ಮೊಬೈಲ್ ಆಪ್ (ಸಾಂಕೇತಿಕ ಚಿತ್ರ) 
ಜಿಲ್ಲಾ ಸುದ್ದಿ

ದೂರು ದಾಖಲಿಸಲು ಬಿಬಿಎಂಪಿ ಆಪ್ ಬಿಡುಗಡೆ

ತಮ್ಮ ದೂರು ದುಮ್ಮಾನಗಳನ್ನು ಪಾಲಿಕೆಗೆ ತಲುಪಿಸಲು ಪರದಾಡುತ್ತಿದ್ದ ನಾಗರಿಕರಿಗೆ ಸ್ಪಂದಿಸಲು ಬಿಬಿಎಂಪಿ ನೂತನ ಮೊಬೈಲ್ ಆಪ್ ಗಳನ್ನು ಬಿಡುಗಡೆ ಮಾಡಿದೆ.

ಬೆಂಗಳೂರು: ತಮ್ಮ ದೂರು ದುಮ್ಮಾನಗಳನ್ನು ಪಾಲಿಕೆಗೆ ತಲುಪಿಸಲು ಪರದಾಡುತ್ತಿದ್ದ ನಾಗರಿಕರಿಗೆ ಸ್ಪಂದಿಸಲು ಬಿಬಿಎಂಪಿ ನೂತನ ಮೊಬೈಲ್ ಆಪ್ ಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪಾಲಿಕೆ ವ್ಯಾಪ್ತಿಯ 20  ಇಲಾಖೆಗಳು ಅಧಿಕಾರಿಗಳಿಗೆ ಮೊಬೈಲ್ ನಿಂದಲೇ ದೂರು ಸಲ್ಲಿಸಬಹುದು.
ನೂತನ ಮೊಬೈಲ್ ಆಂಡ್ರಾಯ್ಡ್ ಅಪ್ಲಿಕೇಷನ್ ಗಳಾದ ಬಿಬಿಎಂಪಿ ಸಹಾಯ ಹಾಗೂ ಟ್ರೀ ಕಟಿಂಗ್ ಆಪ್ ಗಳಿಗೆ ಪಾಲಿಕೆ ಕಚೇರಿಯಲ್ಲಿ ಜ.22 ರಂದು ಚಾಲನೆ ನೀಡಿ ಮಾತನಾಡಿದ ಮೇಯರ್ ಬಿಎನ್ ಮಂಜುನಾಥರೆಡ್ಡಿ, ರಾಜ್ಯದಲ್ಲಿ ಮೊಬಲ ಬಾರಿ ಮಹಾನಗರ ಪಾಲಿಕೆಯಿಂದ ಆಪ್ ಬಿಡುಗಡೆ ಮಾಡಲಾಗುತ್ತಿದೆ. ಮೂಲ ಸೌಕರ್ಯ, ರಸ್ತೆ, ತ್ಯಾಜ್ಯ ನಿರ್ವಹಣೆ, ಕಟ್ಟಡ ಯೋಜನೆಗಳು, ಆಸ್ತಿ ತೆರಿಗೆ, ಆರೋಗ್ಯ, ಸಾರ್ವಜನಿಕ ಸುರಕ್ಷತೆ, ಕಲ್ಯಾಣ, ಪರಿಸರ, ಮರಗಳ ಕಟಾವು ಮತ್ತು ಅರಣ್ಯ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಆಪ್ ಮೂಲಕ ಸಲ್ಲಿಸಬಹುದು ಎಂದರು.
ಈ ಆಪ್ ಶುಕ್ರವಾರದಿಂದಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿದ್ದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಸುಲಭ ಹಾಗೂ ಬಳಕೆದಾರ ಸ್ನೇಹಿ ನಾಗರಿಕರ ಆಪ್ ಇದಾಗಿದೆ. ಇದರೊಂದಿಗೆ ದಿನದ 24 ಗಂಟೆ ಕಾಲ್ ಸೆಂಟರ್ ಕಾರ್ಯನಿರ್ವಹಿಸಲಿದ್ದು, ನಾಗರಿಕರು ಯಾವುದೇ ಸಮಯದಲ್ಲಿ ತಮ್ಮ ಅಹವಾಲು ಸಲ್ಲಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌ ; ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿದ್ದ ಮಧ್ಯವರ್ತಿ, BJP ಮುಖಂಡನ ಬಂಧನ!

ಕಾವೇರಿ ನೀರಿನ ವಿವಾದ: ಕರ್ನಾಟಕದಿಂದ 9,000 ಕ್ಯೂಸೆಕ್ ನೀರು ಬಿಡುಗಡೆಯಾದರೂ, ಕೊರತೆ ಇದೆ-ತಮಿಳುನಾಡು; ಸೆ.15 ಕ್ಕೆ ಮತ್ತೆ ವಿಚಾರಣೆ

ನೇಪಾಳದಲ್ಲಿ ಹಠಾತ್ ಪ್ರವಾಹ: ಕರ್ನಾಟಕದ 13 ಮಂದಿ ನಾಪತ್ತೆ; ಇನ್ನೂ ಸುಳಿವು ಸಿಕ್ಕಿಲ್ಲ ಎಂದ ಸಿಎಂ ಡಿಕೆ ಶಿವಕುಮಾರ್

7,200 ಮೀಟರ್‌ ಎತ್ತರದಿಂದ ಕುಸಿತ; ನೇಪಾಳ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ಭೀಕರ ಕ್ಷಣ ಡ್ರೋನ್ ಕ್ಯಾಮೆರಾದಲ್ಲಿ ಸೆರೆ!

ನೇಪಾಳದಲ್ಲಿ ಭೀಕರ ಪ್ರವಾಹ; ಮೃತರ ಸಂಖ್ಯೆ 903ಕ್ಕೆ ಏರಿಕೆ, ವಿದೇಶಿಯರು ಸೇರಿ 4,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆ!