ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಬಾಲ್ಯಾವಸ್ಥೆಯ ಕಿರುಕುಳ: ಪ್ರೌಢಾವಸ್ಥೆಯಲ್ಲಿ ಮಾದಕ ವ್ಯಸನಕ್ಕೆ ಬಲಿಯಾಗುವ ಅಪಾಯ

ಬಾಲ್ಯದಲ್ಲಿ ತೀವ್ರ ಸಮಸ್ಯೆ ಎದುರಿಸುವವರು ಮಾದಕ ವಸ್ತು ಮತ್ತು ಆಲ್ಕೋಹಾಲ್ ಸೇವನೆ ವ್ಯಸನಿಗಳಾಗುವ ಅಪಾಯ ಹೆಚ್ಚು...

ಟೊರೊಂಟೊ: ಬಾಲ್ಯದಲ್ಲಿ ತೀವ್ರ ಸಮಸ್ಯೆ ಎದುರಿಸುವವರು ಮಾದಕ ವಸ್ತು ಮತ್ತು ಆಲ್ಕೋಹಾಲ್  ಸೇವನೆ ವ್ಯಸನಿಗಳಾಗುವ ಅಪಾಯ ಹೆಚ್ಚು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

 ಮನೆಯಲ್ಲಿ ಪೋಷಕರು ಹೊಂದಾಣಿಕೆಯಲ್ಲಿಲ್ಲದಿದ್ದರೆ, ಗೃಹ ಹಿಂಸೆ ಅನುಭವಿಸಿದ ಮಕ್ಕಳು ಮತ್ತು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದ ಮಕ್ಕಳು ಮದ್ಯ ವ್ಯಸನಿಗಳಾಗುವ ಸಾಧ್ಯತೆ ಶೇಕಡಾ 50ರಷ್ಟು ಹೆಚ್ಚು ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಬಾಲ್ಯದಲ್ಲಿ ಮಕ್ಕಳು ನೇರವಾಗಿ ಮತ್ತು ಪರೋಕ್ಷವಾಗಿ ಯಾವುದೇ ಹಿಂಸಾಚಾರ ಅನುಭವಿಸಿದರೆ, ನೋಡುತ್ತಾ ಬೆಳೆದರೆ ಅವರ ಬಾಲ್ಯಜೀವನ ಬಲಿಯಾಗುತ್ತದೆ. ಅವರು ಈ ಕೆಟ್ಟ ಗಳಿಗೆಯನ್ನು ಮರೆಯಲು ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ ಎನ್ನುತ್ತಾರೆ ಟೊರೊಂಟೊ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್ಮೆ ಫುಲ್ಲರ್ ಥಾಮ್ಸನ್.

ಅಧ್ಯಯನಕ್ಕೆ ಒಳಗಾದ ಪ್ರತಿ ಐವರು ವಯಸ್ಕರಲ್ಲಿ ಒಬ್ಬರು ಮಾದಕವಸ್ತು, ಆಲ್ಕೋಹಾಲ್ ಚಟಗಳಿಗೆ ಬಲಿಯಾಗುತ್ತಿದ್ದು, ಅವರು ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾದವರಾಗಿದ್ದಾರೆ. ಇನ್ನು ಪ್ರತಿ ಏಳು ಮಂದಿ ವಯಸ್ಕರಲ್ಲಿ ಒಬ್ಬರು ದುಷ್ಚಟಗಳಿಗೆ ಬಲಿಯಾದವರು ಬಾಲ್ಯದಲ್ಲಿ ಪೋಷಕರು ಹಿಂಸೆಗೆ ಬಲಿಯಾದವರಾಗಿದ್ದಾರೆ.

ವ್ಯಕ್ತಿ 16 ವರ್ಷ ವಯಸ್ಸಾಗುವುದರೊಳಗೆ 11 ಅಥವಾ ಅದಕ್ಕಿಂತ ಹೆಚ್ಚು ಬಾರಿ ಪೋಷಕರ ಗೃಹ ಹಿಂಸಾಚಾರಕ್ಕೆ ಒಳಗಾದರೆ ಅದನ್ನು ದೀರ್ಘಕಾಲಿಕ ಎಂದು ಪರಿಗಣಿಸಲಾಗುತ್ತದೆ.
25 ಸಾಮಾನ್ಯ ಜನರಲ್ಲಿ ಒಬ್ಬರನ್ನು ಪರಿಗಣಿಸಲಾಗಿದೆ ಎಂದು ಫುಲ್ಲರ್ ಥಾಮ್ಸನ್ ಹೇಳುತ್ತಾರೆ.

Substance Use and Misuse ಎಂಬ ಆನ್ ಲೈನ್ ಪತ್ರಿಕೆಯಲ್ಲಿ ಈ ಅಧ್ಯಯನ ಪ್ರಕಟಗೊಂಡಿದ್ದು, ಕೆನಡಾದ ಸಮುದಾಯ ಆರೋಗ್ಯ ಸಮೀಕ್ಷೆ: ಮಾನಸಿಕ ಆರೋಗ್ಯ, 2012ರ ಭಾಗವಾಗಿದ್ದ 21 ಸಾವಿರದ 544 ವಯಸ್ಕ ಕೆನಡಿಯನ್ನರನ್ನು ಅಧ್ಯಯನಕ್ಕೊಳಪಡಿಸಲಾಗಿತ್ತು. ಇವರಲ್ಲಿ 628 ಮಂದಿ ಮಾದಕ ವಸ್ತುಗಳಿಗೆ ಬಲಿಯಾಗಿದ್ದರೆ 849 ಮಂದಿ ಮದ್ಯ ವ್ಯಸನಿಯಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

ಧರ್ಮಸ್ಥಳ ಪ್ರಕರಣ NIA ತನಿಖೆ ಮಾಡಿದರೆ ಆಕ್ಷೇಪವಿಲ್ಲ: ಸಚಿವ ಸತೀಶ್ ಜಾರಕಿಹೊಳಿ

ಭಾರತ- ಫಿಜಿ ರಕ್ಷಣಾ ಸಹಕಾರ ಕ್ರಿಯಾ ಯೋಜನೆ ಸಿದ್ಧ: ಇಂಡೋ ಪೆಸಿಫಿಕ್‌ ವಲಯದಲ್ಲಿ ಚೀನಾದ ಪ್ರಾಬಲ್ಯ ತಡೆಗೆ ಮಾಸ್ಟರ್ ಪ್ಲಾನ್!

SCROLL FOR NEXT