ಸಾಂದರ್ಭಿಕ ಚಿತ್ರ 
ರಾಜ್ಯ

ವಿಧಾನ ಪರಿಷತ್ ಶಿಕ್ಷಕ, ಪದವೀಧರ ಕ್ಷೇತ್ರಗಳಿಗೆ ಮತದಾನ ಆರಂಭ

ವಿಧಾನಪರಿಷತ್ತಿನ ನಾಲ್ಕು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆಯ ಮತದಾನ...

ಬೆಂಗಳೂರು: ವಿಧಾನಪರಿಷತ್ತಿನ ನಾಲ್ಕು ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಚುನಾವಣೆಯ  ಗುರುವಾರ ಮತದಾನ ನಡೆಯುತ್ತಿದೆ.

ವಾಯುವ್ಯ ಪದವೀಧರರ ಕ್ಷೇತ್ರ, ದಕ್ಷಿಣ ಪದವೀಧರರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಗಳಿಗೆ ಈಗಾಗಲೇ ಮತದಾನ ಆರಂಭವಾಗಿದ್ದು, ಸಂಜೆ 4ಗಂಟೆವರೆಗೆ ನಡೆಯಲಿದೆ. ಈ ತಿಂಗಳ 13ರಂದು ಮತ ಎಣಿಕೆ ನಡೆಯಲಿದೆ.

ಕಾಂಗ್ರೆಸ್ಸಿನ ಮಹಾಂತೇಶ್‌ ಕೌಜಲಗಿ (ವಾಯುವ್ಯ ಪದವೀಧರರ ಕ್ಷೇತ್ರ), ಬಿಜೆಪಿಯ ಗೋ.ಮಧುಸೂಧನ್‌ (ದಕ್ಷಿಣ ಪದವೀಧರರ ಕ್ಷೇತ್ರ), ಅರುಣ್‌ ಶಹಾಪೂರ (ವಾಯುವ್ಯ ಶಿಕ್ಷಕರ ಕ್ಷೇತ್ರ) ಹಾಗೂ ಜೆಡಿಎಸ್‌ನ ಬಸವರಾಜ ಹೊರಟ್ಟಿ (ಪಶ್ಚಿಮ ಶಿಕ್ಷಕರ ಕ್ಷೇತ್ರ) ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಚುನಾವಣೆ ಎದುರಾಗಿದೆ. ಇವರ ಪೈಕಿ ಮಹಾಂತೇಶ್‌ ಕೌಜಲಗಿ, ಅರುಣ್‌ ಶಹಾಪೂರ್‌ ಹಾಗೂ ಹೊರಟ್ಟಿ ಮತ್ತೆ ಸ್ಪರ್ಧೆಗಿಳಿದ್ದಾರೆ.

ವಾಯುವ್ಯ ಪದವೀಧರರ ಕ್ಷೇತ್ರದಿಂದ  ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಹಾಂತೇಶ್‌ ಕೌಜಲಗಿ, ಬಿಜೆಪಿಯಿಂದ ಹನುಮಂತಪ್ಪ ನಿರಾಣಿ, ಜೆಡಿಎಸ್‌ನಿಂದ ಸಾತಗೌಡ ಪಾಟೀಲ್‌ ಹಾಗೂ ಜೆಡಿಯುನಿಂದ ಡಾ.ಎಂ.ಪಿ.ನಾಡಗೌಡ ಕಣದಲ್ಲಿರುವ ಪ್ರಮುಖರು. ಜತೆಗೆ 12 ಮಂದಿ ಪಕ್ಷೇತರರೂ ಸ್ಪರ್ಧೆಗಿಳಿದಿದ್ದಾರೆ.

ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮೈ.ವಿ.ರವಿಶಂಕರ್‌, ಕಾಂಗ್ರೆಸ್‌ ಪಕ್ಷದಿಂದ ಡಾ.ಎಚ್‌.ಎನ್‌.ರವೀಂದ್ರ, ಜೆಡಿಎಸ್‌ನಿಂದ ಕೆ.ಟಿ.ಶ್ರೀಕಂಠೇಗೌಡ ಹಾಗೂ ಕನ್ನಡ ಚಳವಳಿ ವಾಟಾಳ್‌ ಪಕ್ಷದಿಂದ ವಾಟಾಳ್‌ ನಾಗರಾಜ್‌ ಕಣಕ್ಕಿಳಿದಿದ್ದಾರೆ.

ಇನ್ನು ಸಾಹಿತಿಗಳ ವಲಯದಿಂದ ಪ್ರೊ.ಕೆ.ಎಸ್‌.ಭಗವಾನ್‌ ಸೇರಿದಂತೆ 13 ಮಂದಿ ಪಕ್ಷೇತರರಿದ್ದಾರೆ. ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಬಿಜೆಪಿಯಿಂದ ಅರುಣ್‌ ಶಹಾಪೂರ. ಕಾಂಗ್ರೆಸ್ಸಿನಿಂದ ನಿಂಗಪ್ಪ ಬನ್ನೂರ, ಜೆಡಿಎಸ್‌ನಿಂದ ಶಿವರುದ್ರಪ್ಪ ಅಂಗಡಿ ಕಣಕ್ಕಿಳಿದಿದ್ದಾರೆ. ಇವರೊಂದಿಗೆ ಒಂಬತ್ತು ಮಂದಿ ಪಕ್ಷೇತರರೂ ಅಖಾಡದಲ್ಲಿದ್ದಾರೆ.

ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಬಸವರಾಜ ಹೊರಟ್ಟಿ, ಬಿಜೆಪಿಯಿಂದ ಪ್ರೊ.ಎಂ.ನಾಗರಾಜ, ಕಾಂಗ್ರೆಸ್‌ನಿಂದ ಟಿ.ಈಶ್ವರ, ಜತೆಗೆ ಐವರು ಪಕ್ಷೇತರರೂ ಕಣದಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT