ಅಚಿಲ್ಸ್ ಬೆಕ್ಕು 
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಸೆಮಿಫೈನಲ್ ನಲ್ಲಿ ಫ್ರಾನ್ಸ್ ವಿರುದ್ಧ ಬೆಲ್ಜಿಯಂಗೆ ಗೆಲುವು, ಅಚಿಲ್ಸ್ ಬೆಕ್ಕು ಭವಿಷ್ಯ!

ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಮಂಗಳವಾರ ಬೆಲ್ಜಿಯಂ ಮತ್ತು ಪ್ರಬಲ ಫ್ರಾನ್ಸ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬೆಲ್ಡಿಯಂ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.

ಮಾಸ್ಕೋ: ಫೀಫಾ ವಿಶ್ವಕಪ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಮಂಗಳವಾರ ಬೆಲ್ಜಿಯಂ ಮತ್ತು ಪ್ರಬಲ ಫ್ರಾನ್ಸ್ ನಡುವೆ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಬೆಲ್ಡಿಯಂ ತಂಡ ಗೆಲುವು ಸಾಧಿಸಲಿದೆ ಎಂದು ಹೇಳಲಾಗುತ್ತಿದೆ.
ಹೌದು.. ಸೆಮಿಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಸೋಲು ಗೆಲುವಿನ ಲೆಕ್ಕಾಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಏತನ್ಮಧ್ಯೆ ಫೀಫಾ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಭವಿಷ್ಯದ ಮೂಲಕ ಭಾರಿ ಸದ್ದು ಮಾಡಿರುವ ಅಚಿಲ್ಸ್ ಬೆಕ್ಕು ಮತ್ತೆ ಸುದ್ದಿಗೆ ಗ್ರಾಸವಾಗಿದ್ದು, ಈ ಬಾರಿ ಸೆಮಿಫೈನಲ್ ಪಂದ್ಯದ ಕುರಿತ ಭವಿಷ್ಯ ನುಡಿಯುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದೆ. 
ಟೂರ್ನಿಯಲ್ಲಿ ಸದ್ಯ ಎರಡೂ ತಂಡಗಳು ಸಮಬಲವಾಗಿದ್ದು, ಈ ಹಿಂದಿನ ಅಂಕಿ ಅಂಶಗಳು ಫ್ರಾನ್ಸ್ ಪರ ಇದೆ. 
ಅಚಿಲ್ಸ್ ಪ್ರಕಾರ ಇಂದು ಗೆಲ್ಲುವವರು ಯಾರು?
ಇಂದು ನಡೆಯುವ ಮೊದಲ ಸೆಮಿಫೈನಲ್ ನಲ್ಲಿ ಪಂದ್ಯದಲ್ಲಿ ಪ್ರಬಲ ಫ್ರಾನ್ಸ್ ಮತ್ತು ಬೆಲ್ಜಿಯಂ ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲಿ ಫ್ರಾನ್ಸ್ ತಂಡವನ್ನು ಬೆಲ್ಜಿಯಂ ತಂಡ ಮಣಿಸಲಿದೆ ಎಂದು ಅಚಿಲ್ಸ್ ಬೆಕ್ಕು ಭವಿಷ್ಯ ನುಡಿದಿದೆ. ಈ ಹಿಂದೆ ಆಚಿಲ್ಸ್ ನುಡಿದಿದ್ದ ಭವಿಷ್ಯ ನಿಜವಾಗಿದ್ದು ಉದ್ಘಾಟನಾ ಪಂದ್ಯದಲ್ಲಿ ರಷ್ಯಾ ಗೆಲುವು ಸಾಧಿಸಲಿದೆ ಎಂದಿತ್ತು. ಅದರಂತೆ ರಷ್ಯಾ ಹಾಗೂ ಸೌದಿ ಅರೇಬಿಯಾ ನಡುವಣ ಪಂದ್ಯದಲ್ಲಿ ರಷ್ಯಾ 5-0 ಅಂತರದ ಗೆಲುವು ದಾಖಲಿಸಿತ್ತು. 
ಇದೀಗ ಸೆಮಿಸ್ ಬಗ್ಗೆ ಆಚಿಲ್ಸ್ ಭವಿಷ್ಯ ನುಡಿದಿದ್ದು, ಯಾರಿಗೆ ವಿಜಯಲಕ್ಷ್ಮಿ ಒಲಿಯಲಿದೆ ಎಂದು ಕಾದು ನೋಡಬೇಕು. ಬಿಳಿ ಬಣ್ಣದ ಆಚಿಲ್ಸ್ ಗೆ ಕಿವಿ ಕೇಳದಿರುವುದು ವಿಶೇಷ. ನೀಲಿ ಕಂಗಳನ್ನು ಹೊಂದಿರುವ ಈ ಬೆಕ್ಕು ಭವಿಷ್ಯ  ನುಡಿಯುವ ಮೂಲಕ ಪ್ರಸಿದ್ದಿ ಪಡೆದಿತ್ತು. ಇಂದು ರಾತ್ರಿ 11.30ಕ್ಕೆ ಮೊದಲ ಸೆಮಿ ಫೈನಲ್ ಪಂದ್ಯ ಆರಂಭವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT