ಹೊರನಾಡು ಕನ್ನಡಿಗ

ಗುಜರಾತ್‌ನ ಭುಜ್‌ನಲ್ಲಿ ಕನ್ನಡಿಗರಿಂದ ಗಣೇಶೋತ್ಸವ

ಭುಜ್(ಗುಜರಾತ್): ಗುಜರಾತ್‌ನ ಕಛ್ ಜಿಲ್ಲೆಯ ಪ್ರಮುಖ ಪಟ್ಟಣವಾದ 'ಭುಜ್‌' ನಗರದಲ್ಲಿ ನೆಲೆಸಿರುವ ಉತ್ಸಾಹಿ ಕನ್ನಡಿಗರು 'ಹೊರನಾಡ ಕನ್ನಡಿಗರ ಸೇವಾ ಸಮಿತಿ' ಎಂಬ ಸಂಘಟನೆಯನ್ನು ಮಾಡಿಕೊಂಡು ನಾನಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.

ಅದರಂತೆ ಈ ಬಾರಿಯೂ ಕನ್ನಡ ಬಾಂಧವರೆಲ್ಲಾ ಒಟ್ಟಾಗಿ ಭುಜಿಯಾ ಬೆಟ್ಟದ ತಪ್ಪಲಿನ ಶಿವಮಂದಿರದ ಆವರಣದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಶಾಸ್ತ್ರೋಕ್ತ ರೀತಿಯಲ್ಲಿ ಪೂಜಾದಿಗಳನ್ನು ನೆರವೇರಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

ಈ ಬಾರಿಯ ಇನ್ನೊಂದು ವಿಶೇಷವೆಂದರೆ ನೆರೆಯ ನಗರವಾದ ಗಾಂಧಿಧಾಮದ ಆಸಕ್ತ ಕನ್ನಡಿಗರು ಭುಜ್‌ನ ಕನ್ನಡಿಗರೊಂದಿಗೆ ಅಧಿಕ ಸಂಖ್ಯೆಯಲ್ಲಿ ಕಲೆತು ಉ ಉತ್ಸವದ ಯಶಸ್ಸಿಗೆ ಸಹಕರಿಸಿದರು.

ವೈವಿಧ್ಯತೆಯಿಂದ ಕೂಡಿದ್ದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಕನ್ನಡದ ಚಿಣ್ಣರಿಗೆ ಚಿತ್ರ ರಚನೆಯನ್ನು ಸ್ಪರ್ಧೆಯನ್ನೂ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನೂ ಏರ್ಪಡಿಸಲಾಗಿತ್ತು.

ಈ ಹೊರನಾಡಿನ ಕನ್ನಡಿಗರ ಸಂಘಟನೆಯ ಪ್ರಮುಖರಾದ ಟಿ.ವಿ.ಶ್ರೀಧರ್, ಸುಪ್ರಸನ್ನ, ಮಹಾಂತೇಶ್, ಐತಪ್ಪ, ವಿನಯಕುಮಾರ್, ಗವಿಸಿದ್ದಯ್ಯ, ರಾಜು ಕುಲಾಲ್ ಮೊದಲಾದವರ ಶ್ರಮದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

SCROLL FOR NEXT