ಸಲಿಂಗ ಕಾಮ ನೆಪದಲ್ಲಿ ಮನೆಗಳವು 
ಜಿಲ್ಲಾ ಸುದ್ದಿ

ಸಲಿಂಗ ಕಾಮ ನೆಪದಲ್ಲಿ ಮನೆಗಳವು ಮಾಡುತ್ತಿದ್ದವನ ಬಂಧನ

ಸಲಿಂಗ ಕಾಮದ ನೆಪದಲ್ಲಿ ಮನೆಗೆ ಹೋಗಿ ಬಳಿಕ ನಿದ್ರೆ ಮಾತ್ರೆ ಕುಡಿಸಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಕತರ್ನಾಕ್ ಆರೋಪಿಯೊಬ್ಬ ಹನಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರು: ಸಲಿಂಗ ಕಾಮದ ನೆಪದಲ್ಲಿ ಮನೆಗೆ ಹೋಗಿ ಬಳಿಕ ನಿದ್ರೆ ಮಾತ್ರೆ ಕುಡಿಸಿ ಮನೆಯಲ್ಲಿದ್ದ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಕತರ್ನಾಕ್ ಆರೋಪಿಯೊಬ್ಬ ಹನಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.

ಬನ್ನೇರುಗಟ್ಟ ನಿವಾಸಿ ನಾಸಿರುದ್ದೀನ್(21 ) ಬಂಧಿತ. ಆರೋಪಿ ಮೂಲತಃ ಪಶ್ಚಿಮ ಬಂಗಾಳದವನು. ಕೆಲವು ವರ್ಷಗಳಿಂದ ನಗರದ ಖಾಸಗಿ ಬ್ಯಾಂಕ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ. ಫೇಸ್ ಬುಕ್ ನಲ್ಲಿ ಬೇರೆ ಬೇರೆ ಖಾತೆ ತೆರೆದು ಅಶ್ಲೀಲ ವಿಡಿಯೋಗಳನ್ನು ಅಪ್ ಲೋಡ್ ಮಾಡುತ್ತಿದ್ದ. ಆ ವಿಡಿಯೋಗಳ ಕೆಳ ಭಾಗದಲ್ಲಿ ಸಲಿಂಗ ಕಾಮದಲ್ಲಿ ಆಸಕ್ತಿಯುಳ್ಳವರು ಸಂಪರ್ಕಿಸುವಂತೆ ಮೊಬೈಲ್ ಸಂಖ್ಯೆ ನಮೂದಿಸುತ್ತಿದ್ದ. ತನ್ನನ್ನು ಸಂಪರ್ಕಿಸಿದವರ ವಿಳಾಸ ಪಡೆದು ರಾತ್ರಿ ವೇಳೆ ಮನೆಗೆ ಹೋಗಿ ಸಲುಗೆಯಿಂದ ನಡೆದುಕೊಂಡು ಅವರಿಗೆ ನಿದ್ರೆ ಮಾತ್ರೆ ಕುಡಿಸಿ ಬಳಿಕ ಮನೆಯಲ್ಲಿದ್ದ ಬೆಲೆಬಾಳುವ ಚಿನ್ನಾಭರಣ, ನಗದು, ದುಬಾರಿ, ವಸ್ತುಗಳನ್ನು ಮೂಟೆ ಕಟ್ಟಿ ದೋಚಿ ಪರಾರಿಯಾಗುತ್ತಿದ್ದ ಎಂದು ತಿಳಿದುಬಂದಿದೆ.

ಆರೋಪಿಯ ಮೋಸದ ಖೆಡ್ಡಕ್ಕೆ ಬಿದ್ದಿರುವವರಲ್ಲಿ ವಿವಾಹಿತ ಪುರುಷರೇ ಹೆಚ್ಚು. ಅದರೆ, ಇವರ್ಯಾರು ದೂರು ದಾಖಲಿಸಲು ಮುಂದಾಗಿಲ್ಲ ಎಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. ಕೊನೆಗೂ ಹನಮಂತನಗರ ನಿವಾಸಿ ಬಾಲಾಜಿ ಎಂಬುವರು ಈ ಬಗ್ಗೆ ದೂರು ದಾಖಲಿಸಿದ್ದರು. ಈ ಸಂಬಂಧ ಆರೋಪಿ ಪತ್ತೆಗೆ ಕಾರ್ಯಾಚರಣೆಗೆ ಇಳಿದ ಪೊಲೀಸರು, ಆರೋಪಿ ಫೇಸ್ ಬುಕ್ ಖಾತೆಗಳು, ಮೊಬೈಲ್ ಸಂಖ್ಯೆಯ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈತನಿಂದ ರು. 5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel