ಸಾಂದರ್ಭಿಕ ಚಿತ್ರ 
ರಾಜ್ಯ

ವರ್ತೂರು ಪ್ರಕಾಶ್ ಫಾರ್ಮ್ ನ 49 ಸೋಂಕಿತ ಹಸುಗಳಿಗೆ ದಯಾಮರಣ, ಹಾಲು ಮಾರಾಟಕ್ಕೆ ನಿಷೇಧ

ಕೋಲಾರ ತಾಲೂಕಿನ ಜಂಗಾನಹಳ್ಳಿಯಲ್ಲಿರುವ ಶಾಸಕ ವರ್ತೂರು ಪ್ರಕಾಶ್ ಅವರ ಫಾರ್ಮ್ ನಲ್ಲಿರುವ ಸುಮಾರು 998 ಹಸುಗಳ ಪೈಕಿ 49 ಹಸುಗಳು....

ಕೋಲಾರ: ಕೋಲಾರ ತಾಲೂಕಿನ ಜಂಗಾನಹಳ್ಳಿಯಲ್ಲಿರುವ ಶಾಸಕ ವರ್ತೂರು ಪ್ರಕಾಶ್ ಅವರ ಫಾರ್ಮ್ ನಲ್ಲಿರುವ ಸುಮಾರು 998 ಹಸುಗಳ ಪೈಕಿ 49 ಹಸುಗಳು "ಬ್ರೂಸಿಲ್ಲೋಸಿಸ್" ಎಂಬ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದು, ಅವುಗಳ ದಯಾಮರಣಕ್ಕೆ ಪಶುಸಂಗೋಪನಾ ಸಚಿವ ಎ.ಮಂಜು ಅವರು ಆದೇಶಿದ್ದಾರೆ. ಅಲ್ಲದೆ ಹಾಲು ಮಾರಾಟಕ್ಕೂ ನಿಷೇಧ ಹೇರಲಾಗಿದೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಎ.ಮಂಜು ಅವರು, ವರ್ತೂರ್ ಪ್ರಕಾಶ್ ಅವರ ಫಾರ್ಮ್ ನ 49 ಹಸುಗಳಿಗೆ ಸೋಂಕಿರುವುದು ದೃಢಪಟ್ಟಿದೆ. ಹೀಗಾಗಿ ಹಸುಗಳಿಗೆ ದಯಾಮರಣ ನೀಡಲು ನಿರ್ಧರಿಸಲಾಗಿದೆ ಎಂದರು,
ಈ ಬ್ಯಾಕ್ಟೀರಿಯಾ ಹಸುವಿನಿಂದ ಮನುಷ್ಯರಿಗೂ ಹರಡುತ್ತದೆ. ಹಾಗಾಗಿ ಫಾರ್ಮ್ ಹೌಸ್ ನಲ್ಲಿರುವ ಇತರೆ ಹಸುಗಳ ಹಾಲು ಮಾರಾಟ ಸಹ ನಿಷೇಧಿಸಲಾಗಿದೆ. ಅಲ್ಲದೇ ಬ್ಯಾಕ್ಟೀರಿಯಾ ಪತ್ತೆಯಾಗಿರುವ ಹಸುಗಳಿಗೆ ದಯಾಮರಣ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. 
ಇನ್ನು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಚೆನ್ನಕೇಶವ ಅವರ ನೇತೃತ್ವದ ಅಧಿಕಾರಿಗಳ ತಂಡ ಶಾಸಕರ ಫಾರ್ಮ್ ಗೆ ಭೇಟಿ ನೀಡಿದ್ದು, ಸೋಂಕು ತಗುಲಿರುವ ಹಸುಗಳ ರಕ್ತ ಮಾದರೆ ಪಡೆದು, ಪರೀಕ್ಷೆಗೆ ಒಳಪಡಿಸುತ್ತಿದ್ದಾರೆ.
ವರ್ತೂರ್‌ ಪ್ರಕಾಶ್‌ ಅವರ ತೋಟದಲ್ಲಿರುವ ಎಲ್ಲಾ ಹಸುಗಳಿಗೂ "ಬ್ರೂಸಿಲ್ಲೋಸಿಸ್" ವೈರಸ್‌ ಸೋಂಕು ತಗುಲಿದೆ ಎಂದು 2015ರ ಅಕ್ಟೋಬರ್‌ಲ್ಲಿ ನಡೆಸಿದ ಮಾದರಿಯಲ್ಲಿ ದೃಢಪಟ್ಟಿದೆ. ಶಾಸಕರು ಬೆಗ್ಲಿ ಹಾಲು ಉತ್ಪಾದಕರ ಸೊಸೈಟಿಯಿಂದ ಪ್ರತಿ ದಿನ 3 ಸಾವಿರ ಲೀಟರ್‌ ಹಾಲನ್ನು ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಕ್ಕೆ ಸರಬರಾಜು ಮಾಡುತ್ತಿರುವುದರಿಂದ ಜನರಿಗೂ ಸೋಂಕು ಹರಡುವ ಭೀತಿ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ರಿಪಬ್ಲಿಕನ್‌ ಪಾರ್ಟಿ ಆಫ್ ಇಂಡಿಯಾ ಶನಿವಾರ ಜಿಪಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Delhi Red Fort blast: ಉಗ್ರ ಉಮರ್‌ಗೆ ಆಶ್ರಯ ನೀಡಿದ್ದ ಆರೋಪಿ ಬಂಧನ, NIA ವಿಚಾರಣೆ

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

SCROLL FOR NEXT