ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ಬಿಜೆಪಿ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ. ಬುಧವಾರ ಲೋಕಸಭೆ ಚುನಾವಣೆಗಾಗಿ ಹದಿನಾರನೇ ಅಭ್ಯರ್ಥಿ ಪಟ್ಟಿಯನ್ನು ಬಿಡುಗಡೆಗೊಳಿಸಿರುವ ಬಿಜೆಪಿ ಉತ್ತರ ಪ್ರದೇಶ ರಾಯ್ ಬರೇಲಿ ಕ್ಷೇತ್ರದಿಂಡ ಮಾಜಿ ಕಾಂಗ್ರೆಸ್ ನಾಯಕ ದಿನೇಶ್ ಪ್ರತಾಪ್ ಸಿಂಗ್ ಅವರಿಗೆ ಟಿಕೆಟ್ ನೀಡಿದೆ.
ದಿನೇಶ್ ಪ್ರತಾಪ್ ಸಿಂಗ್ ಕಳೆದ ವರ್ಷದ ಬಿಜೆಪಿಗೆ ಸೇರಿದ್ದರು. ಪ್ರಸ್ತುತ ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಲು ಕಮಲ ಪಕ್ಷ ಸಿಂಗ್ ಅವರನ್ನು ಆಯ್ಕೆ ಮಾಡಿದೆ.
ಇದೇ ವೇಳೆ ಮಾಜವಾದಿ ಪಕ್ಷದ ವರಿಷ್ಠ ನಾಯಕ ಮುಲಾಯುಂ ಸಿಂಗ್ ಯಾದವ್ ವಿರುದ್ಧ ಪ್ರೇಮ್ ಸಿಂಗ್, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಭೋಜ್ಪುರಿ ಸೂಪರ್ ಸ್ಟಾರ್ ದಿನೇಶ್ ಲಾಲ್ ಯಾದವ್ ನಿರ್ಹುವಾ ಸ್ಪರ್ಧಿಸಲಿದ್ದಾರೆ.
ಈಶಾನ್ಯ ಮುಂಬೈನಲ್ಲಿ ಕಿರಿತ್ ಸೋಮಯ್ಯ ಬದಲಿಗೆ ಮನೋಜ್ ಕೋಟಕ್ ಗೆ ಟಿಕೆಟ್ ನಿಡಲಾಗಿದೆ.