ಸಾಂದರ್ಭಿಕ ಚಿತ್ರ 
ಆರೋಗ್ಯ

ಕಿಡ್ನಿ ಸಂಬಂಧಿತ ರೋಗಗಳನ್ನು ತಡೆಯುವುದು ಹೇಗೆ?

ಕಿಡ್ನಿ ಅಥವಾ ಮೂತ್ರಕೋಶದ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ...

ಕಿಡ್ನಿ ಅಥವಾ ಮೂತ್ರಕೋಶದ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕಿಡ್ನಿ ದಿನವನ್ನು ಆಚರಿಸಲಾಗುತ್ತಿದೆ. ಮನುಷ್ಯನ ದೇಹದಲ್ಲಿ ಮೂತ್ರಕೋಶ ಅತ್ಯಂತ ಮುಖ್ಯವಾದ ಭಾಗ, ಅದು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಆರೋಗ್ಯದಿಂದಿರಲು ಸಾಧ್ಯವಿಲ್ಲ.
ಮನುಷ್ಯನಲ್ಲಿ ಎರಡು ಮೂತ್ರಕೋಶವಿದೆ, ಒಂದು ಹಾಳಾದರೆ ಇನ್ನೊಂದಿದೆ ಎಂದು ಸುಲಭವಾಗಿ ನಿರ್ಲಕ್ಷಿಸಲು ಸಾಧ್ಯವಿಲ್ಲ. ಕ್ರಾನಿಕ್ ಕಿಡ್ನಿ ಕಾಯಿಲೆ(ಸಿಕೆಡಿ-ದೀರ್ಘಕಾಲದ ಕಿಡ್ನಿರೋಗ) ಎಂಬುದು ಮನುಷ್ಯನಿಗೆ ಅತ್ಯಂತ ಯಾತನಾಮಯವಾದದ್ದು.
ಇದರ ಲಕ್ಷಣ ಕೂಡ ತಡವಾಗಿ ಗೊತ್ತಾಗುತ್ತದೆ. ಹೀಗಾಗಿ ದೀರ್ಘಕಾಲದ ಕಿಡ್ನಿ ರೋಗದಿಂದ ಬಳಲುತ್ತಿರುವವರು ತಡವಾಗಿ ವೈದ್ಯರನ್ನು ಕಾಣಲು ಬರುತ್ತಾರೆ. ಇದು 5ನೇ ಹಂತ ತಲುಪಿದ ನಂತರ ಡಯಾಲಿಸಿಸ್ ಅಥವಾ ಕಿಡ್ನಿ ಕಸಿ ಚಿಕಿತ್ಸೆಗೆ ಇರುವ ಏಕೈಕ ಮಾರ್ಗ. ಕಿಡ್ನಿ ಸಮಸ್ಯೆಯಿಂದ ಹೇಗೆ ದೂರವಿರಬಹುದು ಎಂಬುದಕ್ಕೆ ಇಲ್ಲಿದೆ ಕೆಲವು ಮಾಹಿತಿಗಳು:
1. ಅಧಿಕ ದೇಹತೂಕ ಒಳ್ಳೆಯದಲ್ಲ: ದೇಹದ ತೂಕ ಜಾಸ್ತಿಯಾದರೆ ಕಿಡ್ನಿ ಮೇಲೆ ಒತ್ತಡ ಹೇರುತ್ತದೆ. ಇದರಿಂದ ಅಧಿಕ ರಕ್ತದೊತ್ತಡ ಕೂಡ ಉಂಟಾಗಬಹುದು. ಕಡಿಮೆ ಅವಧಿಯಲ್ಲಿ ದೇಹದಲ್ಲಿ ತೂಕ ಹೆಚ್ಚಾದರೆ ಕಿಡ್ನಿ ಸಮಸ್ಯೆ ಏನಾದರೂ ಇದೆಯೇ ಎಂದು ಪರೀಕ್ಷಿಸುವುದು ಉತ್ತಮ.
2. ನೋವು ನಿವಾರಕಗಳನ್ನು ಹೆಚ್ಚು ಸೇವಿಸಬೇಡಿ: ತಲೆನೋವು, ಸೊಂಟನೋವು, ಬೆನ್ನುನೋವು ಹೀಗೆ ಏನಾದರೂ ಸಮಸ್ಯೆಗಳು ತಲೆದೋರಿದಾಗ ನೋವು ನಿವಾರಕ ಮಾತ್ರೆಗಳನ್ನು ಅತಿಯಾಗಿ ಬಳಸುವುದು ಒಳ್ಳೆಯದಲ್ಲ. ಅದು ಕಿಡ್ನಿಗೆ ಹಾನಿಯುಂಟುಮಾಡಬಹುದು.
3. ಮೂಲಿಕೆ ಔಷಧಿಗಳನ್ನು ಬಳಸಬೇಡಿ;
5. ಸಕ್ಕರೆ ಮಟ್ಟ ನಿಯಂತ್ರಣದಲ್ಲಿರಲಿ: ಡಯಾಬಿಟಿಸ್ ಸಮಸ್ಯೆಯಿರುವವರಿಗೆ ಕಿಡ್ನಿ ಸಮಸ್ಯೆಯಿರುವುದು ಸಾಮಾನ್ಯ. ದೀರ್ಘಕಾಲಿನ ಕಿಡ್ನಿ ಸಮಸ್ಯೆಗಳಿಗೆ ಡಯಾಬಿಟಿಸ್ ಕಾರಣವಾಗಿರುತ್ತದೆ.
6. ಜಂಕ್ ಪದಾರ್ಥಗಳಿಂದ ದೂರವಿರಿ: ಅಧಿಕ ಮಸಾಲೆಯ, ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಸೇವಿಸುವುದು ಉತ್ತಮವಲ್ಲ. ಸಂಸ್ಕರಿತ, ಅಧಿಕ ಆಸಿಡ್ ಪದಾರ್ಥಗಳ ಸೇವನೆಯಿಂದ ತೂಕ ಹೆಚ್ಚಾಗುತ್ತದೆ. ಹೆಚ್ಚೆಚ್ಚು ಹಸಿರು ತರಕಾರಿಗಳು, ಹಣ್ಣುಗಳು ಮತ್ತು ಕಡಿಮೆ ಕೊಬ್ಬು ಇರುವ ಡೈರಿ ಉತ್ಪನ್ನಗಳು ಉತ್ತಮ.
7. ಅಧಿಕ ನೀರು ಕುಡಿಯಿರಿ: ಕಡಿಮೆ ನೀರು ಕುಡಿದಷ್ಟು ಕಿಡ್ನಿಯಲ್ಲಿ ಕಲ್ಲುಗಳು ಬೆಳೆಯುವುದು ಹೆಚ್ಚು. ಪ್ರತಿದಿನ 10ರಿಂದ 12 ಗ್ಲಾಸ್ ನೀರು ಕುಡಿಯುತ್ತಿರಿ.
8. ಶಾರೀರಿಕ ಚಟುವಟಿಕೆಯಿರಲಿ: ದಿನನಿತ್ಯದ ಜೀವನಶೈಲಿ ಉತ್ತಮವಾಗಿರಬೇಕು. ಉತ್ತಮ ಜೀವನಶೈಲಿಯಿಂದ ಶರೀರ ಹೆಚ್ಚು ಚಟುವಟಿಕೆಯಿಂದ ಇದ್ದು ಕಿಡ್ನಿ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ.
9. ಕಾಲಕಾಲಕ್ಕೆ ಆರೋಗ್ಯ ತಪಾಸಣೆ: 35-40 ವರ್ಷ ಕಳೆದ ನಂತರ ಕಾಲಕಾಲಕ್ಕೆ ಬಿ.ಪಿ. ಸಕ್ಕರೆ ಕಾಯಿಲೆ ಬಗ್ಗೆ ತಪಾಸಣೆ ಮಾಡುತ್ತಿರಬೇಕು. ಕುಟುಂಬದಲ್ಲಿ ಯಾರಿಗಾದರೂ ಕಿಡ್ನಿ ಸಮಸ್ಯೆ ಇದ್ದರೆ ಪ್ರತಿವರ್ಷ ಇಡೀ ಶರೀರದ ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು.
10, ಮದ್ಯಪಾನ, ಧೂಮಪಾನದಿಂದ ದೂರವಿರಿ:

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT