ನಾಗರಹಾವು ಕನ್ನಡ ಚಿತ್ರ 
ರಾಜ್ಯ

ತೆರೆ ಮೇಲೆ ಬಂದ 'ವಿಷ್ಣು' ನೋಡಿ ಅಭಿಮಾನಿಗೆ ಹೃದಯಾಘಾತ: ಸಾವು

ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಮರು ಸೃಷ್ಟಿಯಿರುವ 'ನಾಗರಹಾವು' ಚಿತ್ರ ಪ್ರದರ್ಶನದ ವೇಳೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ನೋಡಿದ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ...

ಬೆಂಗಳೂರು: ಸಾಹಸ ಸಿಂಹ ದಿವಂಗತ ಡಾ.ವಿಷ್ಣುವರ್ಧನ್ ಅವರ ಮರು ಸೃಷ್ಟಿಯಿರುವ 'ನಾಗರಹಾವು' ಚಿತ್ರ ಪ್ರದರ್ಶನದ ವೇಳೆ ತೆರೆ ಮೇಲೆ ವಿಷ್ಣುವರ್ಧನ್ ಅವರನ್ನು ನೋಡಿದ ಅಭಿಮಾನಿಯೊಬ್ಬರಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಶುಕ್ರವಾರ ನಡೆದಿದೆ.

ಸುಬ್ರಮಣಿ ಅಲಿಯಾಸ್ ರಾಜು (31) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಜಯನಗರ ನಿವಾಸಿಯಾಗಿರುವ ಸುಬ್ರಮಣಿಯವರು, ನಿನ್ನೆಯಷ್ಟೇ ಬಿಡುಗಡೆಗೊಂಡ ನಾಗರಹಾವು ಚಿತ್ರವನ್ನು ಮಾರ್ನಿಂಗ್ ಶೋನಲ್ಲಿ ನೋಡಿದ್ದಾರೆ. ವಿಷ್ಣು ಅವರನ್ನು ನೋಡಬೇಕೆಂಬ ಆಸೆಗೆ ಮತ್ತೆ ಚಿತ್ರ ನೋಡಲು ಮಧ್ಯಾಹ್ನ ಸ್ವಾಗತ್ ಗರುಡಾ ಮಾಲ್ ಗೆ ಹೋಗಿದ್ದಾರೆ.

ನಾಗರಹಾವು ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ವಿಷ್ಣುವರ್ಧನ್ ಅವರನ್ನು ಗ್ರಾಫಿಕ್ ಬಳಸಿ ನಾಗರಹಾವು ರೂಪದಲ್ಲಿ ತೆರೆ ಮೇಲೆ ತರಲಾಗಿದೆ. ಚಿತ್ರದ ಕಡೆಯ 10 ನಿಮಿಷದಲ್ಲಿ ಈ ಗ್ರಾಫಿಕ್ ದೃಶ್ಯಾವಳಿಗಳು ಮೂಡುತ್ತದೆ. ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರು ತೆರೆಯ ಮೇಲೆ ಬರುತ್ತಾರೆ.

ವಿಷ್ಣುವರ್ಧನ್ ಅವರನ್ನು ತೆರೆಮೇಲೆ ಕಾಣುತ್ತಿದ್ದಂತೆ ಸುಬ್ರಮಣಿಯವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ, ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡು, ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾರೆ. ಕೂಡಲೇ ಸುಬ್ರಮಣಿಯವರನ್ನು ಸ್ನೇಹಿತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

Punishment: 5 ವರ್ಷದ ಬಾಲಕನನ್ನು ಮರಕ್ಕೆ ನೇತು ಹಾಕಿದ ಶಿಕ್ಷಕಿ!

SCROLL FOR NEXT