ಸುರೇಂದ್ರ ಕುಮಾರ್ 
ರಾಜ್ಯ

ಪೊಲೀಸರು, ರಾಜಕಾರಣಿಗಳು, ಉದ್ಯಮಿಗಳಿಗೆ 30 ಕೋಟಿ ರೂ. ಸಾಲ ನೀಡಿದ್ದ ಸುರೇಂದ್ರ ಕುಮಾರ್

ಸಂಜಯನಗರದಲ್ಲಿ ಕೊಲೆಯಾದ ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿ ರಾಜಕಾರಣಿಗಳು, ಪೊಲೀಸರು ಹಾಗೂ ಹಲವು ಉದ್ಯಮಿಗಳಿಗೆ ಸುಮಾರು 30 ...

ಬೆಂಗಳೂರು: ಸಂಜಯನಗರದಲ್ಲಿ ಕೊಲೆಯಾದ ಉದ್ಯಮಿ ಸುರೇಂದ್ರ ಕುಮಾರ್ ಪರಚೂರಿ ರಾಜಕಾರಣಿಗಳು, ಪೊಲೀಸರು ಹಾಗೂ ಹಲವು ಉದ್ಯಮಿಗಳಿಗೆ ಸುಮಾರು 30 ಕೋಟಿ ರೂ ಹಣ ಸಾಲ ನೀಡಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ತಮಗೆ ಪರಿಚಯ ಇರುವವರಿಗೆ ಸುರೇಂದ್ರ ಕುಮಾರ್ ಕೈಸಾಲ ನೀಡುತ್ತಾ ಬಂದಿದ್ದರು. ಕೊಲವೊಮ್ಮೆ ತಮ್ಮಿಂದ ಸಾಲ ಪಡೆದವರು ಹಣ ಮರಳಲಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದರೇ ಅಂತವರ ಸಾಲ ಮನ್ನಾ ಮಾಡಿದ್ದರು ಎಂದು ಸುರೇಂದ್ರ ಸಂಬಂಧಿ ಕ್ಯಾಪ್ಟನ್ ಚೌಧುರಿ ಹೇಳಿದ್ದಾರೆ.

ಸುರೇಂದ್ರ ಕುಮಾರ್ ಕೊಲೆ ಸಂಬಂಧ 4 ತಂಡಗಳನ್ನು ರಚಿಸಿರುವ ಪೊಲೀಸರ ಒಂದು ತಂಡ ಗುಂಟೂರಿಗೆ ಹೋಗಿದ್ದರೆ, ಮತ್ತೊಂದು ತಂಡ ಮಥುರಾಗೆ  ತೆರಳಿದೆ. ಇನ್ನುಳಿದ ತಂಡಗಳು ನಗರದಲ್ಲೇ ಇರುವ ಮೃತರ  ಸ್ನೇಹಿತರು, ಸಂಬಂಧಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.

ಇನ್ನೂ ಸುರೇಂದ್ರ ಕುಮಾರ್ ಹಣಕಾಸು ವ್ಯವಹಾರ ಮಾಡುತ್ತಿದ್ದುದ್ದರಿಂದ ಪ್ರತಿಯೊಂದು ಲೆಕ್ಕವನ್ನು ಬರೆದಿಡುತ್ತಿದ್ದರು, ಹಣದ ವಹಿವಾಟು ಸಂಬಂಧಿಸಿದಂತೆ  ಪ್ರತಿಯೊಂದು ದಾಖಲೆಗಳನ್ನು ಸಂಗ್ರಹಿಸಿಡುತ್ತಿದ್ದರು ಎಂದು ಸುರೇಂದ್ರ ಕುಮಾರ್ ಸಂಬಂಧಿ ತಿಳಿಸಿದ್ದಾರೆ.

ದೇವನಹಳ್ಳಿ ಬಳಿ ಎರಡು ಎಕರೆ ಭೂಮಿಯನ್ನು ಲೀಸ್ ಗೆ ಪಡೆದಿದ್ದ ಸುರೇಂದ್ರ ಕುಮಾರ್ ಅದರಲ್ಲಿ 56 ನಾಯಿಗಳನ್ನು ಸಾಕಿದ್ದರು. ಪಕ್ಕದಲ್ಲಿದ್ದ ಗ್ರಾಮದ ಬಡ ಜನರಿಗೆ ಸಹಾಯ ಮಾಡುತ್ತಿದ್ದರು. ಫಾರ್ಮ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30 ಕೇರ್ ಟೇಕರ್ ಗಳು ಸುರೇಂದ್ರ ಕುಮಾರ್ ಅವರ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಸುರೇಂದ್ರ ಅವರ ಬಳಿ ಯಾವುದೇ ಸ್ಥಿರಾಸ್ತಿ ಇಲ್ಲ, ಅವರು ಹಣಕಾಸು ವ್ಯವಹಾರ ಮಾಡುತ್ತಿದ್ದರು. ಬೆಂಜ್ ಹಾಗೂ ಮಾರುತಿ ಇಕೋ ಕಾರನ್ನು ಹೊಂದಿದ್ದರು ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT