ನಾಗರಹಾವು ಕನ್ನಡ ಚಿತ್ರ 
ರಾಜ್ಯ

ತೆರೆ ಮೇಲೆ ಬಂದ 'ವಿಷ್ಣು' ನೋಡಿ ಅಭಿಮಾನಿಗೆ ಹೃದಯಾಘಾತ: ಸಾವು

ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಮರು ಸೃಷ್ಟಿಯಿರುವ 'ನಾಗರಹಾವು' ಚಿತ್ರ ಪ್ರದರ್ಶನದ ವೇಳೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ನೋಡಿದ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ...

ಬೆಂಗಳೂರು: ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಮರು ಸೃಷ್ಟಿಯಿರುವ 'ನಾಗರಹಾವು' ಚಿತ್ರ ಪ್ರದರ್ಶನದ ವೇಳೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ನೋಡಿದ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಸುಬ್ರಮಣಿ ಅಲಿಯಾಸ್ ರಾಜು (31) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜಯನಗರ ನಿವಾಸಿಯಾಗಿರುವ ಸುಬ್ರಮಣಿಯವರು, ನಿನ್ನೆಯಷ್ಟೇ ಬಿಡುಗಡೆಗೊಂಡ ನಾಗರಹಾವು ಚಿತ್ರವನ್ನು ಮಾರ್ನಿಂಗ್ ಶೋನಲ್ಲಿ ನೋಡಿದ್ದಾರೆ. ವಿಷ್ಣು ಅವರನ್ನು ನೋಡಬೇಕೆಂಬ ಆಸೆಗೆ ಮತ್ತೆ ಚಿತ್ರ ನೋಡಲು ಮಧ್ಯಾಹ್ನ ಸ್ವಾಗತ್ ಗರುಡಾ ಮಾಲ್ ಗೆ ಹೋಗಿದ್ದಾರೆ.

ನಾಗರಹಾವು ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ ಬಳಸಿ ನಾಗರಹಾವು ರೂಪದಲ್ಲಿ ತೆರೆ ಮೇಲೆ ತರಲಾಗಿದೆ. ಚಿತ್ರದ ಕಡೆಯ 10 ನಿಮಿಷದಲ್ಲಿ ಈ ಗ್ರಾಫಿಕ್ ದೃಶ್ಯಾವಳಿಗಳು ಮೂಡುತ್ತದೆ. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ತೆರೆಯ ಮೇಲೆ ಬರುತ್ತಾರೆ.

ವಿಷ್ಣುವರ್ಧನ್ ಅವರನ್ನು ತೆರೆಮೇಲೆ ಕಾಣುತ್ತಿದ್ದಂತೆ ಸುಬ್ರಮಣಿಯವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ, ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸುಬ್ರಮಣಿಯವರನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು, Video!

ಅಧಿಕೃತವಾಗಿ 'ಹೊಸ ಗರ್ಲ್‌ ಫ್ರೆಂಡ್‌' ಪರಿಚಯಿಸಿದ ಹಾರ್ದಿಕ್ ಪಾಂಡ್ಯ! Video

2nd Test, Day 2: ವಿಂಡೀಸ್ ವಿರುದ್ಧ ಶತಕ, ವಿರಾಟ್ ಕೊಹ್ಲಿ ದಾಖಲೆ ಸರಿಗಟ್ಟಿದ ಶುಭ್ ಮನ್ ಗಿಲ್!

BBk 12: ಟಾಸ್ಕ್‌ನೇ ಮರೆತುಬಿಟ್ರಾ ಅಸುರಾಧಿಪತಿ ಕಾಕ್ರೋಚ್? ಬಾಗಿಲನ್ನು ಓಪನ್ ಮಾಡಿ ಎಂದ ಕಿಚ್ಚ ಸುದೀಪ್!

SCROLL FOR NEXT