ರಾಜ್ಯ

ಡ್ರೈವರ್ ನ ಕಾರ್ ವೀಲಿಂಗ್ ಕ್ರೇಜ್ ಗೆ ಬಲಿಯಾದಳು ಯುವತಿ

Shilpa D

ಮಡಿಕೇರಿ: ಡ್ರೈವರ್ ನ ವೀಲಿಂಗ್ ಕ್ರೇಜ್​ನಿಂದಾಗಿ ಕಾರು ಹಾಗೂ ಬಸ್ಸು ಪರಸ್ಪರ ಡಿಕ್ಕಿಯಾಗಿ ಕಾರಿನಲ್ಲಿದ್ದ 25ರ ಹರೆಯದ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ಮೈಸೂರು- ಮಡಿಕೇರಿ ರಾಜ್ಯ ಹೆದ್ದಾರಿಯ ಕೆದಕಲ್ ತಿರುವಿನಲ್ಲಿ ಸೋಮವಾರ ಕೆಎಸ್​ಆರ್​ಟಿಸಿ ಬಸ್ಸಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೈಸೂರಿನ ರಾಜೇಂದ್ರನಗರದ ಕೇಸರಿ ನಿವಾಸಿ ಚೈತ್ರಾ (25) ಸಾವನ್ನಪ್ಪಿದ್ದಾಳೆ.

ಗಂಭೀರವಾಗಿ ಗಾಯ ಗೊಂಡ ಮೈಸೂರಿನ ಸದನ್ ಎಂಬಾತನನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಒಯ್ಯಲಾಯಿತು. ಮೈಸೂರಿನ ನಂದಿನಿ, ರೇಣುಕಾ, ವಿನಯ್ ಹಾಗೂ ಮಿಥುನ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಕಾರು ಚಾಲಕನ ಬೇಜವಾಬ್ದಾರಿಯೇ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT