ಕಿರುಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು. 
ಜಿಲ್ಲಾ ಸುದ್ದಿ

ಸುಬ್ರಹ್ಮಣ್ಯನ ಸನ್ನಿಧಿಯಲ್ಲಿ ಭಕ್ತರ ಎಡೆಸ್ನಾನ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಪ್ರಯುಕ್ತ ಪಂಚಮಿ ದಿನವಾದ ಶುಕ್ರವಾರ 52 ಭಕ್ತರು ಎಡೆ ಸ್ನಾನ ಸೇವೆ ಪೂರೈಸಿದರು...

ಸುಬ್ರಹಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಿರುಷಷ್ಠಿ ಪ್ರಯುಕ್ತ ಪಂಚಮಿ ದಿನವಾದ ಶುಕ್ರವಾರ 52 ಭಕ್ತರು ಎಡೆ ಸ್ನಾನ ಸೇವೆ ಪೂರೈಸಿದರು. ಮಧ್ಯಾಹ್ನ ದೇವರಿಗೆ ಮಹಾಪೂಜೆ ನೆರವೇರಿದ ಬಳಿಕ ದೇವಸ್ಥಾನದ ಹೊರಾಂಗಣದ ಸುತ್ತ ಹಾಕಲಾದ ಬಾಳೆಲೆ ಮೇಲೆ ದೇವರ ನೈವೆಧ್ಯ ಬಡಿಸಿ, ಅದನ್ನು ದೇವಸ್ಥಾನದ ಗೋವುಗಳಿಗೆ ತಿನ್ನಿಸಿ ನಂತರ ಭಕ್ತರು ಉರುಳುಸೇವೆ ನಡೆಸಿದರು. 
ಬ್ರಾಹ್ಮಣರು ಉಂಡ ಎಲೆಯ ಮೇಲೆ ಉರುಳುವ (ಉಚ್ಚಿಷ್ಠ) ಮಡೆ ಮಡೆ ಸ್ನಾನ ಸೇವೆ ಸಂಪ್ರದಾಯ ನಿಷೇಧಗೊಂಡು ಇಂದಿಗೆ ವರ್ಷ ತುಂಬಿದೆ. ಕಳೆದ ವರ್ಷ ಕಿರುಷಷ್ಠಿ ವೇಳೆ 62 ಭಕ್ತರು ಮೊದಲ ಬಾರಿ ಎಡೆಸ್ನಾನ ಸೇವೆ ನಡೆಸಿದ್ದು, ಈ ಬಾರಿ ಭಕ್ತರ ಸಂಖ್ಯೆ ಕಡಿಮೆ ಇತ್ತು. ಮಡೆ ಮಡೆ ಸ್ನಾನ ಸೇವೆ ಕುರಿತು ಪರ, ವಿರೋಧ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದಲ್ಲಿದೆ. 
ಈ ನಡುವೆ ಉಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲಾಡಳಿತ ಕ್ಷೇತ್ರದಲ್ಲಿ ಎಡೆಸ್ನಾನಕ್ಕೆ ಅವಕಾಶ ಕಲ್ಪಿಸಿತ್ತು. ಕಳೆದ ತಿಂಗಳು ನಡೆದ ವಾರ್ಷಿಕ ಮಹಾ ಜಾತ್ರೆ ಸಂದರ್ಭದಲ್ಲೂ ಎಡೆ ಸ್ನಾನ ನೆರವೇರಿತ್ತು. ಎರಡು ಬಾರಿ ರಥೋತ್ಸವ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ ಒಂದೇ ದಿನ ಎರಡು ಬಾರಿ ಪಂಚಮಿ ರಥ ಎಳೆಯಲಾಯಿತು. 
ಮಕರ ಸಂಕ್ರಮಣ ದಿನವಾದ ಶುಕ್ರವಾರ ಬೆಳಗ್ಗೆ ದೇವಾಲಯದಲ್ಲಿ ಕುಕ್ಕೆಲಿಂಗ ದೇವರ ಜಾತ್ರೆ ಪ್ರಯುಕ್ತ ಪಂಚಮಿ ರಥ ಎಳೆಯಲಾಯಿತು. ನಂತರ ಕಾಜುಕುಜುಂಬ ದೈವದ ನಡಾವಳಿ ನೆರವೇರಿತು. ಬಳಿಕ ಚಿಕ್ಕ ರಥೋತ್ಸವ ನಡೆದು ಸವಾರಿ ಮಂಟಪದಲ್ಲಿ ದೇವರಿಗೆ ಕಟ್ಟೆಪೂಜೆ ನೆರವೇರಿತು. ಕಿರುಷಷ್ಠಿ ಪ್ರಯುಕ್ತ ರಾತ್ರಿ ಮತ್ತೊಮ್ಮೆ ಪಂಚಮಿ ರಥೋತ್ಸವ ನಡೆಯಿತು. ಕಿರುಷಷ್ಠಿ ಪ್ರಯುಕ್ತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರು ಎಡೆಸ್ನಾನ ಸೇವೆ ನೆರವೇರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

SCROLL FOR NEXT