ರಾಜ್ಯ

ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಮೇಲೆ ಕಿಡಿಗೇಡಿಗಳಿಂದ ಮಸಿ ದಾಳಿ

Vishwanath S

ಬೆಂಗಳೂರು: ಪ್ರೆಸ್ ಕ್ಲಬ್ ನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರು ರಹಸ್ಯವಾಗಿ ವಿವಾಹವಾಗಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಲಿದ್ದ ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಅವರ ಮುಖಕ್ಕೆ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ.

ಈ ಬಗ್ಗೆ ಮಾತನಾಡಿರುವ ಪದ್ಮನಾಭ ಪ್ರಸನ್ನ ಅವರು ಯಡಿಯೂರಪ್ಪ ಬೆಂಬಲಿಗರು ನನ್ನ ಮೇಲೆ ಮಸಿ ಬಳಿದಿದ್ದಾರೆ ಎಂದು ಆರೋಪಿಸಿದ್ದಾರೆ. ಇವರಿಬ್ಬರ ರಹಸ್ಯ ಮದುವೆ ವಿಚಾರ ಬಹಿರಂಗಪಡಿಸಲು ಆಗಮಿಸುತ್ತಿದ್ದಾಗ ನನ್ನ ಮೇಲೆ ಮಸಿ ಬಳಿದಿದ್ದಾರೆ ಎಂದು ಹೇಳಿದರು.

ಬಿಎಸ್ ಯಡಿಯೂರಪ್ಪನವರ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿದ ಪದ್ಮನಾಭ ಅವರು ಯಡಿಯೂರಪ್ಪನವರೇ ನಾಮರ್ದನಂತೆ ವರ್ತಿಸಬೇಡಿ. ಎದುರಿನಿಂದ ಬಂದು ಚೂರಿ ಹಾಕಿ. ಇದು ನಿಮಗೆ ನಾಚಿಕೆಗೇಡು ಎಂದು ಕಿಡಿಕಾರಿದ್ದಾರೆ.

SCROLL FOR NEXT