ಬಿಸಿಲ ಬೇಗೆಗೆ ತತ್ತರಿಸಿದ್ದ ನಗರಕ್ಕೆ ತಂಪೆರೆದ ಮಳೆ 
ರಾಜ್ಯ

ಬಿಸಿಲ ಬೇಗೆಗೆ ತತ್ತರಿಸಿದ್ದ ನಗರಕ್ಕೆ ತಂಪೆರೆದ ಮಳೆ

ಕೆಲವು ದಿನಗಳಿಂದಲೂ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದ ನಗರದ ಜನತೆಗೆ ಶುಕ್ರವಾರ ಸಂಜೆ ಬೇಸಿಗೆ ಮಳೆ ಅಬ್ಬರಿಸಿ ತಂಪೆರೆಯಿತು...

ಬೆಂಗಳೂರು: ಕೆಲವು ದಿನಗಳಿಂದಲೂ ಬಿಸಿಲ ಧಗೆಗೆ ತತ್ತರಿಸಿ ಹೋಗಿದ್ದ ನಗರದ ಜನತೆಗೆ ಶುಕ್ರವಾರ ಸಂಜೆ ಬೇಸಿಗೆ ಮಳೆ ಅಬ್ಬರಿಸಿ ತಂಪೆರೆಯಿತು.

ನಗರದ ಯಶವಂತರಪುರ, ಶೆಟ್ಟಿಹಳ್ಳಿ, ದಾಸರಹಳ್ಳಿ ಸೇರಿದಂತೆ ಹಲವೆಡೆ ನಿನ್ನೆ ಸಂಜೆ ಸುರಿದ ಬೇಸಿಗೆ ಮಳೆ ವಾತಾವರಣ ತಂಪಾಗುವಂತೆ ಮಾಡಿತ್ತು.

ರಾಧಾಕೃಷ್ಣ ದೇವಸ್ಥಾನ ಸುತ್ತಮುತ್ತಲೂ (15.5 ಮಿ.ಮೀ), ಯಶವಂತಪುರ (9 ಮಿ.ಮೀ), ಶೆಟ್ಟಿ ಹಳ್ಳಿ (17 ಮಿ.ಮೀ) ಮತ್ತು ದಾಸರಹಳ್ಳಿ (10.5 ಮಿಮೀ) ಮಳೆಯಾಗಿದೆ. ಇನ್ನು ಹೊರವಲಯವಾದ ದೇವನಹಳ್ಳಿ (13 ಮಿ.ಮೀ) ಹಾಗೂ ಅಲ್ಲಿನ ಸುತ್ತಮುತ್ತಲೂ ಮಳೆಯಾಗಿರುವುದಾಗಿ ತಿಳಿದುಬಂದಿದೆ.

ನಿನ್ನೆ ಸಂಜೆ 5.30ಕ್ಕೆ ಆರಂಭವಾದ ಮಳೆ ಸುಮಾರು 2ಗಂಟೆಗಳ ಕಾಲ ಮುಂದುವರೆದಿತ್ತು. ರಾಜಾಜಿನಗರ, ಮಹಾಲಕ್ಷ್ಮೀ ಲೇಔಟ್, ಇಸ್ಕಾನ್ ದೇವಸ್ಥಾನ, ಗೊರಗುಂಟೆಪಾಳ್ಯ, ಮತ್ತಿಕೆರೆ, ಚಿಕ್ಕಜಾಲ ಹಾಗೂ ಬನ್ನೇರುಘಟ್ಟ ರಸ್ತೆ ಸುತ್ತಮುತ್ತಲ ಪ್ರದೇಶದಲ್ಲಿ ತುಂತುರು ಮಳೆಯಾಗಿದೆ. ಇನ್ನು ಹವಾಮಾನ ಇಲಾಖೆ ಹೇಳಿರುವ ಪ್ರಕಾರ ಈ ಬಾರಿ ಕಡಿಮೆಯಾಗುವ ಸಂಭವವಿದಿದ್ದು, ಮುಂಬರುವ ದಿನಗಳಲ್ಲಿ ತಾಪಮಾನ ಕಡಿಮೆಯಾಗುವ ಸಂಭವವಿದೆ ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT