ಸಾಂದರ್ಭಿಕ ಚಿತ್ರ 
ರಾಜ್ಯ

ತೆರಿಗೆ ಕಟ್ಟಿ, ಇಲ್ಲವೇ ದಂಡ ಪಾವತಿಸಿ: ಆಸ್ತಿ ತೆರಿಗೆ ಕಟ್ಟದವರಿಗೆ ಪಾಲಿಕೆ ಎಚ್ಚರಿಕೆ

ಆಸ್ತಿ ವಿವರಗಳನ್ನು ಸಲ್ಲಿಸಲು ಮತ್ತು ತಮ್ಮ ಆಸ್ತಿಯ ಅಳತೆಗೆ ತಕ್ಕಂತೆ ತೆರಿಗೆ ಕಟ್ಟಲು ಬೆಂಗಳೂರಿನ...

ಬೆಂಗಳೂರು: ಆಸ್ತಿ ವಿವರಗಳನ್ನು ಸಲ್ಲಿಸಲು ಮತ್ತು ತಮ್ಮ ಆಸ್ತಿಯ ಅಳತೆಗೆ ತಕ್ಕಂತೆ ತೆರಿಗೆ ಕಟ್ಟಲು ಬೆಂಗಳೂರಿನ ನಾಗರಿಕರಿಗೆ ಪಾಲಿಕೆ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿದೆ.
ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಪಾಲಿಕೆಯ ತೆರಿಗೆ ಮತ್ತು ಹಣಕಾಸಿನ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್, ಸ್ವಯಂ ಮೌಲ್ಯಮಾಪನ ಯೋಜನೆಯಡಿ ಕೆಲವು ಐಟಿ-ಬಿಟಿ ಕಂಪೆನಿಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಸಾರ್ವಜನಿಕರು ಕಟ್ಟಡದ ಕಟ್ಟಿದ ಪ್ರದೇಶದ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಮತ್ತು ಕಡಿಮೆ ತೆರಿಗೆ ಕಟ್ಟುತ್ತಾರೆ, ಕೆಲವು ಆಸ್ತಿ ಮಾಲಿಕರು ತಪ್ಪು ಅಳತೆ ತೋರಿಸುತ್ತಾರೆ. ಕೆಲವರು ಕಟ್ಟಿರುವುದಕ್ಕಿಂತ ಕಡಿಮೆ ಮಹಡಿ ತೋರಿಸಿದರೆ ಇನ್ನು ಕೆಲವು ಆಸ್ತಿ ವಲಯ ಮಟ್ಟದಲ್ಲಿದೆ ಎಂದು ಹೇಳಿದರು.
ಇಂತವರಿಗೆ ನಾಳೆಯಿಂದ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಆಸ್ತಿ ಮಾಲಿಕರು ತಮ್ಮ ಇತ್ತೀಚಿನ ಸರಿಯಾದ ಮಾಹಿತಿಯನ್ನು ನೀಡಬೇಕು. ಹೆಚ್ಚುವರಿ ತೆರಿಗೆ ಕಟ್ಟುವ ಅವಶ್ಯಕತೆಯಿದ್ದರೆ ಕಟ್ಟಬೇಕು ಎಂದು ಅವರು ಹೇಳಿದರು.
ಕೆಲವರು ಗೊತ್ತಿಲ್ಲದೆಯೂ ತಮ್ಮ ಆಸ್ತಿ ವಿವರಗಳನ್ನು ಪಾಲಿಕೆಗೆ ಸಲ್ಲಿಸದಿರಬಹುದು. ಅಂತವರಿಗೆ ತಮ್ಮ ಸರಿಯಾದ ವಿವರಗಳನ್ನುಸಲ್ಲಿಸಲು ಮತ್ತೊಂದು ಅವಕಾಶ ನೀಡುತ್ತೇವೆ. ಜನವರಿ 14ರ ನಂತರ ಬಿಬಿಎಂಪಿ ಕಂದಾಯ ಅಧಿಕಾರಿಗಳು ಆಸ್ತಿಗಳನ್ನು ವೈಜ್ಞಾನಿಕ ಕ್ರಮಗಳ ಮೂಲಕ ಮರು ಅಳತೆ ಮಾಡುತ್ತಾರೆ. ಖಾಸಗಿ ಸಂಸ್ಥೆಗಳ ಸಹಾಯದಿಂದ ಇಡೀ ಕೇಂದ್ರ ಸಮೀಕ್ಷೆ ನಡೆಸುತ್ತೇವೆ. ಅದಕ್ಕಾಗಿ ಅಲ್ಪಾವಧಿಯ ಟೆಂಡರ್ ಕರೆಯಲಾಗುವುದು. ನಮ್ಮ ಪಾಲಿಕೆ ಅಧಿಕಾರಿಗಳು ಕೂಡ ಕೈಪಿಡಿ ಸಮೀಕ್ಷೆ ನಡೆಸಲಿದ್ದಾರೆ. ಅವರಿಗೆ ಏನಾದರೂ ವ್ಯತ್ಯಾಸ ಗೊತ್ತಾದರೆ ದುಪ್ಪಟ್ಟು ಹಣ ಪಡೆಯಲಾಗುವುದು. ನಮ್ಮಲ್ಲಿ 75 ಟೆಕ್ ಪಾರ್ಕ್ ಗಳಿದ್ದು ಕೆಲವು ತಪ್ಪು ಅಳತೆಗಳನ್ನು ತೋರಿಸುತ್ತವೆ. ಅಪರಾಧಗಳು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಣಶೇಖರ್ ಹೇಳಿದರು.
ಬಿಬಿಎಂಪಿ ಇದರಿಂದ ಸುಮಾರು 200 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT