ಸಾಂದರ್ಭಿಕ ಚಿತ್ರ 
ರಾಜ್ಯ

ತೆರಿಗೆ ಕಟ್ಟಿ, ಇಲ್ಲವೇ ದಂಡ ಪಾವತಿಸಿ: ಆಸ್ತಿ ತೆರಿಗೆ ಕಟ್ಟದವರಿಗೆ ಪಾಲಿಕೆ ಎಚ್ಚರಿಕೆ

ಆಸ್ತಿ ವಿವರಗಳನ್ನು ಸಲ್ಲಿಸಲು ಮತ್ತು ತಮ್ಮ ಆಸ್ತಿಯ ಅಳತೆಗೆ ತಕ್ಕಂತೆ ತೆರಿಗೆ ಕಟ್ಟಲು ಬೆಂಗಳೂರಿನ...

ಬೆಂಗಳೂರು: ಆಸ್ತಿ ವಿವರಗಳನ್ನು ಸಲ್ಲಿಸಲು ಮತ್ತು ತಮ್ಮ ಆಸ್ತಿಯ ಅಳತೆಗೆ ತಕ್ಕಂತೆ ತೆರಿಗೆ ಕಟ್ಟಲು ಬೆಂಗಳೂರಿನ ನಾಗರಿಕರಿಗೆ ಪಾಲಿಕೆ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿದೆ.
ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಪಾಲಿಕೆಯ ತೆರಿಗೆ ಮತ್ತು ಹಣಕಾಸಿನ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್, ಸ್ವಯಂ ಮೌಲ್ಯಮಾಪನ ಯೋಜನೆಯಡಿ ಕೆಲವು ಐಟಿ-ಬಿಟಿ ಕಂಪೆನಿಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಸಾರ್ವಜನಿಕರು ಕಟ್ಟಡದ ಕಟ್ಟಿದ ಪ್ರದೇಶದ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಮತ್ತು ಕಡಿಮೆ ತೆರಿಗೆ ಕಟ್ಟುತ್ತಾರೆ, ಕೆಲವು ಆಸ್ತಿ ಮಾಲಿಕರು ತಪ್ಪು ಅಳತೆ ತೋರಿಸುತ್ತಾರೆ. ಕೆಲವರು ಕಟ್ಟಿರುವುದಕ್ಕಿಂತ ಕಡಿಮೆ ಮಹಡಿ ತೋರಿಸಿದರೆ ಇನ್ನು ಕೆಲವು ಆಸ್ತಿ ವಲಯ ಮಟ್ಟದಲ್ಲಿದೆ ಎಂದು ಹೇಳಿದರು.
ಇಂತವರಿಗೆ ನಾಳೆಯಿಂದ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಆಸ್ತಿ ಮಾಲಿಕರು ತಮ್ಮ ಇತ್ತೀಚಿನ ಸರಿಯಾದ ಮಾಹಿತಿಯನ್ನು ನೀಡಬೇಕು. ಹೆಚ್ಚುವರಿ ತೆರಿಗೆ ಕಟ್ಟುವ ಅವಶ್ಯಕತೆಯಿದ್ದರೆ ಕಟ್ಟಬೇಕು ಎಂದು ಅವರು ಹೇಳಿದರು.
ಕೆಲವರು ಗೊತ್ತಿಲ್ಲದೆಯೂ ತಮ್ಮ ಆಸ್ತಿ ವಿವರಗಳನ್ನು ಪಾಲಿಕೆಗೆ ಸಲ್ಲಿಸದಿರಬಹುದು. ಅಂತವರಿಗೆ ತಮ್ಮ ಸರಿಯಾದ ವಿವರಗಳನ್ನುಸಲ್ಲಿಸಲು ಮತ್ತೊಂದು ಅವಕಾಶ ನೀಡುತ್ತೇವೆ. ಜನವರಿ 14ರ ನಂತರ ಬಿಬಿಎಂಪಿ ಕಂದಾಯ ಅಧಿಕಾರಿಗಳು ಆಸ್ತಿಗಳನ್ನು ವೈಜ್ಞಾನಿಕ ಕ್ರಮಗಳ ಮೂಲಕ ಮರು ಅಳತೆ ಮಾಡುತ್ತಾರೆ. ಖಾಸಗಿ ಸಂಸ್ಥೆಗಳ ಸಹಾಯದಿಂದ ಇಡೀ ಕೇಂದ್ರ ಸಮೀಕ್ಷೆ ನಡೆಸುತ್ತೇವೆ. ಅದಕ್ಕಾಗಿ ಅಲ್ಪಾವಧಿಯ ಟೆಂಡರ್ ಕರೆಯಲಾಗುವುದು. ನಮ್ಮ ಪಾಲಿಕೆ ಅಧಿಕಾರಿಗಳು ಕೂಡ ಕೈಪಿಡಿ ಸಮೀಕ್ಷೆ ನಡೆಸಲಿದ್ದಾರೆ. ಅವರಿಗೆ ಏನಾದರೂ ವ್ಯತ್ಯಾಸ ಗೊತ್ತಾದರೆ ದುಪ್ಪಟ್ಟು ಹಣ ಪಡೆಯಲಾಗುವುದು. ನಮ್ಮಲ್ಲಿ 75 ಟೆಕ್ ಪಾರ್ಕ್ ಗಳಿದ್ದು ಕೆಲವು ತಪ್ಪು ಅಳತೆಗಳನ್ನು ತೋರಿಸುತ್ತವೆ. ಅಪರಾಧಗಳು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಣಶೇಖರ್ ಹೇಳಿದರು.
ಬಿಬಿಎಂಪಿ ಇದರಿಂದ ಸುಮಾರು 200 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಪಕ್ಷದ ಮೇಲೆ ನನಗೆ ನಂಬಿಕೆ ಇದೆ: ದುಡ್ಡು- ಬ್ಲಡ್ ನಿರಂತರ ಚಲನೆಯಲ್ಲಿ ಇರಬೇಕು; ಅಕ್ಕಪಕ್ಕದಲ್ಲಿ ಇರುವವರೇ ಮೋಸ ಮಾಡುತ್ತಾರೆ, ಎಚ್ಚರ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT