ಉಪ್ಪು 
ಆರೋಗ್ಯ-ಜೀವನಶೈಲಿ

ಅಧಿಕ ಉಪ್ಪು ಸೇವನೆಯಿಂದ ಮೂಳೆಗಳು ದುರ್ಬಲ

ನಮ್ಮ ದೇಹಕ್ಕೆ ಉಪ್ಪಿನ ಅಗತ್ಯತೆ ಏನು ಮತ್ತು ಎಷ್ಟು ಉಪ್ಪ ತಿನ್ನಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡಿರಲೇಬೇಕು...

ನಮ್ಮ ದೇಹಕ್ಕೆ ಉಪ್ಪಿನ ಅಗತ್ಯತೆ ಏನು ಮತ್ತು ಎಷ್ಟು ಉಪ್ಪ ತಿನ್ನಬೇಕು ಎನ್ನುವುದರ ಬಗ್ಗೆ ತಿಳಿದುಕೊಂಡಿರಲೇಬೇಕು... ಇಲ್ಲವೆಂದರೆ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚಿನ ಅಧ್ಯಯನದ ಪ್ರಕಾರ ಉಪ್ಪು ಸೇವನೆಯಲ್ಲಿ ವ್ಯತ್ಯಾಸ ಹೆಚ್ಚಾಗಿ ಕಾಯಿಲೆಗೆ ತುತ್ತಾಗುತ್ತಿರುವುದು ಹೆಚ್ಚಾಗಿದೆ. 
ಹಾಗಾಗಿ, ಈಗಿನ ಜನರೇಷನ್ ರುಚಿಗೆ ತಕ್ಕಷ್ಟು ಉಪ್ಪು ಎನ್ನುವುದನ್ನು ಬಿಟ್ಟು ಆರೋಗ್ಯಕ್ಕೆ ತಕ್ಕಷ್ಟು ಹಿತಮಿತವಾಗಿ ಉಪ್ಪು ಬಳಕೆ ಮಾಡುವುದನ್ನು ಆರಂಭಿಸಿಬೇಕು. ತಮ್ಮ ದೇಹಕ್ಕೆ ಅತಿಯಾಗಿ ಉಪ್ಪು ಬೇಡ, ಆದರೆ ಅಗತ್ಯ ಪ್ರಮಾಣದಲ್ಲಿ ನಮ್ಮ ದೇಹ ಉಪ್ಪು ಪ್ರಮಾಣವನ್ನು ಬಯಸೇ ಬಯಸುತ್ತದೆ. 
ದೇಹದಲ್ಲಿನ ಅನಗತ್ಯ ತ್ಯಾಜ್ಯ ಬೆವರಿನ ರೂಪದಲ್ಲಿ ಹೊರ ಹೋಗ ಬೇಕು ಅಂದ್ರೆ ಅಗತ್ಯ ಪ್ರಮಾಣದಲ್ಲಿ ಉಪ್ಪು ಸೇವನೆ ಇರಲೇಬೇಕು. ರಕ್ತ ಚಲನೆಗೂ ಉಪ್ಪಿಗೂ ನೇರ ಸಂಬಂಧವಿದೆ. ದೇಹದಲ್ಲಿನ ಸೋಡಿಯಂ ಅಧಿಕಗೊಂಡಾಗ ರಕ್ತದೊತ್ತಡ ಬರುತ್ತದೆ. ಅದೇ ಕಾರಣಕ್ಕೆ ರಕ್ತದೊತ್ತಡ ಇರುವವರು ಉಪ್ಪನ್ನು ಸೇವಿಸಬೇಡಿ ಎಂದು ಹೇಳುತ್ತಾರೆ. 
ನಾಲಿಗೆ ಮೇಲೆ ಉಪ್ಪು ಬಿದ್ದಾಗ ಎಂಜಲು ಒಣಗಿ ನೀರು ಸೇವಿಸಬೇಕು ಎಂದೆನಿಸುತ್ತದೆ. ಹಾಗಾಗಿ, ದೇಹದಲ್ಲಿ ಸೋಡಿಯಂ ಅಂಶ ಅಧಿಕವಾದಾಗ ಸಹಜವಾಗಿ ನೀರಿನ ಅಂಶ ಕುಗ್ಗುತ್ತದೆ. ಆಗ ನೀರು ಕುಡಿಯಬೇಕು ಎನಿಸುವುದು ಸಹಜ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ ನಿಶಕ್ತಿ.. ಇತರೆ ಸಮಸ್ಯೆಗಳು ಕಾಡಬಹುದು. 
ಹಾಗಾದ್ರೆ ಉಪ್ಪಿನ ಸೇವನೆ ಯಾವ ವಯಸ್ಸಿನಲ್ಲಿ ಹೇಗಿರಬೇಕೆಂದರೆ.... ವಯೋಮಾನದ ಆಧಾರದ ಮೇಲೆ ಹೇಳಬೇಕಾದರೆ... 
51 ವರ್ಷಕ್ಕಿಂತ ಸಣ್ಣವರು ಒಂದು ದಿನಕ್ಕೆ 2300 ಮಿಲಿಗ್ರಾಂನಷ್ಟು ಉಪ್ಪನ್ನು ಸೇವಿಸಬಹುದು. 
51 ವರ್ಷಕ್ಕಿಂತ ದೊಡ್ಡವರು 1500 ಮಿಲಿಗ್ರಾಂ ಉಪ್ಪಿನ ಸೇವನೆಯನ್ನು ಮಾಡಬಹುದು. 
ದಿನಕ್ಕೆ 4 ರಿಂದ 5 ಗ್ರಾಂ ಉಪ್ಪು ದೇಹ ಸೇರಬೇಕಂತೆ. ಆದರೆ ಅಧ್ಯಯನದ ಪ್ರಕಾರ ಭಾರತೀಯರು ಸೇವಿಸುತ್ತಿರುವ ಪ್ರಮಾಣ ಹೆಚ್ಚಾಗಿದೆಯಂತೆ. ಇಷ್ಟೇ ಅಲ್ಲದೇ, ಅಧಿಕ ಉಪ್ಪು ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ಅಧಿಕ ಉಪ್ಪಿನಿಂದ ಹೃದಯಕ್ಕೂ ತೊಂದರೆಯಾಗುತ್ತೆ. ಜಾಸ್ತಿ ಉಪ್ಪು ಸೇವಿಸಿದರೇ ಮುಖದ ಕಾಂತಿಯು ಹಾಳಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT