ರಾಜ್ಯ

ತೆರಿಗೆ ಕಟ್ಟಿ, ಇಲ್ಲವೇ ದಂಡ ಪಾವತಿಸಿ: ಆಸ್ತಿ ತೆರಿಗೆ ಕಟ್ಟದವರಿಗೆ ಪಾಲಿಕೆ ಎಚ್ಚರಿಕೆ

Sumana Upadhyaya
ಬೆಂಗಳೂರು: ಆಸ್ತಿ ವಿವರಗಳನ್ನು ಸಲ್ಲಿಸಲು ಮತ್ತು ತಮ್ಮ ಆಸ್ತಿಯ ಅಳತೆಗೆ ತಕ್ಕಂತೆ ತೆರಿಗೆ ಕಟ್ಟಲು ಬೆಂಗಳೂರಿನ ನಾಗರಿಕರಿಗೆ ಪಾಲಿಕೆ ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡಿದೆ.
ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಪಾಲಿಕೆಯ ತೆರಿಗೆ ಮತ್ತು ಹಣಕಾಸಿನ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಕೆ.ಗುಣಶೇಖರ್, ಸ್ವಯಂ ಮೌಲ್ಯಮಾಪನ ಯೋಜನೆಯಡಿ ಕೆಲವು ಐಟಿ-ಬಿಟಿ ಕಂಪೆನಿಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಸಾರ್ವಜನಿಕರು ಕಟ್ಟಡದ ಕಟ್ಟಿದ ಪ್ರದೇಶದ ಬಗ್ಗೆ ತಪ್ಪು ಮಾಹಿತಿ ಕೊಟ್ಟಿದ್ದಾರೆ ಮತ್ತು ಕಡಿಮೆ ತೆರಿಗೆ ಕಟ್ಟುತ್ತಾರೆ, ಕೆಲವು ಆಸ್ತಿ ಮಾಲಿಕರು ತಪ್ಪು ಅಳತೆ ತೋರಿಸುತ್ತಾರೆ. ಕೆಲವರು ಕಟ್ಟಿರುವುದಕ್ಕಿಂತ ಕಡಿಮೆ ಮಹಡಿ ತೋರಿಸಿದರೆ ಇನ್ನು ಕೆಲವು ಆಸ್ತಿ ವಲಯ ಮಟ್ಟದಲ್ಲಿದೆ ಎಂದು ಹೇಳಿದರು.
ಇಂತವರಿಗೆ ನಾಳೆಯಿಂದ ಒಂದು ತಿಂಗಳ ಕಾಲಾವಕಾಶ ನೀಡುತ್ತೇವೆ. ಆಸ್ತಿ ಮಾಲಿಕರು ತಮ್ಮ ಇತ್ತೀಚಿನ ಸರಿಯಾದ ಮಾಹಿತಿಯನ್ನು ನೀಡಬೇಕು. ಹೆಚ್ಚುವರಿ ತೆರಿಗೆ ಕಟ್ಟುವ ಅವಶ್ಯಕತೆಯಿದ್ದರೆ ಕಟ್ಟಬೇಕು ಎಂದು ಅವರು ಹೇಳಿದರು.
ಕೆಲವರು ಗೊತ್ತಿಲ್ಲದೆಯೂ ತಮ್ಮ ಆಸ್ತಿ ವಿವರಗಳನ್ನು ಪಾಲಿಕೆಗೆ ಸಲ್ಲಿಸದಿರಬಹುದು. ಅಂತವರಿಗೆ ತಮ್ಮ ಸರಿಯಾದ ವಿವರಗಳನ್ನುಸಲ್ಲಿಸಲು ಮತ್ತೊಂದು ಅವಕಾಶ ನೀಡುತ್ತೇವೆ. ಜನವರಿ 14ರ ನಂತರ ಬಿಬಿಎಂಪಿ ಕಂದಾಯ ಅಧಿಕಾರಿಗಳು ಆಸ್ತಿಗಳನ್ನು ವೈಜ್ಞಾನಿಕ ಕ್ರಮಗಳ ಮೂಲಕ ಮರು ಅಳತೆ ಮಾಡುತ್ತಾರೆ. ಖಾಸಗಿ ಸಂಸ್ಥೆಗಳ ಸಹಾಯದಿಂದ ಇಡೀ ಕೇಂದ್ರ ಸಮೀಕ್ಷೆ ನಡೆಸುತ್ತೇವೆ. ಅದಕ್ಕಾಗಿ ಅಲ್ಪಾವಧಿಯ ಟೆಂಡರ್ ಕರೆಯಲಾಗುವುದು. ನಮ್ಮ ಪಾಲಿಕೆ ಅಧಿಕಾರಿಗಳು ಕೂಡ ಕೈಪಿಡಿ ಸಮೀಕ್ಷೆ ನಡೆಸಲಿದ್ದಾರೆ. ಅವರಿಗೆ ಏನಾದರೂ ವ್ಯತ್ಯಾಸ ಗೊತ್ತಾದರೆ ದುಪ್ಪಟ್ಟು ಹಣ ಪಡೆಯಲಾಗುವುದು. ನಮ್ಮಲ್ಲಿ 75 ಟೆಕ್ ಪಾರ್ಕ್ ಗಳಿದ್ದು ಕೆಲವು ತಪ್ಪು ಅಳತೆಗಳನ್ನು ತೋರಿಸುತ್ತವೆ. ಅಪರಾಧಗಳು ಕಂಡುಬಂದಲ್ಲಿ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗುಣಶೇಖರ್ ಹೇಳಿದರು.
ಬಿಬಿಎಂಪಿ ಇದರಿಂದ ಸುಮಾರು 200 ಕೋಟಿ ರೂಪಾಯಿ ಸಂಗ್ರಹಿಸುವ ನಿರೀಕ್ಷೆಯಿದೆ.
SCROLL FOR NEXT