ಮಂಡ್ಯ: ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬ ಗಾದೆ ಮಾತಿನಂತೆ ಫಲಿತಾಂಶಕ್ಕೆ ಮುಂಚೆಯೇ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸಂಸದರಾಗಿದ್ದಾರೆ. ಫಲಿತಾಂಶ ಪ್ರಕಟಣೆಗೆ ಇನ್ನೂ ಒಂದೂ ತಿಂಗಳಿಗೂ ಅಧಿಕ ದಿನಗಳು ಬಾಕಿ ಇದ್ದರೂ ಆಗಲೇ ನಿಖಿಲ್ ಕುಮಾರಸ್ವಾಮಿ ಸಂಸದರಾಗಿಬಿಟ್ಟಿದ್ದಾರೆ.
ಹೀಗೊಂದು ನಾಮಫಲಕವನ್ನು ನಿಖಿಲ್ ಅಭಿಮಾನಿಯೊಬ್ಬರು ಮಾಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿಯೂ ಹರಿಯಬಿಟ್ಟಿದ್ದಾರೆ. ಇದು ಸಾಕಷ್ಟು ವೈರಲ್ ಆಗಿದೆ. ಕರ್ನಾಟಕ ಜೆಡಿಎಸ್ ಫೇಸ್ ಬುಕ್ ಪೇಜ್ ನಲ್ಲಿ ಈ ಬೋರ್ಡ್ ರಾರಾಜಿಸುತ್ತಿದೆ. ನಿಖಿಲ್ ಅಭಿಮಾನಿಯೊಬ್ಬರು ಈ ಉಡುಗೊರೆ ನೀಡಿದ್ದಾರೆ ಎಂದು ಅಡಿಬರಹದಲ್ಲಿ ಈ ಚಿತ್ರವನ್ನು ಹಾಕಲಾಗಿದೆ. ಸುಮಲತಾ ಅಂಬರೀಷ್ ಅವರ ಫೇಸ್ ಬುಕ್ ಪೇಜ್ ನಲ್ಲೂ ಈ ಬೋರ್ಡ್ ಹಾಕಲಾಗಿದ್ದು, ಎಲ್ಲೊ ಹೋಗ್ಬಿಟ್ರಿ ಎಂದು ವ್ಯಂಗ್ಯ ಮಾಡಲಾಗಿದೆ.