ಯದುವೀರ್‌ ಮತ್ತು ತ್ರಿಶಿಕಾ ಕುಮಾರಿ 
ರಾಜ್ಯ

ಮೇ 8ಕ್ಕೆ ನಿಗದಿಯಾಗಿದ್ದ ಯದುವೀರ್ ಒಡೆಯರ್ ವಿವಾಹ ಮುಂದಕ್ಕೆ

ಮೈಸೂರು ರಾಜ ಮನೆತನದ ಶ್ರೀಕಂಠದತ್ತ ಒಡೆಯರ್‌ ಹಾಗೂ ರಾಣಿ ಪ್ರಮೋದಾ ದೇವಿ ಅವರ ದತ್ತುಪುತ್ರ ಯದುವೀರ್‌...

ಮೈಸೂರು: ಮೈಸೂರು ರಾಜ ಮನೆತನದ  ಶ್ರೀಕಂಠದತ್ತ ಒಡೆಯರ್‌ ಹಾಗೂ ರಾಣಿ ಪ್ರಮೋದಾ ದೇವಿ ಅವರ ದತ್ತುಪುತ್ರ ಯದುವೀರ್‌ ಒಡೆಯರ್ ಅವರ ವಿವಾಹ ಒಂದು ತಿಂಗಳು ಮುಂದಕ್ಕೆ ಹೋಗಿದೆ.
ಈ ಮುಂಚೆ ಮೇ 8ಕ್ಕೆ ನಿಗದಿಯಾಗಿದ್ದ ಯದುವೀರ್ ಒಡೆಯರ್ ಅವರ ಮದುವೆ ಈಗ ನಕ್ಷತ್ರ ಹಾಗೂ ಗೋತ್ರ ಸರಿಯಿಲ್ಲ ಎಂಬ ಕಾರಣಕ್ಕೆ ಜೂನ್ 27ಕ್ಕೆ ಮುಂದೂಡಲಾಗಿದೆ ಎಂದು ಅರಮನೆಯ ಮೂಲಗಳು ತಿಳಿಸಿವೆ
ಮೇ 8ರಿಂದ ಐದು ದನಿಗಳ ಕಾಲ ಅಂಬಾವಿಲಾಸ ಅರಮನೆಯ ಕಲ್ಯಾಣ ಮಂಟಪದಲ್ಲಿ ಯದುವೀರ್ ಒಡೆಯರ್ ಅವರ ಅದ್ಧೂರಿ ಮದುವೆ ನಿಗದಿಯಾಗಿತ್ತು. ಆದರೆ ರಾಜಗುರುಗಳ ಹಾಗೂ ಕುಲಗುರುಗಳಾದ ಶೃಂಗೇರಿ ಶ್ರೀಗಳ ಸಲಹೆಯಂತೆ ಜೂನ್ ತಿಂಗಳ 10 ಅಥವಾ 27 ರಂದು ನಡೆಸಲು ತೀರ್ಮಾನಿಸಲಾಗಿದೆ.
ಯದುವೀರ್ ಅವರು ಮೈಸೂರಿನ ಅರಮನೆಯ 27 ರಾಜವಂಶದ ಮಹಾರಾಜರಾಗಿರುವುದರಿಂದ ಜೂನ್ 27ರಂದೇ ರಾಜಸ್ಥಾನದ ರಾಜೋಟ್ ರಾಜ ಮನೆತನದ ರಾಜಕುಮಾರಿ ತ್ರಿಶಿಕಾಕುಮಾರಿಯನ್ನು ವರಿಸಲಿದ್ದಾರೆ ಎನ್ನಲಾಗಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ಅದ್ದೂರಿ ಆರಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಸಹ ಮೂಲಗಳು ತಿಳಿಸಿವೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಮೈಸೂರು ಸಂಸ್ಥಾನಕ್ಕೆಯದುವೀರ್‌ರನ್ನು ದತ್ತು ಪಡೆದು ನಂತರ ಮೇ ತಿಂಗಳಿನಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜರಾಗಿ ಪಟ್ಟಾಭಿಷೇಕ ನಡೆಸಲಾಯಿತು. ಆಗ ಯದುವೀರ್‌ಗೆ ಶ್ರೀ ಯದುವೀರ ಕೃಷ್ಣಚಾಮರಾಜ ಒಡೆಯರ್ ಎಂದು ನಾಮಕರಣ ಸಹ ಮಾಡಲಾಯಿತು.
ರಾಜಸ್ಥಾನದ ದುಂಗಾಪುರದ ರಾಜವಶಂಸ್ಥೆಯಾದ ತ್ರಿಶಿಕಾ ಕುಮಾರಿ ಜತೆ ನಿಶ್ಚಿತಾರ್ಥ ಸಹ ನಡೆದಿದ್ದು, ತ್ರಿಶಿಕಾ ಕುಮಾರಿ ಮಹಾರಾಜರ ಪಟ್ಟಾಭಿಷೇಕದಲ್ಲಿ ಪಾಲ್ಗೊಳ್ಳುವ ಮೂಲಕ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT