ ಪೇಟೆ ಸಿ.ಟಿ.ಸ್ಟ್ರೀಟ್ ನಲ್ಲಿರುವ ಮಹಾವೀರ್ ಬುಲಿಯನ್ಸ್ ಅಂಗಡಿಯಲ್ಲಿ ಅನಧಿಕೃತವಾಗಿ ಹಣ ಸಂಗ್ರಹಿಸಿದ್ದು, ಹವಾಲ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಮತ್ತು ಭೂಗತ ಪಾತಕಿಗಳಿಗೂ ಹಣ ರವಾನೆಯಾಗುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಪೊಲೀಸರು ಅಂಗಡಿ ಮೇಲೆ ದಾಳಿ ನಡೆಸಿದ್ದಾರೆ. ಪರಿಶೀಲನೆ ವೇಳೆ ಆರೋಪಿಗಳು ಹವಾಲ ದಂಧೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ಚಿನ್ನಾಭರಣ ವ್ಯಾಪಾರಿಯೇ ಸೂತ್ರಧಾರ
ಪ್ರಮುಖ ಆರೋಪಿ ಅಂಗಡಿ ಮಾಲೀಕ  ಧರ್ಮೇಂಧರ್ ಪ್ರಕರಣದ ಸೂತ್ರಧಾರ. ಈತ ಹವಾಲ ಹಣ ಸ್ವೀಕರಿಸಲು ಚಂಪಾಲಾಲ್ ಎಂಬುವನ ನೇಮಿಸಿಕೊಂಡಿದ್ದ. ಉಳಿದ ಆರೋಪಗಳ ಪೈಕಿ ಕೆಲವರು ನೇರವಾಗಿ ಹವಾಲ ಮೂಲಕ ಹಣ ರವಾನೆ ಮಾಡಲು ಬಂದಿದ್ದರು. ಇನ್ನು ಕೆಲವರು ತಮ್ಮ ಮಾಲೀಕರ ಸೂಚನೆ ಮೇರೆಗೆ ಹಣ ನೀಡಲು ಬಂದಿದ್ದರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಧರ್ಮೇಂದರ್ ಚಿನ್ನಾಭರಣ ವ್ಯಾಪಾರಿ ಎಂಬುದಾಗಿ ಬಿಂಬಿಸಿಕೊಂಡಿದ್ದಾನೆ. ಆದರೆ, ಹವಾಲ ದಂಧೆಯಲ್ಲಿ ತೊಡಗಿಸಿಕೊಂಡು ನಾನಾ ರಾಜ್ಯಗಳಿಗೆ ಹಣ ರವಾನೆ ಮಾಡುವ ಜಾಲ ಹೊಂದಿದ್ದಾನೆ. ನಾನು ರವಾನಿಸಬೇಕಾದ ಸ್ಥಳದ ಅನುಗುಣವಾಗಿ ಪ್ರತಿ ಲಕ್ಷಕ್ಕೆ ರು.300ರಿಂದ ರು.400 ಕಮಿಷನ್ ಪಡೆಯುತ್ತಿದ್ದ ಎಂಬ ವಿಚಾರವೂ ಬೆಳಕಿಗೆ ಬಂದಿದೆ. ಹಲಸೂರುಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

Vijay Hazare Trophy: ಸೆಮಿಫೈನಲ್‌ಗೆ ಲಗ್ಗೆ ಇಟ್ಟ ಕರ್ನಾಟಕ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

UP ದಲಿತ ಮಹಿಳೆ ಕೊಲೆ: ಯೋಗಿ ಸರ್ಕಾರ ಜಾತಿ, ಧರ್ಮದ ಆಧಾರದಲ್ಲಿ ದ್ವೇಷಕ್ಕೆ ಪ್ರಚೋದನೆ- ಕಾಂಗ್ರೆಸ್ ಕಿಡಿ!

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

SCROLL FOR NEXT