ರಾಜ್ಯ

ಮೇಟಿ ಲೈಂಗಿಕ ಹಗರಣ: ಪೇದೆ ಸುಭಾಷ್ ಸೇರಿ ನಾಲ್ವರ ವಿರುದ್ಧ ವಿಜಯಲಕ್ಷ್ಮಿ ದೂರು!

Srinivasamurthy VN

ಬಾಗಲಕೋಟೆ: ಮೇಟಿ ಲೈಂಗಿಕ ಹಗರಣ ಸಂಬಂಧ ಸುದ್ದಿಯಾಗಿದ್ದ ಮಹಿಳೆ ವಿಜಯಲಕ್ಷ್ಮಿ ಸರೂರು ಅವರು ಕಾನ್ ಸ್ಟೆಬಲ್‌ ಸುಭಾಷ್‌ ಮುಗಳಖೋಡ ಸೇರಿ ನಾಲ್ಕು ಮಂದಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ ವಿಜಯಲಕ್ಷ್ಮಿ ಅವರು, ಡಿಎಆರ್ ಕಾನ್ಸ್ ಟೇಬಲ್ ಸುಭಾಷ್ ಮುಗಳಖೋಡ, ಸಿದ್ದಲಿಂಗ ಅಬಲಗಟ್ಟಿ, ಮಾರುತಿ ಮೀರಜ್ ಕರ್ ಮತ್ತು ಅಶೋಕ್ ಲಾಗಲೋಟಿ ಎಂಬುವವರ ವಿರುದ್ಧ ಶನಿವಾರ ಮಧ್ಯರಾತ್ರಿ  ವಿಜಯಲಕ್ಷ್ನಿ ದೂರು ನೀಡಿದ್ದಾರೆ ಎಂದು ತಿಳಿದುಬಂದಿದೆ. ಲೈಂಗಿಕ ಹಗರಣ ಸಂಬಂಧ ತಮ್ಮ ಹಿಂದೆ ಬಿದ್ದಿರುವ ಮಾಧ್ಯಮಗಳ ಕಣ್ಣುತಪ್ಪಿಸಲು ವಿಜಯಲಕ್ಷ್ನಿ ಅವರು ತಡರಾತ್ರಿ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಶನಿವಾರ ರಾತ್ರಿ ಬಾಗಲಕೋಟೆಯ ನವನಗರ ಠಾಣೆಗೆ ಆಗಮಿಸಿದ ವಿಜಯಲಕ್ಷ್ಮಿ ಅವರು ಜೀವ ಬೆದರಿಕೆ ಆರೋಪದಲ್ಲಿ ಡಿಎಆರ್‌ ಪೇದೆ ಸುಭಾಷ್‌ ಮುಗಳಖೋಡ ಸೇರಿದಂತೆ ನಾಲ್ಕು ಮಂದಿ ವಿರುದ್ಧ ದೂರುದಾಖಲಿಸಿದ್ದಾರೆ.  ದೂರು ದಾಖಲಿಸಿಕೊಂಡಿರುವ ಪೊಲೀಸರು ಐಪಿಸಿ ಸೆಕ್ಷನ್‌ 307 (ಹತ್ಯಾ ಪ್ರಯತ್ನ), 356 (ಹಲ್ಲೆ), 354 ಬಿ (ಮಹಿಳೆ ಮೇಲೆ ದೌರ್ಜನ್ಯ),109,143, 504,  ಹಾಗೂ120ಬಿ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ  ನಡೆಸುತ್ತಿದ್ದಾರೆ.

SCROLL FOR NEXT