ಬೆಂಗಳೂರು ಗ್ರಾಮಾಂತರ

ಬಲಿಗೆ ಕಾಯುತ್ತಿದೆ ಕೊಳವೆ ಬಾವಿ

ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿಗೆ ಸಾಧಾರಣ ಗಾತ್ರದ ಕಲ್ಲೊಂದನ್ನು ಅಡ್ಡಲಾಗಿಟ್ಟು ...

ರಾಮನಗರ: ಬಾಯ್ತೆರೆದು ಬಲಿಗಾಗಿ ಕಾಯುತ್ತಿರುವ ಕೊಳವೆ ಬಾವಿಗೆ ಸಾಧಾರಣ ಗಾತ್ರದ ಕಲ್ಲೊಂದನ್ನು ಅಡ್ಡಲಾಗಿಟ್ಟು ಮರೆಮಾಚುವ ಮೂಲಕ ಮತ್ತಷ್ಟು ಅಪಾಯ ತಂದೊಡ್ಡಿರುವ ಕೆಲಸ ಬೆಂಗಳೂರು-ಮೈಸೂರು ಹೆದ್ದಾರಿಯ ಮಗ್ಗುಲಲ್ಲೇ ನಡೆದಿದೆ.  
ಚನ್ನಪಟ್ಟಣ ತಾಲೂಕಿನ ಮುದಗೆರೆ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಶಿವಳ್ಳಿ ರೆಸ್ಟೋರೆಂಟ್ ಎದುರಲ್ಲೇ ಈ ಮೃತ್ಯು ಕೂಪವಿದೆ. ಈ ವಿಫಲ ಕೊಳವೆ ಬಾವಿ ಇರುವುದು ಚತುಷ್ಪಥ ಹೆದ್ದಾರಿಯಿಂದ ಆರೇಳು ಮೀಟರ್ ದೂರದಲ್ಲಷ್ಟೇ. ಕುಡಿಯುವ ನೀರು ಸರಬರಾಜಿಗಾಗಿ 3 ತಿಂಗಳ ಹಿಂದೆ ಕೊರೆಸಲಾಗಿತ್ತು. 800 ಅಡಿ ಆಳದ ಕೊಳವೆ ಬಾವಿಯನ್ನು ಕೊರೆದ ಏಜೆನ್ಸಿಯವರಾಗಲೀ, ಸ್ಥಳೀಯ ಅಧಿಕಾರಿಗಳಾಗಲೀ ಮುಚ್ಚಿಸುವ ಗೋಜಿಗೆ ಹೋಗಿಲ್ಲ. ಮೇಲೊಂದು ಕಲ್ಲನ್ನಿಟ್ಟು ಮರೆಮಾಚುವ ಕೆಲಸವನ್ನಷ್ಟೇ ಮಾಡಿದ್ದಾರೆ.
ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳು ಮುದುಗೆರೆ ಗ್ರಾ.ಪಂ.ಗೆ ಸಂಪನ್ಮೂಲದ ಮೂಲಗಳಾಗಿವೆ. ನಿತ್ಯ ಸಹಸ್ರಾರು ಪ್ರಯಾಣಿಕರು ಇಲ್ಲಿಗೆ ಬಂದು ಹೋಗುತ್ತಾರೆ. ನೀರು ಬಾರದೆ ವಿಫಲವಾಗಿರುವ ಆಸುಪಾಸಿನಲ್ಲಿರುವ ಶಾಲೆಗಳಿಗೆ ಇದೇ ಮಾರ್ಗವಾಗಿ ಮಕ್ಕಳು ತೆರಳುತ್ತಾರೆ. ಹೊಟೇಲ್ಗಳಿಗೆ ಪೋಷಕರೊಂದಿಗೆ ಬಂದಿಳಿಯುವ ಮಕ್ಕಳು ಬಹಿರ್ದೆಸೆಗೆಂದು ಅಪ್ಪಿತಪ್ಪಿ ರಸ್ತೆ ದಾಟಿದಾಗ ಕಾಲಿಟ್ಟರೆ ಕಲ್ಲು ಜಾರಿ ಕೊಳವೆ ಬಾವಿಗೆ ಬೀಳುವ ಅಪಾಯವಿದೆ.

ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT