ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಹಲವು ಜನರಿಗೆ ನಿನ್ನೆ ಮತ್ತೊಂದು ಅಕ್ಷಯ ತೃತೀಯವಾಗಿತ್ತು

500 ಹಾಗೂ ಸಾವಿರ ರೂ ಮುಖಬೆಲೆಯ ನೋಟು ನಿಷೇಧದಿಂದಾಗಿ ಬೆಂಗಳೂರಿನಲ್ಲಿ ನಿನ್ನೆ ಮತ್ತೊಂದು ಅಕ್ಷಯ ತೃತೀಯವಾಗಿ ಮಾರ್ಪಟ್ಟಿತ್ತು...

ಬೆಂಗಳೂರು: 500 ಹಾಗೂ ಸಾವಿರ ರೂ ಮುಖಬೆಲೆಯ ನೋಟು ನಿಷೇಧದಿಂದಾಗಿ ಬೆಂಗಳೂರಿನಲ್ಲಿ ನಿನ್ನೆ ಮತ್ತೊಂದು ಅಕ್ಷಯ ತೃತೀಯವಾಗಿ ಮಾರ್ಪಟ್ಟಿತ್ತು.

ಸಾವಿರಾರು ಮಂದಿ ನೂರಾರು ಚಿನ್ನಾಭರಣ ಅಂಗಡಿಗೆ ತೆರಳಿ ತಾವು ಕೂಡಿಟ್ಟ ಹಣದಿಂದ ಆಭರಣ ಕೊಂಡುಕೊಳ್ಳಲು ಮುಗಿಬಿದ್ದರು. ಮಂಗಳವಾರ ರಾತ್ರಿ 8.30 ರಿಂದ ಬುಧವಾರ ಮಧ್ಯರಾತ್ರಿವರೆಗೂ ಹಲವು ಅಂಗಡಿಗಳಲ್ಲಿ ಚಿನ್ನಾಭರಣ ಖರೀದಿ ಜೋರಾಗಿ ನಡೆದಿತ್ತು.

ನಾನು ಮನೆಯಲ್ಲಿ 10 ಲಕ್ಷ ಹಣ ವಿಟ್ಟು ಕೊಂಡಿದ್ದೆ, ಹೀಗಾಗಿ 100 ಗ್ರಾಂ ಚಿನ್ನ ಖರೀದಿಸಿದೆ ಇದಕ್ಕಾಗಿ ನಾನು 3.5 ಲಕ್ಷ ಹಣ ನೀಡಿದ್ದೇನೆ. ಇದನ್ನು ಕೊಂಡು ಕೊಳ್ಳಲು ಬ್ಯಾಂಕ್ ವಿವರ, ಪ್ಯಾನ್ ಕಾರ್ಡ್ ನೀಡಿದ್ದೇನೆ ಎಂದು ಮಹಿಳೆಯೊಬ್ಬರು ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

2 ಲಕ್ಷದವರೆಗೆ ಖರೀದಿಸಲು ಪ್ಯಾನ್ ಕಾರ್ಡ್ ಕಡ್ಡಾಯವಿಲ್ಲ, ಎಲ್ಲಾ ಹಣ ವರ್ಗಾವಣೆಗಳು ಕಾನೂನಾತ್ಮಕವಾಗಿಯೇ ನಡೆದಿವೆ. ಗ್ರಾಹಕರು ಹಿಂದು ಮಂದು ನೋಡದೇ ಶೇ.5ರಷ್ಟು ಹೆಚ್ಚಿನ ಹಣ ಪಾವತಿಸಿದ್ದಾರೆ ಎಂದು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ತಿಳಿಸಿದೆ.

ಸಾವಿರ ಐನೂರರ ನೋಟು ನಿಷೇಧ ಎಂದು ತಿಳಿದ ಮೇಲೆ ಬೆಂಗಳೂರಿನ ರಾಜಾ ಮಾರ್ಕೆಟ್ ನ ಹಲವು ಅಂಗಡಿಗಳು ಮುಚ್ಚಿದ್ದವು. ಹೀಗಾಗಿ ಹೆಚ್ಚಿನ ವ್ಯಾಪಾರ ನಡೆದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT