ಶಾಸಕ ಚಿಕ್ಕಮಾಧು 
ರಾಜ್ಯ

ಬಂಡಿಪುರ ನಿಷೇಧಿತ ಅರಣ್ಯದಲ್ಲಿ ಖಾಸಗಿ ವಾಹನ ಚಲಾಯಿಸಿ ಶಾಸಕ ಮತ್ತು ಬೆಂಬಲಿಗರ ಗೂಂಡಾಗಿರಿ

ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ ಬಂಡೀಪುರ ಅರಣ್ಯದೊಳಗೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ, ಆದರೆ ಎಚ್. ಡಿ ಕೋಟೆ ಶಾಸಕ ...

ಮೈಸೂರು: ದೇಶದಲ್ಲೇ ಅತಿ ಹೆಚ್ಚಿನ ಪ್ರಮಾಣದ ಹುಲಿಗಳನ್ನು ಹೊಂದಿರುವ ಬಂಡೀಪುರ ಅರಣ್ಯದೊಳಗೆ ಖಾಸಗಿ ವಾಹನಗಳಿಗೆ ಪ್ರವೇಶವಿಲ್ಲ, ಆದರೆ ಎಚ್. ಡಿ ಕೋಟೆ ಶಾಸಕ ಚಿಕ್ಕಮಾದು ಮತ್ತವರ ಸಹಚರರು ನಿಷೇಧಿತ ಅರಣ್ಯ ಪ್ರದೇಶದಲ್ಲಿ ಖಾಸಗಿ ವಾಹನ ಕೊಂಡೊಯ್ದು ನಿಯಮ ಉಲ್ಲಂಘಿಸಿ ಗೂಂಡಾಗಿರಿ ಪ್ರದರ್ಶಿಸಿದ್ದಾರೆ.

ಭಾನುವಾರ ಬೇಲದ ಕುಪ್ಪೆ ಮಹದೇಶ್ವರ ಜಾತ್ರೆ ಆಯೋಜಿಸಲಾಗಿತ್ತು. ಮಳೆಯಿಲ್ಲದೇ ಅರಣ್ಯ ಪ್ರದೇಶ ಒಣಗಿರುವುದರಿಂದ ಯಾವುದೇ ಬೆಂಕಿ ಅನಾಹುತ ಸಂಭವಿಸದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ಖಾಸಗಿ ವಾಹನಗಳನ್ನು ಒಳಗಡೆ ಬಿಡದಿರಲು ನಿರ್ಧರಿಸಿದ್ದರು.

ಹೀಗಾಗಿ ಭಕ್ತಾದಿಗಳು ತಮ್ಮ ವಾಹನಗಳನ್ನು ಹೊರಗಡೆ ನಿಲ್ಲಿಸಿ ಅರಣ್ಯ ಇಲಾಖೆ ಕೆಎಸ್ ಆರ್ ಟಿಸಿ ಬಸ್ ನಲ್ಲಿ ತೆರಳಲು ಸಿದ್ಧರಾಗಿದ್ದರು. ಆದರೆ ಈ ವೇಳೆ ಅಲ್ಲಿಗೆ ಬಂದ ಶಾಸಕ ಚಿಕ್ಕಮಾಧು ಮತ್ತು ಅವರ  ಸುಮಾರು 300 ಬೆಂಬಲಿಗರು ಖಾಸಗಿ ವಾಹನಗಳನ್ನು ಬಿಡುವಂತೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪದಿದ್ದಾಗ ಅಲ್ಲಿ ಹಾಕಿದ್ದ ಬ್ಯಾರಿಕೇಡ್ ಗಳನ್ನು ತೆರವುಗೊಳಿಸಿ ಏಕಾಏಕಿ ಖಾಸಗಿ ವಾಹನಗಳ ಮೂಲಕ ಒಳಗೆ ತೆರಳಿದ್ದಾರೆ. ಅಲ್ಲಿಂದ ದೇವಾಲಯಕ್ಕೆ ತೆರಲಿದ ನಂತರ ನಿಷೇಧಿಸಿರುವ  ಧ್ವನಿ ವರ್ಧಕಗಳನ್ನು ಬಳಸುವಂತೆ ದೇವಸ್ಥಾನದ ಆಯೋಜಕರಿಗೆ ತಿಳಿಸಿದ್ದಾರೆ.

ಸ್ಥಳೀಯರನ್ನು ಹೊರತು ಪಡಿಸಿ ಹೊರಗಡೆಯಿಂದ ಬರುವ ಭಕ್ತಾದಿಗಳ ಖಾಸಗಿ ವಾಹನ ಪ್ರವೇಶಿಸಲು ನಿಯಮ ಸಡಿಲ ಮಾಡುವಂತೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಆದರೆ ಸ್ಥಳೀಯ ಅರಣ್ಯ ಇಲಾಖೆ ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಹೀಗಾಗಿ ನಾನು ಅರಣ್ಯ ಇಲಾಖೆ ಅಧಿಕಾರಿ ಪರಮೇಶ್ ಜೊತೆ ವಾಗ್ವಾದ ನಡೆಸಿದೆ. ನಾನು ಸಿಎಂ ಸಿದ್ದರಾಮಯ್ಯ ಅವರ ಆದೇಶದಂತೆ ನಡೆದುಕೊಂಡಿದ್ದೇನೆ ಎಂದು ಚಿಕ್ಕಮಾದು ತಿಳಿಸಿದ್ದಾರೆ.

ನಿಯಮಗಳನ್ನು ಸಡಿಲಗೊಳಿಸಬೇಕೆಂದು ಸರ್ಕಾರದಿಂದ ಅವರು ಔಪಚಾರಿಕ ಆದೇಶ ತಂದಿದ್ದರು. ಆದರೆ ನಾವು ಅರಣ್ಯ ಇಲಾಖೆ ಕಾಯಿದಯ ಪ್ರಕಾರ ನಡೆದುಕೊಳ್ಳೂಬೇಕಿರುವುದು ನಮ್ಮ ಕರ್ತವ್ಯ. ಶಾಸಕರು ಮತ್ತವರ ಬೆಂಬಲಿಗರು ಬ್ಯಾರಿಕೇಡ್ ಸರಿಸಿ ಖಾಸಗಿ ವಾಹನಗಳ ಮೂಲಕ ಒಳ ಪ್ರವೇಶಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಸ್ಥಳೀಯ ಅರಣ್ಯಾಧಿಕಾರಿ ಪರಮೇಶ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT