ತಾನಾಜಿ ಸಾವಂತ್  
ದೇಶ

ಸಂಪುಟ ಸಭೆಯಲ್ಲಿ ಅಜಿತ್ ಪವಾರ್ ಪಕ್ಕದಲ್ಲಿ ಕೂತರೆ ವಾಂತಿ ಬರುವಂತಾಗುತ್ತದೆ: ಶಿವಸೇನೆ ಸಚಿವ ತಾನಾಜಿ ಸಾವಂತ್

ಎನ್ ಸಿಪಿ ನಾಯಕ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ. ನಾನೆಂದೂ ಎನ್ ಸಿಪಿ ನಾಯಕತ್ವದ ಸಾಮೀಪ್ಯದಲ್ಲಿ ಇರಲಿಲ್ಲ. ಅವರ ಪಕ್ಕದಲ್ಲಿ ಕುಳಿತದ್ದೇ ಶಾರೀರಿಕ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಯಿತು

ಮುಂಬಯಿ: ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿವೆ, ಆದರೆ ಮಹಾಮೈತ್ರಿಕೂಟದಲ್ಲಿನ ಬಿರುಕು ಪದೇ ಪದೇ ಗೋಚರಿಸುತ್ತಿದೆ. ಇದಕ್ಕೆ ಬೆಂಬಲ ನೀಡುವಂತೆ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ,

ಎನ್ ಸಿಪಿ ನಾಯಕ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ. ನಾನೆಂದೂ ಎನ್ ಸಿಪಿ ನಾಯಕತ್ವದ ಸಾಮೀಪ್ಯದಲ್ಲಿ ಇರಲಿಲ್ಲ. ಅವರ ಪಕ್ಕದಲ್ಲಿ ಕುಳಿತದ್ದೇ ಶಾರೀರಿಕ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಯಿತು ಎಂದು ಸಾವಂತ್ ಹೇಳಿದ್ದಾರೆ. ಜೀವನದಲ್ಲಿ ನಾನೆಂದೂ ಎನ್ ಸಿಪಿ ಜತೆಗೆ ಇರಲಿಲ್ಲ. ನಾವು ಅಕ್ಕಪಕ್ಕ ಕುಳಿತೆವು. ಆದರೆ ಹೊರಬಂದ ಬಳಿಕ ವಾಂತಿ ಬರುವಂತಾಯಿತು ಎಂದು ವಿವರಿಸಿದ್ದಾರೆ. ನಾನು ಕಟ್ಟಾ ಶಿವಸೇನೆಯ ಸೈನಿಕ. ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆ ನಾನು ಜೀವನದಲ್ಲಿ ಎಂದೂ ಸನಿಹದಲ್ಲಿ ಇರಲಿಲ್ಲ. ವಿದ್ಯಾರ್ಥಿ ಜೀವನದಿಂದಲೂ ಅಂಥ ಪರಿಸ್ಥಿತಿ ಬರಲಿಲ್ಲ. ಇದು ವಾಸ್ತವ. ಇಂದು ಕೂಡಾ ಸಂಪುಟ ಸಭೆಯಲ್ಲಿ ನಾನು ಅವರ ಪಕ್ಕ ಕುಳಿತರೆ ಹೊರಬಂದ ಬಳಿಕ ವಾಂತಿ ಮಾಡಿಕೊಳ್ಳುವಂತಾಗುತ್ತದೆ. ಈ ಹೇಳಿಕೆಗೆ ನಾನು ಬದ್ಧ ಎಂದು ಸಾರ್ವಜನಿಕ ಸಮಾರಂಭದಲ್ಲಿ ಹೇಳಿದರು.

ಆದರೆ ಎನ್ ಸಿಪಿ ನಾಯಕರು ಇದಕ್ಕೆ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದಾರೆ. "ತಾನಾಜಿ ಸಾವಂತ್ ಅವರ ವಾಂತಿಗೆ ಕಾರಣ ಏನು ಗೊತ್ತಿಲ್ಲ. ತಾನಾಜಿ ಸಾವಂತ್ ಆರೋಗ್ಯ ಸಚಿವರು. ಬಹುಶಃ ಆರೋಗ್ಯ ಪರಿಸ್ಥಿತಿ ಅದಕ್ಕೆ ಕಾರಣವಾಗಿರಬೇಕು. ಆದರೆ ಮಹಾಯುತಿಯಲ್ಲಿ ಇದ್ದುಕೊಂಡು, ಅವರು ವಾಂತಿ ಮಾಡಿಕೊಳ್ಳುತ್ತಾರೆ ಎಂದಾದರೆ, ಅದಕ್ಕೆ ಕಾರಣ ಏನು ಎಂದು ಏಕನಾಥ್ ಶಿಂಧೆಯವರೇ ಹೇಳಬೇಕು" ಎಂದು ಎನ್ ಸಿಪಿ ಶಾಸಕ ಅಮೋಲ್ ಮಿಟ್ಕರಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

SCROLL FOR NEXT