ದೇಶ

ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತ ಸಾಯುವುದು ಒಳ್ಳೆಯದು: ಪ್ರಿಯಾಂಕ ವಾದ್ರ

Srinivas Rao BV
ನವದೆಹಲಿ: ಕಾಂಗ್ರೆಸ್ ನಾಯಕಿ, ಪ್ರಿಯಾಂಕ ವಾದ್ರ ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತಲೂ ಸಾಯುವುದು ಒಳ್ಳೆಯದು ಎಂದು ಹೇಳಿದ್ದಾರೆ.
ಕಾಂಗ್ರೆಸ್ ತನ್ನದೇ ಸ್ವಂತ ಶಕ್ತಿಯ ಮೇಲೆ ಚುನಾವಣೆ ಎದುರಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳಿದ್ದೇನೆ. ಬಹುತೇಕ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಪ್ರಬಲ ಸ್ಪರ್ಧೆಯೊಡ್ಡುತ್ತಿದ್ದಾರೆ. ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಿಂತಲೂ ನಾನು ಸಾಯುವುದು ಒಳ್ಳೆಯದು ಎಂದು ಹೇಳಿದ್ದೇನೆ, ನಾನು ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆಸಿರುವ ಸಂಶೋಧನೆ ಹಾಗೂ ಕೆಲಸಗಳು ಪ್ರಬಲ ಸ್ಪರ್ಧೆ ನೀಡುವುದಾಗಿದೆ ಅಥವಾ ಬಿಜೆಪಿಗೆ ಹೆಚ್ಚಿನ ಮತಗಳನ್ನು ಹೋಗದೇ ಇರುವಂತೆ ತಡೆಯುವುದಾಗಿದೆ ಎಂದು ಪ್ರಿಯಾಂಕ ವಾದ್ರ ಹೇಳಿದ್ದಾರೆ. 
ದೇಶವೇ ಮೊದಲ ಆದ್ಯತೆ, ದೇಶವನ್ನು ನಾಶ ಮಾಡುವ ಸಿದ್ಧಾಂತವನ್ನು ಮಣಿಸುವುದೇ ನಮ್ಮ ಆದ್ಯತೆ ಎಂದು ಪ್ರಿಯಾಂಕ ವಾದ್ರ ಹೇಳಿದ್ದಾರೆ. 
SCROLL FOR NEXT