ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ದಢೂತಿ ದೇಹಕಾಯದವರಿಗೆ ಜಪಾನ್ ನಗ್ನ ಹೋಟೆಲ್ 'ದ ಅಮೃತ' ಗೆ ಪ್ರವೇಶ ನಿಷಿದ್ಧ

ಮುಂದಿನ ತಿಂಗಳು ಪ್ರಾಂಭವಾಗಲಿರುವ ಜಪಾನ್ ನ ಮೊದಲ 'ನಗ್ನ ರೆಷ್ಟರೆಂಟ್'ನ ಪ್ರವೇಶಕ್ಕೆ ವಿಚಿತ್ರ ನಿರ್ಭಂಧಗಳನ್ನು ಹೇರಿದೆ, ಅದರಲ್ಲಿ ಒಂದು ದಪ್ಪಗಿನ ಮೈಕಟ್ಟಿನವರಿಗೆ ಪ್ರವೇಶ ನಿಷೇಧ

ಟೋಕಿಯೋ: ಮುಂದಿನ ತಿಂಗಳು ಪ್ರಾಂಭವಾಗಲಿರುವ ಜಪಾನ್ ನ ಮೊದಲ 'ನಗ್ನ ರೆಷ್ಟರೆಂಟ್'ನ ಪ್ರವೇಶಕ್ಕೆ ವಿಚಿತ್ರ  ನಿರ್ಭಂಧಗಳನ್ನು ಹೇರಿದೆ, ಅದರಲ್ಲಿ ಒಂದು ದಪ್ಪಗಿನ ಮೈಕಟ್ಟಿನವರಿಗೆ ಪ್ರವೇಶ ನಿಷೇಧ ಮಾಡಿರುವುದು.

ಲಂಡನ್ ಮತ್ತು ಮೆಲ್ಬರ್ನ್ ನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಇಂತಹ ಹೋಟೆಲ್ ಗಳಿಂದ ಸ್ಫೂರ್ತಿ ಪಡೆದು ಪ್ರಾರಂಭವಾಗುತ್ತಿರುವ 'ದ ಅಮೃತ' ಹೋಟೆಲ್ ನಲ್ಲಿ ವಯೋಮಾನದ ನಿರ್ಭಂಧವೂ ಇದ್ದು ೧೮ ರಿಂದ ೬೦ ವರ್ಷದೊಳಗಿನವರು ಮಾತ್ರ ಪ್ರವೇಶಿಸಬಹುದಾಗಿದ್ದು, ಒಳಗೆ ಬಂದಾಕ್ಷಣ ತಮ್ಮ ಬಟ್ಟೆಗಳನ್ನು ಕಳಚಿಟ್ಟು, ಹೋಟೆಲ್ ನೀಡುವ ಪೇಪರ್ ನ ಒಳ-ಕೆಳ ಉಡುಪನ್ನಷ್ಟೇ ಧರಿಸಬೇಕಿದೆ.

"ನಿಮ್ಮ ಎತ್ತರಕ್ಕೆ ತಕ್ಕಂತೆ ಇರಬೇಕಾದ ಸರಾಸರಿ ತೂಕಕ್ಕೆ ೧೫ ಕೆಜಿಗಿಂತಲೂ ಹೆಚ್ಚಿದ್ದರೆ ಸ್ಥಳ ಕಾದಿರುವುದರಿಂದ ಹಿಂದೆ ಉಳಿಯಲು ನಾವು ನಿಮಗೆ ತಿಳಿಸುತ್ತೇವೆ" ಎಂದು ಹೋಟೆಲ್ ನ ಅಂತರ್ಜಾಲ ತಾಣದಲ್ಲಿ ತಿಳಿಸಿದ್ದು, ಸಿಬ್ಬಂದಿಗೆ ಸಂಶಯ ಬಂದರೆ ಗ್ರಾಹಕರು ತೂಕ ಪತ್ತೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಕೂಡ ತಿಳಿಸಿದೆ.

ಅಥಿತಿಗಳು ಧಢೂತಿಗಳು ಎಂದು ತಿಳಿದುಬಂದರೆ ಹೋಟೆಲ್ ಒಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಜುಲೈ ೨೯ಕ್ಕೆ ಪ್ರಾರಂಭವಾಗಲಿರುವ ಹೋಟೆಲ್ ತಿಳಿಸಿದೆ. ಹಾಗೆಯೇ ಹಣವನ್ನು ಸ್ಥಳ ಕಾಯ್ದಿರಿಸುವಾಗಲೇ ನಿಡಬೇಕೆಂಬ ನಿರ್ಭಂಧ ಕೂಡ ಹೇರಿದೆ.

ಅನ್ಯ ಅಥಿತಿಗಳನ್ನು ಮುಟ್ಟದಂತೆ ಮತ್ತು ಅವರ ಜೊತೆ ಮಾತಾಡದಂತೆ ಶಿಸ್ತು ಕಾಪಾಡಲು ಕೂಡ ನಿಯಮಗಳು ತಿಳಿಸಿದ್ದು, ಅಚ್ಚು (ಟ್ಯಾಟೂ) ಹಾಕಿಸಿಕೊಂಡಿರುವವರಿಗು ಪ್ರವೇಶವಿಲ್ಲ.

ಪ್ರವೇಶ ಪಡೆಯುವ ಎಲ್ಲ ಅತಿಥಿಗಳು ಮೊಬೈಲ್ ಫೋನ್ ಗಳು ಮತ್ತು ಕ್ಯಾಮರಾಗಳನ್ನು ಲಾಕರ್ ನಲ್ಲಿ ಕಡ್ಡಾಯವಾಗಿ ಇಡಬೇಕು.

ಈ ಹೋಟೆಲ್ ನಲ್ಲಿ ಕಟ್ಟುಮಸ್ತಾದ ಪುರುಷರ ನಗ್ನ ನೃತ್ಯ ಪ್ರದರ್ಶನದ ಜೊತೆಗೆ ಊಟ ಸವಿಯಬೇಕೆಂದರೆ ೮೦,೦೦೦ ಯೆನ್ (೭೫೦ ಡಾಲರ್) ವ್ಯಯಿಸಬೇಕಾಗುತ್ತದೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ