ಬೆಂಗಳೂರಿನ ಬೀದಿಯೊಂದರಲ್ಲಿ ರಾಶಿ ಹಾಕಿರುವ ಪ್ಲಾಸ್ಟಿಕ್ ಕಸಗಳನ್ನು ತಿನ್ನುತ್ತಿರುವ ಹಸು, ಮೇಕೆಗಳು 
ರಾಜ್ಯ

ಪ್ಲಾಸ್ಟಿಕ್ ಕಸಗಳಿಗೆ ಬಲಿಯಾಗುತ್ತಿರುವ ಬೀದಿ ಪ್ರಾಣಿಗಳು

ನಗರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಬೀದಿ ಪ್ರಾಣಿಗಳಿಗೆ ಮಾರಕವಾಗಿದೆ. ಹಸು, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳು ಪ್ಲಾಸ್ಟಿಕ್ ಚೀಲಗಳನ್ನು...

ಬೆಂಗಳೂರು: ನಗರದಲ್ಲಿ ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಬೀದಿ ಪ್ರಾಣಿಗಳಿಗೆ ಮಾರಕವಾಗಿದೆ. ಹಸು, ಬೆಕ್ಕು, ನಾಯಿ ಇತ್ಯಾದಿ ಪ್ರಾಣಿಗಳು ಪ್ಲಾಸ್ಟಿಕ್ ಚೀಲಗಳನ್ನು ತಿನ್ನುವುದರಿಂದ ಅವು ಹೊಟ್ಟೆಗೆ ಸೇರಿ ಪ್ರಾಣಕ್ಕೆ ಕುತ್ತು ಬರುವ ಪರಿಸ್ಥಿತಿ ಉಂಟಾಗಿದೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಸರ್ಕಾರಿ ಪಶು ಆಸ್ಪತ್ರೆಯ ವೈದ್ಯರೊಬ್ಬರು ಹೇಳುವ ಪ್ರಕಾರ, ಹೊಟ್ಟೆಯಲ್ಲಿ ಕೆಜಿಗಟ್ಟಲೆ ಪ್ಲಾಸ್ಟಿಕ್ ಬ್ಯಾಗುಗಳನ್ನು ತಿಂದು ತುಂಬಿಸಿಕೊಂಡು ಹೊಟ್ಟೆಯ ಬಾಧೆಯಿಂದ ಪ್ರತಿ ತಿಂಗಳು ಆಸ್ಪತ್ರೆಗೆ 15ರಿಂದ 20 ಹಸುಗಳು ಬರುತ್ತವಂತೆ. ಅವುಗಳಲ್ಲಿ ಹೆಚ್ಚಿನವು ಕಲಾಸಿಪಾಳ್ಯ, ಮಡಿವಾಳ, ಚಾಮರಾಜಪೇಟೆ, ವಿ.ವಿ.ಪುರಂ ಮತ್ತು ಕಾಟನ್ ಪೇಟೆಯಿಂದ ಜಾಸ್ತಿಯಂತೆ.

ಹಸುಗಳು ಕಸದ ಬುಟ್ಟಿಯಿಂದ ಹಣ್ಣು-ತರಕಾರಿಗಳನ್ನು ತಿಂದುಕೊಂಡು ಬರಲಿ ಎಂದು ಮಾಲೀಕರು ತಮ್ಮ ಹಸುಗಳನ್ನು ಬಿಟ್ಟುಬಿಡುತ್ತಾರೆ. ಹಸುಗಳಿಗೆ ಪ್ಲಾಸ್ಟಿಕ್ ಕವರ್ ಗಳನ್ನು ತಿನ್ನಲು ಸಾಧ್ಯವಾಗದಾಗ ಇಡೀ ಕವರನ್ನೇ ತಿನ್ನುತ್ತವೆ. ಅವು ಕರಗದೆ ಹೊಟ್ಟೆಯಲ್ಲಿ ಹಾಗೆ ಉಳಿದುಬಿಡುತ್ತವೆ. ಪ್ಲಾಸ್ಟಿಕ್ ಕವರ್ ಗಳು ಹೊಟ್ಟೆಯಲ್ಲಿದ್ದಾಗ ಆಹಾರ ತಿನ್ನುವ ಪ್ರಮಾಣ ಕಡಿಮೆಯಾಗುತ್ತದೆ. ಆಗ ಹಾಲು ಸಿಗುವುದು ಕಡಿಮೆಯಾಗುತ್ತದೆ ಎನ್ನುತ್ತಾರೆ ವೈದ್ಯರು.
ಒಂದು ಹಸುವಿನ ಹೊಟ್ಟೆಯಿಂದ 50ರಿಂದ 70 ಕೆಜಿ ಪ್ಲಾಸ್ಟಿಕ್ ಕವರ್ ಗಳನ್ನು ಹೊರತೆಗೆದಿದ್ದೇವೆ. ಕೆಲವು ಹಸುಗಳ ಹೊಟ್ಟೆಯಿಂದ ಬ್ಲೇಡ್, ಉಗುರು, ಕಬ್ಬಿಣದ ತುಂಡುಗಳು ಕೂಡ ಸಿಕ್ಕಿವೆ ಎನ್ನುತ್ತಾರೆ ವೈದ್ಯರು.

ಪ್ರಾಣಿ ದಯಾ ಮಂಡಳಿಯ ಅಧಿಕಾರಿ ಮತ್ತು ವಕೀಲ ಎನ್.ಉಮೇಶ್ ಅವರು ಹೇಳುವ ಪ್ರಕಾರ, ಹಸುಗಳು ಬೀದಿ ಕಸಗಳನ್ನು ತಿಂದು ಹೆಚ್ಚು ದುಷ್ಪರಿಣಾಮಕ್ಕೆ ಒಳಗಾಗುತ್ತವೆ. ಹಸುಗಳ ಮಾಲೀಕರು ಹಸುಗಳನ್ನು ಎಲ್ಲೆಂದರಲ್ಲಿ ಮೇಯಲು ಬಿಡಬಾರದು. ನಗರಗಳಲ್ಲಿ ಹಸು ಮತ್ತು ಇತರ ಪ್ರಾಣಿಗಳನ್ನು ಸಾಕುವವರು ಜೋಪಾನವಾಗಿ ಸಾಕಬೇಕು ಎನ್ನುತ್ತಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT