ಬೀದರ್

ಸಮಸ್ಯೆ ನಿವಾರಣೆಗೆ ಪ್ರಯತ್ನ: ಭರವಸೆ

ಹುಮನಾಬಾದ್: ಕೇಂದ್ರ ಸರ್ಕಾರದಿಂದ ಜಿಲ್ಲೆಗೆ ಅಗತ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಸಂಸದ ಭಗವಂತ ಖೂಬಾ ತಿಳಿಸಿದರು.
ತಾಲೂಕಿನ ಚಿಟಗುಪ್ಪಾದಲ್ಲಿ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಕಚೇರಿ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ರಾಜಶ್ರೀ ಕೇದರನಾಥ, ರೇಶ್ಮಾ ಖೂತುಬುದ್ದಿನ್, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಪಾಟೀಲ್, ಬಸವಂತರಾಯ ದೇಶಮುಖ, ಅಶೋಕ ಗುತ್ತೆದಾರ, ಶಿವಾನಂದ ಮಂಠಾಳಕರ್, ಸೈಯದ್ ಬುಖಾರಿ, ಸೂರ್ಯಕಾಂತ ಮಠಪತಿ, ಗೋವಿಂದ ಬೊರಾಳೆ, ವಿರೇಶ ಹಲವಾಯಿ, ವೀರಣ್ಣ ಚಾಮರೆಡ್ಡಿ, ಸುಭಾಷ ಕುಂಬಾರ ಸೇರಿದಂತೆ ಪುರಸಭೆ ಸದಸ್ಯರು ಇದ್ದರು. ಪುರಸಭೆ ಮುಖ್ಯ ಅಧಿಕಾರಿ ಮಹ್ಮದ ಯುಸುಫ್ ಸ್ವಾಗತಿಸಿದರು. ಶಿವಕುಮಾರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ED ದಾಳಿ ಅಂತ್ಯ: 3 ಕೋಟಿ ರೂ ನಗದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪತ್ತೆ; ಆ ಹಣ ನಮ್ಮದೇ ಎಂದ ಸತೀಶ್ ಜಾರಕಿಹೊಳಿ

Asia Cup 2026: ಮೊದಲ ಸೆಮಿಸ್‌ನಲ್ಲಿ ಬಾಂಗ್ಲಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ ಭಾರತ!

'ವಂದೇ ಮಾತರಂ' ಕಾನೂನಾಗಿದೆ; ತಾಕತ್ತಿದ್ದರೆ ಅಧಿಕಾರಕ್ಕೆ ಬಂದು ಬದಲಾಯಿಸಿ, ನನ್ನ ಅಭ್ಯಂತರವಿಲ್ಲ: ಕಾಂಗ್ರೆಸ್‌ಗೆ ಒಮರ್ ಅಬ್ದುಲ್ಲಾ ತಿರುಗೇಟು!

ಹಿಂಸೆ ಫ್ಯಾಷನ್ ಆಗಿಬಿಟ್ಟಿದೆ: ಮಣಿಪುರಿ ಸಂಗೀತಗಾರನ ಹತ್ಯೆಗೆ ನ್ಯಾಯ ಒದಗಿಸುವುದಾಗಿ ರಾಹುಲ್ ಗಾಂಧಿ ಪ್ರತಿಜ್ಞೆ! Video

ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ: ಕಿರಿಯ CJP ಕಾರ್ಯಕರ್ತೆಗೆ ಕಿರುಕುಳ, ಬೆದರಿಕೆ ಹಾಕಿದ್ದಕ್ಕೆ ಸುಪ್ರೀಂ ಕೋರ್ಟ್ ಗರಂ!