ಸಾಂದರ್ಭಿಕ ಚಿತ್ರ 
ಆರೋಗ್ಯ

ಶೇ.24 ರಷ್ಟು ಜನರು ಬಾರ್ಡರ್ಲೈನ್ ಮಧುಮೇಹಿಗಳು: ಅಧ್ಯಯನ

ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್ ನಗರಗಳಲ್ಲಿ 4,53,854 ಜನರ ಮೇಲೆ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನಡೆಸಿದ ಅಧ್ಯಯನದ ಪ್ರಕಾರ, ಶೇಕಡಾ 24 ರಷ್ಟು ಜನರು ಪೂರ್ವಭಾವಿ ಮಧುಮೇಹಿಗಳಾಗಿದ್ದಾರೆ. 

ಬೆಂಗಳೂರು: ಅಹಮದಾಬಾದ್, ಬೆಂಗಳೂರು, ಚೆನ್ನೈ, ಕೊಚ್ಚಿ ಮತ್ತು ಹೈದರಾಬಾದ್  ನಗರಗಳಲ್ಲಿ 4,53,854 ಜನರ ಮೇಲೆ ನ್ಯೂಬರ್ಗ್ ಡಯಾಗ್ನೋಸ್ಟಿಕ್ಸ್ ನಡೆಸಿದ ಅಧ್ಯಯನದ ಪ್ರಕಾರ, ಶೇಕಡಾ 24 ರಷ್ಟು ಜನರು ಬಾರ್ಡರ್ಲೈನ್ ಮಧುಮೇಹಿಗಳಾಗಿದ್ದಾರೆ. 

ನವೆಂಬರ್ 14 ಶನಿವಾರ ವಿಶ್ವ ಮಧುಮೇಹ ದಿನವಾಗಿದ್ದು, ಅಕ್ಟೋಬರ್ 2018 ಮತ್ತು ಅಕ್ಟೋಬರ್ 2020 ರ ನಡುವೆ ಈ ಅಧ್ಯಯನವನ್ನು ನಡೆಸಲಾಗಿದೆ.  ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಿದೆ. 50 ವರ್ಷ ವಯಸ್ಸಾದವರಲ್ಲಿ ಶೇ. 68, 36ರಿಂದ 50 ವರ್ಷದೊಳಗಿನವರಲ್ಲಿ ಶೇ. 24 ಮತ್ತು 35 ವರ್ಷದೊಳಗಿನ ಗುಂಪಿನಲ್ಲಿ ಶೇ. 8 ರಷ್ಟು ಸಕ್ಕರೆ ಪ್ರಮಾಣ ಕಂಡುಬಂದಿದೆ.

ಬೆಂಗಳೂರಿನಲ್ಲಿ 3, 37, 307 ಜನರ ಪೈಕಿಯಲ್ಲಿ 81,075 ಮಂದಿ ಬಾರ್ಡರ್ಲೈನ್ ಮಧುಮೇಹಿಗಳಾಗಿದ್ದಾರೆ. ಇದರಲ್ಲಿ ಅತಿ ಹೆಚ್ಚು 55,111 ಮಂದಿ 50 ವರ್ಷದೊಳಗಿನವರಾಗಿದ್ದಾರೆ. ಮಹಿಳೆಯರಿಗಿಂತ ಹೆಚ್ಚಿನ ಸಂಖ್ಯೆಯ ಪುರುಷರು ಬಾರ್ಡರ್ಲೈನ್ ಮಧುಮೇಹಿ ಹಾಗೂ ಮಧುಮೇಹಿಗಳಾಗಿದ್ದಾರೆ ಎಂದು ಅಧ್ಯಯನ ಹೇಳಿದೆ.

ಮಧುಮೇಹವಾಗುವ ಮೊದಲು, ಆರೋಗ್ಯವಂತ ವ್ಯಕ್ತಿಯು ಬಾರ್ಡರ್ಲೈನ್ ಮಧುಮೇಹಿ ಹಂತದ ಮೂಲಕವೇ ಹೋಗುತ್ತಾನೆ. ಕಳೆದ ಕೆಲವು ತಿಂಗಳು ವರ್ಷಗಳಲ್ಲಿ ಜೀವನ ಶೈಲಿ ಮತ್ತು ಆಹಾರದ ಪದ್ಧತಿಯಿಂದಾಗಿ ಡಯಾಬಿಟಿಸ್ ಅವಲಂಬಿಸಿದೆ. ಮಧುಮೇಹ ಬರುವ ಮುನ್ನ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗಿರುತ್ತದೆ ಎಂದು ನ್ಯೂಬರ್ಗ್ ಡಯಾಗ್ನೋಸ್ಟಿಕ್ ಸಂಸ್ಥೆಯ ವೈದ್ಯಕೀಯ ನಿರ್ದೇಶಕ ಡಾ. ಸುಜಯ್ ಪ್ರಸಾದ್ ತಿಳಿಸಿದ್ದಾರೆ.

ಯಾವುದೇ ವಯಸ್ಸಿನಲ್ಲಿಯೂ ಪೂರ್ವಭಾವಿ ಮಧುಮೇಹ ಕಂಡುಬರಬಹುದು. ಆದಾಗ್ಯೂ, ವಯಸ್ಸಾದವರಲ್ಲಿ ಅಪಾಯ ಹೆಚ್ಚಾಗಿರುತ್ತದೆ. ಬಾರ್ಡರ್ಲೈನ್ ಮಧುಮೇಹಿಗಳಲ್ಲಿ ಯಾವುದೇ ಲಕ್ಷಣ ಕಂಡುಬರುವುದಿಲ್ಲ, ಡಯಾಬಿಟಿಸ್ ಸೈಲೆಂಟ್ ಕಿಲ್ಲರ್ ಆಗಿದೆ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ, ಕಡಿಮೆ ತೂಕದ ಮೂಲಕ ಇದನ್ನು ತಡೆಗಟ್ಟಬಹುದಾಗಿದೆ ಎಂದು ಪ್ರಸಾದ್ ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT