ತಾನಾಜಿ ಸಾವಂತ್  
ದೇಶ

ಸಂಪುಟ ಸಭೆಯಲ್ಲಿ ಅಜಿತ್ ಪವಾರ್ ಪಕ್ಕದಲ್ಲಿ ಕೂತರೆ ವಾಂತಿ ಬರುವಂತಾಗುತ್ತದೆ: ಶಿವಸೇನೆ ಸಚಿವ ತಾನಾಜಿ ಸಾವಂತ್

ಎನ್ ಸಿಪಿ ನಾಯಕ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ. ನಾನೆಂದೂ ಎನ್ ಸಿಪಿ ನಾಯಕತ್ವದ ಸಾಮೀಪ್ಯದಲ್ಲಿ ಇರಲಿಲ್ಲ. ಅವರ ಪಕ್ಕದಲ್ಲಿ ಕುಳಿತದ್ದೇ ಶಾರೀರಿಕ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಯಿತು

ಮುಂಬಯಿ: ಮುಂಬರುವ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟಾಗಿದ್ದೇವೆ ಎಂದು ತೋರಿಸಿಕೊಳ್ಳುತ್ತಿವೆ, ಆದರೆ ಮಹಾಮೈತ್ರಿಕೂಟದಲ್ಲಿನ ಬಿರುಕು ಪದೇ ಪದೇ ಗೋಚರಿಸುತ್ತಿದೆ. ಇದಕ್ಕೆ ಬೆಂಬಲ ನೀಡುವಂತೆ ಆರೋಗ್ಯ ಸಚಿವ ತಾನಾಜಿ ಸಾವಂತ್ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ,

ಎನ್ ಸಿಪಿ ನಾಯಕ ಅಜಿತ್ ಪವಾರ್ ಪಕ್ಕ ಕುಳಿತರೆ ವಾಂತಿ ಬರುತ್ತೆ ಎಂದು ಸಚಿವ ತಾನಾಜಿ ಸಾವಂತ್ ಹೇಳಿದ್ದಾರೆ. ನಾನೆಂದೂ ಎನ್ ಸಿಪಿ ನಾಯಕತ್ವದ ಸಾಮೀಪ್ಯದಲ್ಲಿ ಇರಲಿಲ್ಲ. ಅವರ ಪಕ್ಕದಲ್ಲಿ ಕುಳಿತದ್ದೇ ಶಾರೀರಿಕ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಯಿತು ಎಂದು ಸಾವಂತ್ ಹೇಳಿದ್ದಾರೆ. ಜೀವನದಲ್ಲಿ ನಾನೆಂದೂ ಎನ್ ಸಿಪಿ ಜತೆಗೆ ಇರಲಿಲ್ಲ. ನಾವು ಅಕ್ಕಪಕ್ಕ ಕುಳಿತೆವು. ಆದರೆ ಹೊರಬಂದ ಬಳಿಕ ವಾಂತಿ ಬರುವಂತಾಯಿತು ಎಂದು ವಿವರಿಸಿದ್ದಾರೆ. ನಾನು ಕಟ್ಟಾ ಶಿವಸೇನೆಯ ಸೈನಿಕ. ಕಾಂಗ್ರೆಸ್ ಹಾಗೂ ಎನ್ ಸಿಪಿ ಜತೆ ನಾನು ಜೀವನದಲ್ಲಿ ಎಂದೂ ಸನಿಹದಲ್ಲಿ ಇರಲಿಲ್ಲ. ವಿದ್ಯಾರ್ಥಿ ಜೀವನದಿಂದಲೂ ಅಂಥ ಪರಿಸ್ಥಿತಿ ಬರಲಿಲ್ಲ. ಇದು ವಾಸ್ತವ. ಇಂದು ಕೂಡಾ ಸಂಪುಟ ಸಭೆಯಲ್ಲಿ ನಾನು ಅವರ ಪಕ್ಕ ಕುಳಿತರೆ ಹೊರಬಂದ ಬಳಿಕ ವಾಂತಿ ಮಾಡಿಕೊಳ್ಳುವಂತಾಗುತ್ತದೆ. ಈ ಹೇಳಿಕೆಗೆ ನಾನು ಬದ್ಧ ಎಂದು ಸಾರ್ವಜನಿಕ ಸಮಾರಂಭದಲ್ಲಿ ಹೇಳಿದರು.

ಆದರೆ ಎನ್ ಸಿಪಿ ನಾಯಕರು ಇದಕ್ಕೆ ಸೌಮ್ಯವಾಗಿ ಪ್ರತಿಕ್ರಿಯಿಸಿದ್ದಾರೆ. "ತಾನಾಜಿ ಸಾವಂತ್ ಅವರ ವಾಂತಿಗೆ ಕಾರಣ ಏನು ಗೊತ್ತಿಲ್ಲ. ತಾನಾಜಿ ಸಾವಂತ್ ಆರೋಗ್ಯ ಸಚಿವರು. ಬಹುಶಃ ಆರೋಗ್ಯ ಪರಿಸ್ಥಿತಿ ಅದಕ್ಕೆ ಕಾರಣವಾಗಿರಬೇಕು. ಆದರೆ ಮಹಾಯುತಿಯಲ್ಲಿ ಇದ್ದುಕೊಂಡು, ಅವರು ವಾಂತಿ ಮಾಡಿಕೊಳ್ಳುತ್ತಾರೆ ಎಂದಾದರೆ, ಅದಕ್ಕೆ ಕಾರಣ ಏನು ಎಂದು ಏಕನಾಥ್ ಶಿಂಧೆಯವರೇ ಹೇಳಬೇಕು" ಎಂದು ಎನ್ ಸಿಪಿ ಶಾಸಕ ಅಮೋಲ್ ಮಿಟ್ಕರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ