ರಾಜ್ಯ

ಕ್ರಿಮಿನಾಶಕ ಸೇವಿಸಿ ಆಸ್ಪತ್ರೆ ಸೇರಿದ್ದ ರೈತ ಸಾವು: ಚಿಕ್ಕಬಳ್ಳಾಪುರ ಬಂದ್ ಗೆ ಕರೆ

Shilpa D

ಚಿಕ್ಕಬಳ್ಳಾಪುರ:  ಕ್ರಿಮಿನಾಶಕ ಸೇವಿಸಿದ್ದ ರೈತ ಆನಂದ್  ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಬಂದ್ ಗೆ ಕರೆ ನೀಡಲಾಗಿದೆ.

ಮುಂಜಾಗ್ರತೆ ಕ್ರಮವಾಗಿ ಚಿಕ್ಕಬಳ್ಳಾಪುರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದು, 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಜೆಡಿಎಸ್ ನಿಂದ ಚಿಕ್ಕಬಳ್ಳಾಪುರ ಬಂದ್ ಗೆ ಕರೆ ನೀಡಲಾಗಿದೆ. ಜೆಡಿಎಸ್ ಪಕ್ಷದ ಮುಖಂಡರಿಂದ ಪ್ರತಿಭಟನಾ ಮೆರವಣಿಗೆಗೆ ಸಿದ್ಧತೆ ನಡೆದಿದೆ. ಜಿಲ್ಲಾಡಳಿತ ಭವನಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

30 ವರ್ಷಗಳಿಂದ ಆನಂದ್ ಅವರು ಸರ್ಕಾರ ಜಮೀನಿನಲ್ಲಿ ವ್ಯವಸಾಯ ಮಾಡುತ್ತಿದ್ದರು. ರಾಜಕೀಯ ವೈಷಮ್ಯಕ್ಕೆ ಫಸಲು ಬೆಳೆದಿದ್ದ ಜಮೀನನ್ನು ಕಸಿದುಕೊಳ್ಳಲು ಗ್ರಾ.ಪಂ ನಿಂದ ನಡೆದ ಪ್ರಯತ್ನವನ್ನು ಪ್ರತಿಭಟಿಸಿ ಅವರು ಬುಧವಾರ ಕ್ರಿಮಿನಾಶಕ ಸೇವಿಸಿದ್ದರು.

ಆಸ್ಪತ್ರೆಯಲ್ಲಿ ಎರಡು ದಿನಗಳ ಸಾವು ಬದುಕಿನ ಅವರ ಹೋರಾಟ ಅಂತ್ಯ ಕಂಡಿದೆ. 3:12 ಎಕರೆ ಜಮೀನಿನಲ್ಲಿ ಅವರು ಗೋಡಂಬಿ ಬೆಳೆ ಬೆಳೆದಿದ್ದರು.

SCROLL FOR NEXT