ಸಂಪಾದಕೀಯ

ಪೊಲೀಸರ ವಿಶೇಷ ಕ್ರಮದ ಪರಿ

ಬೆಂಗಳೂರಿನಲ್ಲಿ, ಹಾಗೂ ರಾಜ್ಯದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಹೆಚ್ಚಿರುವ ವರದಿಗಳ ವಿಚಾರದಲ್ಲಿ ಕಂಡು ಬಂದ ಜನರ ಆಕ್ರೋಶವನ್ನು ಗಮನಿಸಿ, ಪೊಲೀಸರು ವಿಶೇಷ ಕ್ರಮಗಳನ್ನು ಕೈಗೊಂಡು ಬೀದಿ ಕಾಮಣ್ಣರಿಗೆ ಪಾಠ ಕಲಿಸುವುದರ ಜತೆಯಲ್ಲೇ ಮಹಿಳೆಯರಲ್ಲಿ ವಿಶ್ವಾಸ ಮೂಡಿಸುವ ಒಂದು ಆಂದೋಲನವನ್ನೇ ಆರಂಭಿಸಿದಂತಿದೆ.
ನಾಲ್ಕು ದಿನಗಳ ಆಂದೋಲನದಲ್ಲಿ ಮೊದಲ ದಿನವಾಗಿದ್ದ ಭಾನುವಾರ ಬೆಂಗಳೂರಿನಲ್ಲಿ ಮಹಿಳೆಯರನ್ನು ಚುಡಾಯಿಸಿ, ರೇಗಿಸಿ, ಗೋಳುಗುಟ್ಟಿಸಿ ಕಿರುಕುಳ ಕೊಡಲು ಪ್ರಯತ್ನಿಸಿದ್ದ 499 ಕಾಮಣ್ಣರಿಗೆ ತಕ್ಕ ಶಾಸ್ತಿಯಾಗಿದೆ. ಮೊದಲ ಅಪರಾಧಕ್ಕೆ 100 ರುಪಾಯಿ ಜುಲ್ಮಾನೆ ಅಥವಾ ಜೈಲು, ಎರಡನೇ ಅಪರಾಧಕ್ಕೆ ಒಂದು ತಿಂಗಳ ಜಾಮೀನಿಲ್ಲದ ಬಂಧನದ ಅಧಿಕಾರವಿರುವ ಪೊಲೀಸ್ ಕಾಯಿದೆಯ ವಿಧಿಗಳನ್ನು ಬಳಸುವ ಬೆದರಿಕೆಯನ್ನು ಒಡ್ಡಲಾಗಿದೆ. ಈ 'ಅಪರಾಧಕ್ಕೆ' ಸಾಕ್ಷಿಗಳ ಅಗತ್ಯ ಇದೆಯೋ ಇಲ್ಲವೋ ಗೊತ್ತಿಲ್ಲ. ಪೊಲೀಸ್ ಅಧಿಕಾರಿಗಳು ಸಾಮಾನ್ಯ ಜನರಂತೆ ಓಡಾಡಿ ಅಪರಾಧಿಗಳನ್ನು ಹಿಡಿದು, ನ್ಯಾಯಾಲಯಕ್ಕೆ ಕಳುಹಿಸುವ ವ್ಯವಸ್ಥೆ ಇದು. ನಿಜ, ಮಹಿಳೆಯರನ್ನು ಬಹಿರಂಗವಾಗಿ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವುದನ್ನು ನಾಗರಿಕ ಸಮಾಜ ಸಹಿಸಬಾರದು. ಅಂತಹ ಕೀಳು ಚಟುವಟಿಕೆಯನ್ನು ಮಟ್ಟಹಾಕಲು ದಂಡಪ್ರಯೋಗಕ್ಕೆ ಸರ್ಕಾರ ಮುಂದಾಗಿದೆ. ಅದನ್ನು ಯಾರೂ ಪ್ರಶ್ನಿಸುವಂತಿಲ್ಲ. ದಂಡದ ಜತೆಗೆ ಕಾಮಣ್ಣರ ಮಾನ ಮರ್ಯಾದೆಯೂ ಹರಾಜಾಗುತ್ತದೆ. ಆಗಲೇ ಬೇಕು.
ಆದರೆ, ಚುಡಾಯಿಸುವುದು, ರೇಗಿಸುವುದು, ಗೋಳುಗುಟ್ಟಿಸುವುದು - ಇಂತಹ ಪಡೆಗಳಿಗೆ ಕಾಯಿದೆಯ ನಿಘಂಟಿನ ಅರ್ಥ ವಿವರಣೆಯನ್ನು ಪ್ರಕಟಿಸಿಲ್ಲ. ಮಫ್ತಿ ಪೊಲೀಸ್ ವ್ಯವಸ್ಥೆ ಎಂದರೆ ನಕಲಿ ಪೊಲೀಸರ ಹಾವಳಿಗೆ, ಭ್ರಷ್ಟಾಚಾರಕ್ಕೆ, ಬಹಿರಂಗ ಆಹ್ವಾನ ನೀಡಿದಂತೆಯೇ ಆದೀತೇನೋ ಎನ್ನುವ ಅಳುಕೂ ನಾಗರಿಕ ಸಮಾಜದ ಕೆಲವು ವಲಯಗಳಲ್ಲಿ ಇದೆ. ಈಗಿನ ಕ್ರಮ ದುರುಪಯೋಗವಾಗದಂತೆ, ಅಮಾಯಕರನ್ನು ಗೋಳುಗುಟ್ಟಿಸಲು ಅವಕಾಶವಿಲ್ಲದಂತೆ ಜಾರಿಗೆ ತರುವುದು ಪೊಲೀಸರ ಕರ್ತವ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

US tariff deadline: ಅಮೆರಿಕದ ಶೇ. 50 ರಷ್ಟು ಸುಂಕ ಆಗಸ್ಟ್ 27 ರಿಂದ ಜಾರಿ; ಮಂಗಳವಾರ ಮಹತ್ವದ PMO ಸಭೆ; ಮೋದಿ ಹೇಳಿದ್ದೇನು? Video

ಕಾರುಗಳ ಬೆಲೆಯಲ್ಲಿ ಆಗಲಿದೆ ಭಾರಿ ಇಳಿಕೆ: GST ಪರಿಷ್ಕರಣೆಗಾಗಿ ಕಾದು ಕುಳಿತ ಗ್ರಾಹಕರು!

IADWS: ಭಾರತೀಯ ಸೇನೆ ಬತ್ತಳಿಕೆಗೆ 'ಲೇಸರ್ ನಿರ್ದೇಶಿತ ಹೊಸ ಅಸ್ತ್ರ': ದಂಗಾದ ಚೀನಾ, ಹೇಳಿದ್ದು ಏನು?

ಗೌರಿ-ಗಣೇಶ ಹಬ್ಬ: ಪರಿಸರ ಕಾಳಜಿ ಮರೆಯದಿರೋಣ, ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ! Video

SCROLL FOR NEXT