ರಾಜ್ಯ

ಅನೇಕಲ್: ಈಜಲು ತೆರಳಿದ್ದ 3 ಬಾಲಕರು ನೀರು ಪಾಲು

Vishwanath S
ಅನೇಕಲ್: ಅನೇಕಲ್ ತಾಲೂಕಿನ ಹೆಣ್ಣಾಗರ ಕೆರೆಯಲ್ಲಿ ಈಜಲು ತೆರಳಿದ್ದ ನಾಲ್ವರು ಬಾಲಕರ ಪೈಕಿ ಮೂವರು ನೀರು ಪಾಲಾಗಿದ್ದಾರೆ. 
ನೀರು ಪಾಲಾದ ಬಾಲಕರನ್ನು ಅನೇಕಲ್ ತಾಲೂಕಿನ ರಾಜಾಪುರ ಗ್ರಾಮದ ಗಣೇಶ್(12), ಚೇತನ್(12) ಹಾಗೂ ರಾಕೇಶ್(13) ಎಂದು ಗುರುತಿಸಲಾಗಿದೆ. ಇನ್ನು ಬಾಲಕರು ಕೆರೆಯಲ್ಲಿ ಮುಳುಗಿದ್ದರಿಂದ ಹೆದರಿದ ಮತ್ತೋರ್ವ ಬಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಮೃತ ಬಾಲಕ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. 
ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
SCROLL FOR NEXT