ರಾಜ್ಯ

ಬೆಂಗಳೂರು : ಟ್ರಯಲ್ ನೋಡುವುದಾಗಿ ಹೇಳಿ ಕಾರು ಕದ್ದು ಪರಾರಿಯಾಗಿದ್ದ ಕಳ್ಳನ ಬಂಧನ

Shilpa D

ಬೆಂಗಳೂರು :ಓಎಲ್‌ಎಕ್ಸ್‌ ನಲ್ಲಿ ಮಾರಾಟಕ್ಕಾಗಿ ಇಟ್ಟಿದ್ದ ಕಾರನ್ನು ಟ್ರಯಲ್‌ ನೋಡುವುದಾಗಿ ಹೇಳಿ ಪರಾರಿಯಾಗಿದ್ದ ಖದೀಮನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಸುನೀಲ್ ಬಂಧಿತ ಆರೋಪಿಯಾಗಿದ್ದಾನೆ. ಈತ ಜೂನ್ 18 ರಂದು ಅಭಿಷೇಕ್‌ ಎನ್ನುವವರು ಮಾರಾಟ ಮಾಡಲು ಮುಂದಾಗಿದ್ದ ಸ್ಕ್ವಾರ್ಪಿಯೋ ಕಾರನ್ನು ಟೆಸ್ಟ್‌ ಡ್ರೈವ್‌ ಮಾಡುವುದಾಗಿ ಹೋದಾದ ಮರಳಿ ಬಾರದೇ ನಾಪತ್ತೆಯಾಗಿದ್ದ.

ಗಂಟೆಗಳ ಕಾಲ ಕಾದರೂ ವಾಪಾಸ್‌ ಬರದಿದ್ದಾಗ ಆತಂಕಗೊಂಡ ಅಭಿಷೇಕ್‌ ಅವರು ಸುನೀಲ್ ಮೊಬೈಲ್‌ ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಬಂದಿದೆ. ಬಳಿಕ ವೈಟ್‌ ಫೀಲ್ಡ್‌ ಪೊಲೀಸರಿಗೆ ದೂರುನೀಡಲಾಗಿತ್ತು.

ದೂರಿನನ್ವಯ ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು ಮಂಗಳವಾರ ಸಂಜೆ ಸರ್ಜಾಪುರದ ವಿದ್ಯಾನಗರ ಬಳಿ ಸುನೀಲ್‌ ನನ್ನು ಕಾರು ಸಮೇತ ವಶಕ್ಕೆ ಪಡೆದಿದ್ದಾರೆ.

SCROLL FOR NEXT