ರಂಜಿತ್ ಮತ್ತು ಸೌಮ್ಯ 
ರಾಜ್ಯ

ಎರಡು ರಾಜ್ಯಗಳ ಕಾವೇರಿ ಹೋರಾಟ: ಎರಡು ವಧುಗಳ ಮದುವೆ ಕಥೆ

ಕಾವೇರಿ ಗಲಭೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸರು 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು,...

ಹೊಸೂರು: ಕಾವೇರಿ ಗಲಭೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬೆಂಗಳೂರು ನಗರ ಪೊಲೀಸರು 16 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಿದ್ದು, ಇದರ ಬಿಸಿ ಮದುವೆಗೆ ತಯಾರಾಗಿದ್ದ ವಧು ವರರಿಗೂ ತಟ್ಟಿದೆ.

ರಂಜಿತ್ ಮತ್ತು ಸೌಮ್ಯ ಬುಧವಾರ ಬೆಳಗ್ಗೆ ಕರ್ನಾಟಕದಲ್ಲೇ ವಿವಾಹ ನಡೆಯಬೇಕಿತ್ತು.ಆದರೆ ಬೆಂಗಳೂರಿನಲ್ಲಿ ಉಂಟಾದ ಕಾವೇರಿ ಗಲಾಟೆಯಿಂದಾಗಿ ಇಲ್ಲಿ ಮದುವೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಅವರು ತಮ್ಮ ಮದುವೆಯನ್ನು ತಮಿಳುನಾಡಿನಲ್ಲೇ ಮಾಡಿಕೊಳ್ಳಲು ಯೋಜಿಸಿದ್ದರು. ಆದರೆ ತಮ್ಮ ಊರಿಗೆ ತೆರಳಲು ಬಸ್ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಜೆಸಿ ನಗರದಿಂದ ಅತ್ತಿಬೆಲೆ ವರೆಗೂ ಬಸ್ ನಲ್ಲಿ ಬಂದ ಜೋಡಿ, ಅಲ್ಲಿಂದ ತಮಿಳುನಾಡು ಮತ್ತು ಕರ್ನಾಟಕದ ಗಡಿ ಭಾಗದ ವರೆಗೂ ಆಟೋದಗಲ್ಲಿ ಬಂದು, ಅಲ್ಲಿಂದ ಸುಮಾರು 300 ಮೀಟರ್ ವರೆಗೂ ಬಸ್ ಗಾಗಿ ನಡೆದು ಕೊಂಡೇ ಸಾಗಿದ ದೃಶ್ಯ ಕಂಡು ಬಂತು. ನಂತರ ಕರ್ನಾಟಕ ಗಡಿ ದಾಟಿ ತಮಿಳುನಾಡು ಬಸ್ ನಿಲ್ದಾಣಕ್ಕೆ ಸೇರಿ ಅಲ್ಲಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು.

ಇನ್ನೂ ಮತ್ತೊಬ್ಬ ವಧು ಪ್ರೇಮ ಎಂಬಾಕೆಗೆ ವಿವಾಹ ನಿಶ್ಚಯವಾಗಿದ್ದು, ಬುಧುವಾರ ತಮಿಳುನಾಡಿನ ವಾನಿಯಂಬಾಡಿಯಲ್ಲಿ ಮದುವೆ ಏರ್ಪಾಡಿಗಿತ್ತು.  ಆಕೆ ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಲು ಹರಸಾಹಸ ಪಡಬೇಕಾಯಿತು. ಯಾವುದೇ ವಾಹನ ಸಿಗದ ಕಾರಣ ಪ್ರೇಮಾ ಕರ್ನಾಟಕ- ತಮಿಳುನಾಡು ಬಾರ್ಡರ್ ವರೆಗೂ ನಡೆದುಕೊಂಡೇ ಸಾಗಬೇಕಾದ ಅನಿವಾರ್ಯತೆ ಎದುರಾಯಿತು.

ಒಟ್ಟಿನಲ್ಲಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಹೋರಾಟದಿಂದಾಗಿ ವಧು ವರರಿಗೂ ಬಿಸಿ ಮುಟ್ಟಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT