'ಅಬ್ ಹೊಗಾ ನ್ಯಾಯ್'ಧ್ಯೇಯವಾಕ್ಯದೊಂದಿಗೆ ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಅಧಿಕೃತ ಚಾಲನೆ 
ದೇಶ

'ಅಬ್ ಹೊಗಾ ನ್ಯಾಯ್'ಧ್ಯೇಯವಾಕ್ಯದೊಂದಿಗೆ ಕಾಂಗ್ರೆಸ್ ಪ್ರಚಾರ ಅಭಿಯಾನಕ್ಕೆ ಅಧಿಕೃತ ಚಾಲನೆ

ಯುಗಾದಿ ಮರುದಿನವಾದ ಭಾನುವಾರ ಕಾಂಗ್ರೆಸ್ ಪಾಳಯ ಮುಂಬರುವ ಲೋಕಸಭೆ ಚುನಾವಣೆಗೆ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ ."ಅಬ್ ಹೋಗಾ ನ್ಯಾಯ್" ಎಂಬ....

ನವದೆಹಲಿ: ಯುಗಾದಿ ಮರುದಿನವಾದ ಭಾನುವಾರ ಕಾಂಗ್ರೆಸ್ ಪಾಳಯ ಮುಂಬರುವ ಲೋಕಸಭೆ ಚುನಾವಣೆಗೆ ಪ್ರಚಾರ ಅಭಿಯಾನವನ್ನು ಪ್ರಾರಂಭಿಸಿದೆ ."ಅಬ್ ಹೋಗಾ ನ್ಯಾಯ್" ಎಂಬ ಧ್ಯೇಯ ವಾಕ್ಯದೊಡನೆ ಪಕ್ಷವು ಚುನಾವಣಾ ಪ್ರಚಾರ ಗಿತೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ "ಅನ್ಯಾಯ"ವನ್ನು ಕೊನೆಗಾಣಿಸಲು ಕಾಂಗ್ರೆಸ್ ಬೆಂಬಲಿಸಿ ಎಂದು ಜನತೆಗೆ ಕರೆ ನೀಡಲು ಕೈ ಪಾಳಯ ಮುಂದಾಗಿದೆ.
ದೇಶದ ಬಡವರಿಗೆ ಆರ್ಥಿಕ ಭದ್ರತೆ ಖಾತ್ರಿಪಡಿಸುವ "ನ್ಯಾಯ್" ಯೋಜನೆಯಲ್ಲಿ ಕಾಂಗ್ರೆಸ್ ಅಭಿಯಾನ ಕೇಂದ್ರೀಕೃತವಾಗಿದೆ. ಎಂದು ಪಕ್ಷದ ಹಿರಿಯ ನಾಯಕ ಆನಂದ್ ಶರ್ಮಾ ಹೇಳಿದ್ದಾರೆ."ನ್ಯಾಯ್" ಎಂಬ ಶಬ್ದವು ದ್ದೇಶಿತ ಕನಿಷ್ಟ ಆದಾಯ ಖಾತರಿ ಯೋಜನೆಗೆ ಮಾತ್ರ ಸೀಮಿತವಾಗಿಲ್ಲ,  ಸಮಾಜದ ಎಲ್ಲಾ ವರ್ಗಗಳಿಗೆ ನ್ಯಾಯವನ್ನು ದೊರಕಿಸಿಕೊಡುವುದು ಇದರ ವ್ಯಾಪ್ತಿಗೆ ಬರಲಿದೆ ಎಂದು ಅವರು ವಿವರಿಸಿದರು
ಜಾವೇದ್ ಅಖ್ತರ್ ಅವರಿಂದ ಪಕ್ಷದ ಪ್ರಚಾರ ಗೀತೆ (ಥೀಮ್ ಸಾಂಗ್) ರಚನೆಯಾಗಿದೆ.ಹಾಗೆಯೇ ಪ್ರಚಾರ ಅಭಿಯಾನದ ವೀಡಿಯೋವನ್ನು ನಿಖಿಲ್ ಅಡ್ವಾಣಿ ಚಿತ್ರೀಕರಿಸಿದ್ದಾರೆ.
ಈ ಹಾಡು ಹಾಗೂ ವೀಡಿಯೋ ನಿರ್ಮಾಣವನ್ನು ಪರ್ಸೆಪ್ಟ್ ಎಡ್ಜ್ ಸಂಸ್ಥೆ ನಿರ್ವಹಿಸಿದೆ.
ಇನ್ನು ಈ ಥೀಮ್ ಸಾಂಗ್ ನಲ್ಲಿದ್ದ ಕೆಲ ಸಾಲುಗಳನ್ನು ಚುನಾವಣಾ ಆಯೋಗದ ಆಕ್ಷೇಪದ ಹಿನೆಲೆಯಲ್ಲಿ ತೆಗೆದುಹಾಕಲಾಗಿದೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT