ಸಾಂದರ್ಭಿಕ ಚಿತ್ರ 
ರಾಜ್ಯ

ನೀರಿಗೆ ತತ್ವಾರ: ಬೆಂಗಳೂರಿಗೆ ನೀರು ಹರಿಸುವಿಕೆಯಲ್ಲಿ 65 ದಶಲಕ್ಷ ಲೀಟರ್ ಕಡಿತ

ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತನ್ನ ನಿಗದಿತ ದಿನಕ್ಕೆ ಸಾವಿರದ 400...

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ತನ್ನ ನಿಗದಿತ ದಿನಕ್ಕೆ ಸಾವಿರದ 400 ದಶಲಕ್ಷ ಲೀಟರ್  ಕಾವೇರಿ ನೀರಿಗೆ ಬದಲಾಗಿ ಅಕ್ಟೋಬರ್ ತಿಂಗಳಿನಿಂದ ಪ್ರತಿ ದಿನಕ್ಕೆ 60ರಿಂದ 65 ಮಿಲಿಯನ್ ಲೀಟರ್ ನೀರನ್ನು ಕಡಿಮೆ ಬಿಡುಗಡೆ ಮಾಡುತ್ತಿದೆ.
ನೀರಿನ ಕೊರತೆಯಿಂದ ಮುಂದೆ ಬೇಸಿಗೆಯಲ್ಲಿ ಯಾವುದೇ ಸಮಸ್ಯೆ ತಲೆದೋರದಂತೆ ಮತ್ತು ಕೆಲವು ನೀರು ಯೋಜನೆಗಳಿಗಾಗಿ ಕಾವೇರಿ ನೀರಿನ ಅವಶ್ಯಕತೆಯಿರುವುದರಿಂದ ಈಗಿನಿಂದಲೇ ನೀರು ಬಿಡುಗಡೆ ಮಾಡುವುದನ್ನು ಕಡಿಮೆ ಮಾಡಲಾಗಿದೆ ಎಂದು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಕೆಂಪರಾಮಯ್ಯ ತಿಳಿಸಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಅವರು, ಮೊನ್ನೆ ದೀಪಾವಳಿ ಹಬ್ಬವನ್ನು ಹೊರತುಪಡಿಸಿ ಅಕ್ಟೋಬರ್ ತಿಂಗಳಿನಿಂದ ದಿನಕ್ಕೆ ಸಾವಿರದ 335 ಮಿಲಿಯನ್ ಲೀಟರ್ ನಿಂದ ಸಾವಿರದ 340 ಮಿಲಿಯನ್ ಲೀಟರ್ ನಷ್ಟು ಬಿಡುಗಡೆ ಮಾಡುತ್ತಿದ್ದು ನವೆಂಬರ್ ತಿಂಗಳಿನಲ್ಲಿಯೂ ಮುಂದುವರಿಯಲಿದೆ. 
ಈ ವರ್ಷ ನೈರುತ್ಯ ಮುಂಗಾರಿನಲ್ಲಿ ಶೇಕಡಾ 18ರಷ್ಟು ಕಡಿಮೆಯಾಗಿದೆ. ಈಶಾನ್ಯ ಮಾರುತ ಕೂಡ ಕ್ಷೀಣವಾಗಿತ್ತು. ಅಕ್ಟೋಬರ್ ತಿಂಗಳಲ್ಲಿ ರಾಜ್ಯದಲ್ಲಿ 28 ಮಿಲಿ ಮೀಟರ್ ಮಳೆಯಾಗಿದೆಯಷ್ಟೆ. ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿದೆ. ಕೃಷ್ಣರಾಜ ಸಾಗರದಲ್ಲಿ ಸಾಮರ್ಥ್ಯಕ್ಕಿಂತ 77 ಅಡಿ ನೀರಿನ ಮಟ್ಟ ಕಡಿಮೆಯಾಗಿದ್ದು 124.80 ಅಡಿಗಳಿವೆ. 
ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನು ನಂಬಿಕೊಂಡಿರುವ ಜನರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಈಗಿನಿಂದಲೇ ಕಡಿಮೆ ನೀರನ್ನು ಪೂರೈಸಿ ಅಗತ್ಯವಿದ್ದಾಗ ಹೆಚ್ಚು ನೀರು ಬಿಡುಗಡೆ ಮಾಡಬಹುದು ಎಂಬ ಉದ್ದೇಶದಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುತ್ತಾರೆ ಕೆಂಪರಾಮಯ್ಯ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT