ದೇಶ

ಮುಂಬೈ: ದೇವಾಲಯಕ್ಕೆ ಭೇಟಿ ನೀಡಿದ ರಾಬಾರ್ಟ್ ವಾದ್ರಾಗೆ ಮೋದಿ ಮೋದಿ ಘೋಷಣೆಗೆ ಸ್ವಾಗತ

Srinivas Rao BV
ಮುಂಬೈ: ಉದ್ಯಮಿ ರಾಬರ್ಟ್ ವಾಧ್ರ ಮುಂಬೈ ನ ಪ್ರಸಿದ್ಧ ಮುಂಬಾದೇವಿ ದೇವಾಲಯಕ್ಕೆ ಭೇಟಿ ನೀಡಿದ್ದು, ಮೋದಿ ಮೋದಿ ಘೋಷಣೆಯ ಸ್ವಾಗತ ದೊರೆತಿದೆ. 
ವಾಧ್ರ ದೇವಾಲಯಕ್ಕೆ ಆಗಮಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಮೋದಿ, ಮೋದಿ ಜಿಂದಾಬಾದ್, ಭಾರತ್ ಮಾತಾ ಕೀ ಜೈ ಎಂಬ ಘೋಷಣೆ ಕೂಗಿದ್ದಾರೆ. ಅಷ್ಟೇ ಅಲ್ಲದೇ ಕೆವಲರು ವಾದ್ರ ಅವರನ್ನು ಮೂದಲಿಸುವುದಕ್ಕೂ ಯತ್ನಿಸಿದ್ದಾರೆ. ಆದರೆ ಪೊಲೀಸರು ಮಧ್ಯಪ್ರವೇಶಿಸಿ ಅದನ್ನು ತಡೆಗಟ್ಟಿದ್ದಾರೆ. 
ನಾನು ದೇವಾಲಯಕ್ಕೆ ಬಂದಿರುವುದು ದೇವರ ಆಶೀರ್ವಾದ ಪಡೆಯುವುದಕ್ಕಾಗಿ ಇಲ್ಲಿ ಯಾವುದೇ ರಾಜಕೀಯ ಬೇಡ, ಎಂದು ವಾದ್ರ ಹೇಳಿದ್ದಾರೆ. 
SCROLL FOR NEXT