ಬದೌನ್: ರಾಮ್ ಲಲ್ಲಾ ಮುಂದೆ ತಲೆಬಾಗದವರಿಗೆ ಶ್ರೀರಾಮನ ಭಕ್ತರ ಮತಗಳು ಸಿಗುವುದಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಟಾಂಗ್ ನೀಡಿದ್ದಾರೆ.
ನಿನ್ನೆಯಷ್ಟೇ ಅಯೋಧ್ಯಗೆ ಭೇಟಿ ನೀಡಿದ್ದ ಪ್ರಿಯಾಂಕಾ ಗಾಂಧಿ ವಿವಾದಿತ ರಾಮ್ ಲಲ್ಲಾ ದೇವಸ್ಥಾನಕ್ಕೆ ಭೇಟಿ ನೀಡದೆ, ಅದರ ಬಳಿ ಇದ್ದ ಗರ್ಹಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ಇಂದು ಉತ್ತರ ಪ್ರದೇಶ ಬದೌನ್ ನಲ್ಲಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಸ್ಮೃತಿ ಇರಾನಿ, ಈ ಜನರ ರಾಜಕಾರಣ ನೋಡಿ.... ಅವರು ಅಯೋಧ್ಯಗೆ ಹೋಗುತ್ತಾರೆ. ಆದರೆ ರಾಮ್ ಲಲ್ಲಾಗೆ ನಮಸ್ಕರಿಸುವುದಿಲ್ಲ. ಯಾರು ಮತಗಳನ್ನು ಕಳೆದುಕೊಳ್ಳುವ ಭಯದಿಂದ ರಾಮ್ ಲಲ್ಲಾಗೆ ತಲೆಬಾಗುವುದಿಲ್ಲವೋ ಅವರಿಗೆ ರಾಮ ಭಕ್ತರ ಮತಗಳು ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಚುನಾವಣೆ ದಿನದಂದು ರಾಮ ಭಕ್ತರು ಮತಗಟ್ಟೆಗೆ ತೆರಳಿ ಅಭಿವೃದ್ಧಿ ನೋಡಿ ಮತ ಚಲಾಯಿಸುತ್ತಾರೆ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos