ಬಿ. ಕೆ. ಹರಿಪ್ರಸಾದ್ 
ಕರ್ನಾಟಕ

ಹೊರಗಿನವ ಎಂಬ ಆರೋಪ ಸರಿಯಲ್ಲ, ಮೋದಿಯೇ ಪ್ರಮುಖ ಎದುರಾಳಿ, ತೇಜಸ್ವಿ ಅಲ್ಲ- ಬಿ. ಕೆ. ಹರಿ ಪ್ರಸಾದ್

ಹೊರಗಡೆಯವರು ಎಂಬ ಆರೋಪವನ್ನು ನಿರಾಕರಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಕೆ . ಹರಿಪ್ರಸಾದ್ ನನ್ನಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮುಖ ಪ್ರತಿಸ್ಪರ್ಧಿ, ತೇಜಸ್ವಿ ಸೂರ್ಯ ಎದುರಾಳಿ ಅಲ್ಲ ಎಂದಿದ್ದಾರೆ.

ಬೆಂಗಳೂರು: ಹೊರಗಡೆಯವರು ಎಂಬ ಆರೋಪವನ್ನು ನಿರಾಕರಿಸಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ. ಕೆ . ಹರಿಪ್ರಸಾದ್ ನನ್ನಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಪ್ರಮುಖ ಪ್ರತಿಸ್ಪರ್ಧಿ, ತೇಜಸ್ವಿ ಸೂರ್ಯ ಎದುರಾಳಿ  ಅಲ್ಲ ಎಂದಿದ್ದಾರೆ.

1991ರಿಂದಲೂ ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಂಚಿಕೆ ಹೆಚ್ಚಿನ ಪ್ರಮಾಣದಲ್ಲಾಗುವ ಭರವಸೆ ಇದ್ದು, ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ  ವಿರುದ್ಧ ಗೆಲ್ಲುವ ವಿಶ್ವಾಸ ಇರುವುದಾಗಿ ಹೇಳಿದ್ದಾರೆ.

ಹೊರಗಡೆಯವರು ಎಂಬ ಆರೋಪವನ್ನು ನಿರಾಕರಿಸುವ ಹರಿಪ್ರಸಾದ್ , ತಾನೂ ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿದ್ದು, ಇಲ್ಲಿನ ಜನತೆಗೆ ಚೆನ್ನಾಗಿ ಗೊತ್ತಿದೆ. ಬಿಜೆಪಿಗೆ ಮೋದಿ ಬಿಟ್ಟರೆ ಬೇರೆ ಮುಖಗಳೇ ಇಲ್ಲದಿರುವುದರಿಂದ ಇದು ಮೋದಿ ಚುನಾವಣೆ ಆಗಿದೆ. ಬಿಜೆಪಿ ಎಲ್ಲಾ ಅಭ್ಯರ್ಥಿಗಳು ಇದು ನನ್ನ ಚುನಾವಣೆ ಅಲ್ಲ, ಮೋದಿ ಚುನಾವಣೆ ಎನ್ನುತ್ತಿದ್ದಾರೆ. ಆದಕ್ಕಾಗಿ ಮೋದಿ, ಬಿಜೆಪಿ ವಿರುದ್ದ ಹೋರಾಟ ನಡೆಸುವುದಾಗಿ ನುಡಿದರು.

ಬೆಂಗಳೂರು ದಕ್ಷಿಣ ಕ್ಷೇತ್ರ ಇತರ ಕಾರಣಗಳಿಂದಾಗಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ ಹೊರತು ತನ್ನ ಎದುರಾಳಿ ತೇಜಸ್ವಿ ಸೂರ್ಯ ಅಂತಾ ಏನಿಲ್ಲ, ಅದಕ್ಕೆ ಬೇರೆ ಕಾರಣಗಳಿವೆ. ಬೆಂಗಳೂರು ಬಿಟ್ಟಕ್ಕಾಗಿ ಬೇರೆಯ ಕಡೆಯ ಯಾವುದೇ ಅಭ್ಯರ್ಥಿಗಳು ಇದು ಮೋದಿ ಚುನಾವಣೆ ಎನ್ನುತ್ತಿದ್ದಾರೆ. ಬಿಜೆಪಿಗೆ ಮೋದಿ ಬಿಟ್ಟು ಬೇರೆಯ ಮುಖಗಳಿದ್ದರೆ ಅವರಿಗೆ ವೋಟ್ ಹಾಕಿ ಎಂದು ಜನರಿಗೆ ಹೇಳುತ್ತಿದ್ದರು. ಬೇಕಾದರೆ ಪ್ರಚಾರಕ್ಕೆ ಹೋಗಿ ಗಮನಿಸಿ ನನ್ನಗೆ ಮತ ನೀಡಿ ಎಂದು ಕೇಳುವುದಿಲ್ಲ, ಮೋದಿಗಾಗಿ ವೋಟು ಕೊಡಿ ಅಂತಿದ್ದಾರೆ ಎಂದು ಟೀಕಿಸಿದರು.

ಅಭಿವೃದ್ದಿ ಕಾರ್ಯಕ್ರಮಗಳು, ಜಿಎಸ್ ಟಿ , ನೋಟ್ ಅಮಾನ್ಯತೆ  ಬಗ್ಗೆ ಮೋದಿ ಮೌನವನ್ನು  ಹರಿಪ್ರಸಾದ್ ಪ್ರಶ್ನಿಸಿದರು.  ಒಂದೇ  ಒಂದು ಸುದ್ದಿಗೋಷ್ಠಿ ನಡೆಸಿದ 76 ಇಂಚು ಎದೆಯುಳ್ಳ ಮೋದಿ ಆಡಳಿತದಿಂದ ಜನತೆ ಬೇಸತ್ತಿದ್ದು, ಈ ಸರ್ಕಾರವನ್ನು ಕಿತ್ತೊಗೆಲು ಬಯಸುತ್ತಿದ್ದಾರೆ ಎಂದು ಹರಿಪ್ರಸಾದ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TNIE Exclusive | Air India ವಿಮಾನದಲ್ಲಿ ಭಾರೀ ತಾಂತ್ರಿಕ ದೋಷ..! Phuket-Delhi ವಿಮಾನ 300 ಅಡಿ ಕುಸಿತಕ್ಕೆ Triple hydraulic systems ವೈಫಲ್ಯ ಕಾರಣ..?

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

'Toxic': ಸಿನಿಮಾ ಮಾಡುವುದು ಸುಲಭವಲ್ಲ, ಇಡೀ ಪ್ರಪಂಚದ ವಿರುದ್ಧ ಯುದ್ಧಕ್ಕೆ ಹೋದಂತೆ': ವದಂತಿಗಳ ನಡುವೆ ಆ ವ್ಯಕ್ತಿ ಬಂಡೆಯಂತೆ ನಿಂತರು- ಯಶ್!

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ