ದೇಶ

ಮಮತಾ ಬ್ಯಾನರ್ಜಿ ಚುನಾವಣಾ ರ‍್ಯಾಲಿಯಲ್ಲಿ ಚಂದ್ರಬಾಬು ನಾಯ್ಡು ಭಾಗಿ

Nagaraja AB

ಅಮರಾವತಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಚುನಾವಣಾ ರ‍್ಯಾಲಿಯಲ್ಲಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಪಾಲ್ಗೊಳ್ಳಲಿದ್ದಾರೆ.

ಕೊಲ್ಕತ್ತಾಕ್ಕೆ ಬುಧವಾರ ಬೆಳಗ್ಗೆ ಆಗಮಿಸಲಿರುವ ಚಂದ್ರಬಾಬು ನಾಯ್ಡು ಜಾರ್ ಗ್ರಾಮ್ ಹಾಗೂ ಹಲ್ಡಿಯಾದಲ್ಲಿ ನಡೆಯಲಿರುವ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗುವ ಮೂಲಕ ಮಮತಾ ಬ್ಯಾನರ್ಜಿ ಪರ ಮತ ಯಾಚಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಹಲ್ಡಿಯಾದಲ್ಲಿ ನಾಳೆ ರಾತ್ರಿ ಕಳೆದ ನಂತರ ಗುರುವಾರ ಖಾರಾಗ್ ಪುರದಲ್ಲಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಚಂದ್ರಬಾಬು ನಾಯ್ಡು ಭಾಷಣ ಮಾಡಲಿದ್ದಾರೆ.

ಖಾರಗ್ ಪುರದಲ್ಲಿ ಪ್ರಚಾರದ ನಂತರ ಕೊಲ್ಕತ್ತಾಕ್ಕೆ ಚಂದ್ರಬಾಬು ನಾಯ್ಡು ತೆರಳಲಿದ್ದು, ಅಲ್ಲಿ ಮಮತಾ ಬ್ಯಾನರ್ಜಿ ಜೊತೆ ಮಾತುಕತೆ ನಡೆಸಲಿದ್ದಾರೆ. ನಂತರ ಆಂಧ್ರ ಪ್ರದೇಶಕ್ಕೆ ವಾಪಾಸ್ ಆಗಲಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT