ರಾಜ್ಯ

ಮಗುವಿಗೆ ಹಾಲು ಕುಡಿಸು ಎಂದಿದ್ದಕ್ಕೆ ದಂಪತಿಗಳ ನಡುವೆ ಜಗಳ: ಪತ್ನಿ ಆತ್ಮಹತ್ಯೆ

Manjula VN

ಬೆಂಗಳೂರು: ಮಗುವಿಗೆ ಹಾಲು ಕುಡಿಸು ಎಂದಿದ್ದಕ್ಕೆ ಆರಂಭವಾದ ದಂಪತಿಗಳ ನಡುವಿನ ಜಗಳ ಕೊನೆಗೆ ಪತ್ನಿ ಆತ್ಮಹತ್ಯೆಯೊಂದಿಗೆ ಅಂತ್ಯವಾಗಿರುವ ಘಟನೆಯೊಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕವಿತಾ ಅಲಿಯಾಸ್ ಆಯೆಷಾ (26) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಭಾನುವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದ ಅಯುಬ್ ಮಗು ಅಳುತ್ತಿರುವುದನ್ನು ನೋಡಿದ್ದಾನೆ. ಈ ವೇಳೆ ಮಗುವಿಗೆ ಹಾಲು ಕುಡಿಸಿ ಸಮಾಧಾನ ಪಡಿಸುವಂತೆ ಗದರಿದ್ದಾನೆ. ಇದರಿಂದ ಇಬ್ಬರ ನಡುವೆ ಜಗಳ ಆರಂಭವಾಗಿದೆ.

ನಂತರ ಮಗುವನ್ನು ಎತ್ತಿಕೊಂಡ ಅಯುಬ್ ಮನೆಯಿಂದ ಹೊರ ಹೋಗಿದ್ದಾನೆ. ಪತಿಯ ಮಾತಿನಿಂದ ನೊಂದಿದ್ದ ಅಯೆಷಾ ನಂತರ ಕೊಠಡಿಯಲ್ಲಿದ್ದ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾಳೆ.

10 ನಿಮಿಷದ ನಂತರ ಅಯುಬ್ ಮನೆಗೆ ಬಂದಿದ್ದಾನೆ. ಈ ವೇಳೆ ಅಯೆಷಾಳನ್ನು ಕಂಡು ಗಾಬರಿಯಿಂದ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾನೆ. ಆದರೆ, ಆಸ್ಪತ್ರೆ ತಲುಪುವಷ್ಟರಲ್ಲಿ ಆಯೆಷಾ ಕೊನೆಯುಸಿರೆಳೆದಿದ್ದಾಳೆಂದು ತಿಳಿದುಬಂದಿದೆ.

SCROLL FOR NEXT