ಬೀದರ್

ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ರೈತರಿಂದ ಘೇರಾವ್

ಯಾದಗಿರಿ: ಶಹಾಪುರ ತಾಲೂಕಿನ ಕಾಲುವೆ ಕೊನೆಭಾಗದ ಗ್ರಾಮಗಳಾದ ವಡಗೇರಾ, ಉಳ್ಳೆಸುಗೂರ, ಕುರುಕುಂದಾ, ಕಾಡಂಗೇರಾ, ತೇಕರಾಳ ಇನ್ನೂ ಮುಂತಾದ ಗ್ರಾಮಗಳ ನೂರಾರು ರೈತರು ವಡಗೇರಾ ಕೆಬಿಜೆಎನ್ನೆಲ್ ಅಧಿಕಾರಿಗಳ ವಾಹನಕ್ಕೆ ಘೇರಾವ್ ಹಾಕಿ ಪ್ರತಿಭಟಿಸಿದರು.
ಈಗಾಗಲೇ ಕಾಲುವೆಗೆ ನೀರು ಹರಿಸಲು ಕೆಬಿಜೆಎನ್ನೆಲ್ ಸಜ್ಜಾಗಿದೆ. ಉಪಕಾಲುವೆಗಳು ಜಾಲಿಗಿಡಗಳಿಂದ, ಹೂಳಿನಿಂದ ಆವೃತವಾಗಿದ್ದು, ಸಂಪೂರ್ಣ ಹಾಳಾಗಿವೆ. ಆದರೂ ದುರಸ್ತಿ ಕಾಮಗಾರಿ ಕೈಗೊಂಡಿಲ್ಲ ಎಂದು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ರೈತರು ಕಂಗೆಟ್ಟಿದ್ದಾರೆ. ಕಾಲುವೆಗಳ ನೀರು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ ಉಪಕಾಲುವೆಗಳು ಸಂಪೂರ್ಣ ಹಾಳಾಗಿವೆ. ಈಗಾಗಲೇ ಸರ್ಕಾರ 500 ಕೋಟಿ ಖರ್ಚು ಮಾಡಿ ಕಾಲುವೆ ನವೀಕರಣಗೊಳಿಸಲಾಗಿದೆ. ಕಾಲುವೆಗೆ ಸರಾಗವಾಗಿ ನೀರು ಹರಿಯುವ ಭರವಸೆಯನ್ನು ರೈತರು ಹೊಂದಿದ್ದಾರೆ. ಆದರೆ ಉಪ ಕಾಲುವೆಗಳ ದುರಸ್ತಿ ಮಾಡದ ಕಾರಣ ನೀರು ಪೋಲಾಗುವ ಸಾಧ್ಯತೆಯಿದೆ ಎಂದು ಕಿಡಿಕಾರಿದರು.
ಅಧಿಕಾರಿಗಳಿಗೆ ತರಾಟೆ: ಬಿಡಿ 21ರ ಕುರುಕುಂದ 5 ಕಿಮೀ ಕಾಲುವೆ ಮತ್ತು ರಸ್ತೆ, ಡಿ21ರ ವ್ಯಾಪ್ತಿಯ ತೇಕರಾಳ, ಉಳ್ಳೆಸುಗೂರ, ವಡಗೇರಾ, ಕಂದಳ್ಳಿ, ಹಾಲಗೇರಾ ಇನ್ನೂ ಅನೇಕ ಕಾಲುವೆ ಕೊನೆಭಾಗದ ಉಪ ಕಾಲುವೆಗಳು ಜಾಲಿಗಿಡಗಳಿಂದ ಆವೃತಗೊಂಡಿವೆ. ಕಾಲುವೆಗಳಲ್ಲಿ ಮಣ್ಣು ಹೂಳು ತುಂಬಿ ಹಾಳಾಗಿವೆ ಎಂದು ರೈತರಾದ ಶರಣಬಸಪ್ಪ ಬಿರಾದಾರ್, ಗುರಣ್ಣಗೌಡ ವನಸಾನಿ, ಮರಿಲಿಂಗಪ್ಪ, ಜೈರೆಡ್ಡಿ ಸೇರಿದಂತೆ ರೈತರು ಕೆಬಿಜೆಎನ್ನೆಲ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

--

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ; ಡೊನಾಲ್ಡ್ ಟ್ರಂಪ್

WPL 2026: 4 ಓವರ್, 1 ಮೇಡನ್.. ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್.. RCBಯ ಲೇಡಿ ಹೇಜಲ್ವುಡ್ Lauren Bell!

ಡಿ-ಕೋಡ್: ದ್ವೇಷ ಭಾಷಣ ಮಸೂದೆ ಎಂಬ ‘ಗರಗಸ’; DDT ಆಗುವತ್ತ ಕರ್ನಾಟಕ ಸರ್ಕಾರ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿಗೆ ನಿಯೋಗ; ರಾಜ್ಯ ಸರ್ಕಾರ

SCROLL FOR NEXT